ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದೇವ ಬಂಧನಕ್ಕೆ ಒತ್ತಾಯ

Last Updated 20 ನವೆಂಬರ್ 2019, 16:24 IST
ಅಕ್ಷರ ಗಾತ್ರ

ಬೀದರ್‌: ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ರಾಮಸ್ವಾಮಿ ಪೇರಿಯಾರ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಯೋಗ ಗುರು ಬಾಬಾ ರಾಮದೇವ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸತ್ಯ ಶೋಧಕ ಸಮಾಜದ ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಮಾಜದಲ್ಲಿನ ಅನಿಷ್ಠ ಪದ್ಧತಿ ಹಾಗೂ ಮೂಢನಂಬಿಕೆಗಳ ವಿರುದ್ಧ ಪೆರಿಯಾರ್ ಜಾಗೃತಿ ಮೂಡಿಸಿದ್ದಾರೆ. ಡಾ. ಅಂಬೇಡ್ಕರ್‌ ಸಂವಿಧಾನ ರಚಿಸಿ ದೇಶಕ್ಕೆ ಸಮರ್ಪಿಸಿದ್ದಾರೆ. ಆದರೆ, ರಾಮದೇವ ಬಾಬಾ ಅವರು ಪೆರಿಯಾರ್ ಹಾಗೂ ಅಂಬೇಡ್ಕರ್‌ ಅನುಯಾಯಿಗಳು ಸಾಂಸ್ಕೃತಿಕ ಭಯೋತ್ಪಾದಕರು ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಸತ್ಯ ಶೋಧಕ ಸಮಾಜದ ಗೌರವಾಧ್ಯಕ್ಷ ಬಾಬುರಾವ್ ಹೊನ್ನಾ, ಅಧ್ಯಕ್ಷ ವೀರಶೆಟ್ಟಿ ದೀನೆ, ಪ್ರಧಾನ ಕಾರ್ಯದರ್ಶಿ ಸರಫರಾಜ್‌ ಹಾಸ್ಮಿ, ಶೇಖ್ ಅನ್ಸಾರ್, ಶ್ರೀಪತಿ ದೀನೆ, ಅಲಿ ಅಹಮ್ಮದ್‌ ಖಾನ್‌, ನಜೀರ್ ಅಹಮ್ಮದ್‌, ಶಫಾಯತ್ ಅಲಿ, ನನ್ನೂಸಾಬ ಟಿ.ಎಂ., ಅರುಣ ಪಾಟೀಲ, ಭೀಮಣ್ಣ ಭಾವಿಕಟ್ಟಿ, ಆನಂದ ರೆಡ್ಡಿ, ಮುನಿರೋದ್ದಿನ್‌, ಪಪ್ಪುರಾಜ್‌, ಆರ್.ಪಿ.ರಾಜಾ, ಸುನೀಲ ವರ್ಮಾ, ಭೀಮಶಾ ನಾಟೆಕರ್‌, ಚಕ್ರಧನ ಜೀವಧಾರ, ಎಂ.ಡಿ. ಫಸಿ, ಎಂ.ಡಿ.ಅಲೀಂ, ಎಂ.ಡಿ.ಸಮಿ ಹಾಗೂ ನರಸಿಂಗ್‌ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT