‘ಸ್ಮಶಾನ ಭೂಮಿ ಅತಿಕ್ರಮಣ ತೆರವು ಮಾಡಿ, ಆ ಭೂಮಿಗೆ ತಂತಿ ಬೇಲಿ ಹಾಕಿ ಅಲ್ಲಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಜನಸಂಖ್ಯೆ ಜಾಸ್ತಿ ಆಗಿರುವುದರಿಂದ ಈಗಿರುವ ಸ್ಮಶಾನ ಭೂಮಿ ಸಾಕಾಗುತ್ತಿಲ್ಲ. ಹೀಗಾಗಿ ಊರ ಹೊರಗೆ 10 ಎಕರೆ ಜಮೀನು ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆ. ಈ ಬೇಡಿಕೆ ಈಡೇರುವ ತನಕ ಧರಣಿ ಮುಂದುವರಿಯಲಿದೆ’ ಎಂದು ಪ್ರತಿಭಟನಾ ನಿರತ ಶರಣಪ್ಪ ಪಾಟೀಲ, ಅನೀಲ ಬೇಲೂರೆ, ಶಂಕು ನಿಸ್ಪತೆ, ಮಹೇಶ ಸ್ವಾಮಿ, ರಜನಿ ದಾಮಾ, ಅಮಿತ ಶಿವಪೂಜೆ ಇತರರು ಹೇಳಿದರು.