ಬೀದರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಾಯಿ ಹರ್ಪಾಲ್ ಕೌರ್ ಇಲ್ಲಿಯ ಗುರುದ್ವಾರಕ್ಕೆ ಭೇಟಿ ನೀಡಿ ಗುರುನಾನಕ್ ಝೀರಾ ಹಾಗೂ ಗುರುಗ್ರಂಥ ಸಾಹೀಬ ದರ್ಶನ ಪಡೆದರು.
ಭಗವಂತ್ ಮಾನ್ ಅವರು ಮುಖ್ಯಮಂತ್ರಿಯಾದ ನಂತರ ಹರ್ಪಾಲ್ ಕೌರ್ ಧಾರ್ಮಿಕ ಯಾತ್ರೆ ಆರಂಭಿಸಿದ್ದು, ಮಹಾರಾಷ್ಟ್ರದ ನಾಂದೇಡದ ಗುರುದ್ವಾರಕ್ಕೆ ಭೇಟಿಕೊಟ್ಟು ದರ್ಶನ ಪಡೆದ ನಂತರ ಬೀದರ್ಗೆ ಬಂದಿದ್ದರು. ಜನವಾಡದ ಗುರುದ್ವಾರಕ್ಕೆ ಭೇಟಿಕೊಟ್ಟ ನಂತರ ಮಧ್ಯಾಹ್ನ ಬೀದರ್ಗೆ ಬಂದರು.
ಗುರುಗ್ರಂಥ ಸಾಹೀಬ ದರ್ಶನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಗುರುದ್ವಾರದ ಲಂಗರ್ನಲ್ಲಿ ಪ್ರಸಾದ ಸ್ವೀಕರಿಸಿದರು. ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್ ಸಿಂಗ್ ಹಾಗೂ ಮನಪ್ರೀತ್ ಸಿಂಗ್ ಅವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಹರ್ಪಾಲ್ ಕೌರ್ ಅವರನ್ನು ಅಭಿನಂದಿಸಿದರು.