<p><strong>ಹುಲಸೂರ:</strong> ಸಮೀಪದ ತುಗಾಂವ್ (ಹಾ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಯಾತ್ರಾ ಉತ್ಸವಕ್ಕೆ ಈ ವರ್ಷ ಪಾರದರ್ಶಕತೆ, ಶಿಸ್ತಿನ ಆಯಾಮ ಸಿಕ್ಕಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಯಾತ್ರಾ ಉತ್ಸವ ಈ ಸಲ ಜ.14ರಿಂದ 19 ರವರೆಗೆ ನಡೆಯಲಿದ್ದು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.</p>.<p>ಯಾತ್ರೆಯ ವೇಳೆ ಹಣಕಾಸಿನ ಅಕ್ರಮಗಳು ನಡೆಯದಂತೆ ಈ ವರ್ಷ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಕ್ಯೂಆರ್ ಕೋಡ್ (ಸ್ಕ್ಯಾನರ್) ಮೂಲಕ ದೇಣಿಗೆ ಸಲ್ಲಿಸುವ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಭಕ್ತರ ದೇಣಿಗೆ ನೇರವಾಗಿ ದೇವಸ್ಥಾನ ಟ್ರಸ್ಟ್ ಖಾತೆಗೆ ಜಮೆಯಾಗಿದೆ. ಅನಧಿಕೃತ ವಸೂಲಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.</p>.<p>ಮೊಬೈಲ್ ಫೋನ್ ಹೊಂದಿರದವರು ಅಥವಾ ನೆಟ್ವರ್ಕ್ ಸಮಸ್ಯೆ ಎದುರಿಸುವ ಭಕ್ತರು ಯಾವುದೇ ವ್ಯಕ್ತಿಗಳಿಗೆ ದೇಣಿಗೆ ನೀಡದೆ ದೇವಸ್ಥಾನದ ಮುಂಭಾಗದಲ್ಲಿ ಸ್ಥಾಪಿಸಲಾದ ಅಧಿಕೃತ ದೇಣಿಗೆ ಪೆಟ್ಟಿಗೆಯಲ್ಲೇ ಹಣ ಹಾಕಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.</p>.<p>‘ಯಾತ್ರಾ ಉತ್ಸವದ ಪಾವಿತ್ರ್ಯ ಕಾಪಾಡುವುದು, ಭಕ್ತರ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಉದ್ದೇಶ. ದೇಣಿಗೆಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬಂದರೆ ದೇವಸ್ಥಾನದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಭಕ್ತರು ಟ್ರಸ್ಟ್ ನಿರ್ಧಾರಕ್ಕೆ ಸಹಕಾರ ನೀಡಬೇಕು’ ಎಂದು ಈ ಕುರಿತು ಟ್ರಸ್ಟ್ ಅಧ್ಯಕ್ಷ ರಾಜ್ಕುಮಾರ್ ಪಾಟೀಲ ಅವರು ಮನವಿ ಮಾಡಿದ್ದಾರೆ.</p>.<p>ಹೊಸ ವ್ಯವಸ್ಥೆಗೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಗಿದ್ದು ಯಾತ್ರೆಯ ಸಮಯದಲ್ಲಿ ನಡೆಯುತ್ತಿದ್ದ ಆರೋಪ–ಪ್ರತ್ಯಾರೋಪಗಳಿಗೆ ತೆರೆ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ಸಮೀಪದ ತುಗಾಂವ್ (ಹಾ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಯಾತ್ರಾ ಉತ್ಸವಕ್ಕೆ ಈ ವರ್ಷ ಪಾರದರ್ಶಕತೆ, ಶಿಸ್ತಿನ ಆಯಾಮ ಸಿಕ್ಕಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಯಾತ್ರಾ ಉತ್ಸವ ಈ ಸಲ ಜ.14ರಿಂದ 19 ರವರೆಗೆ ನಡೆಯಲಿದ್ದು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.</p>.<p>ಯಾತ್ರೆಯ ವೇಳೆ ಹಣಕಾಸಿನ ಅಕ್ರಮಗಳು ನಡೆಯದಂತೆ ಈ ವರ್ಷ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಕ್ಯೂಆರ್ ಕೋಡ್ (ಸ್ಕ್ಯಾನರ್) ಮೂಲಕ ದೇಣಿಗೆ ಸಲ್ಲಿಸುವ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಭಕ್ತರ ದೇಣಿಗೆ ನೇರವಾಗಿ ದೇವಸ್ಥಾನ ಟ್ರಸ್ಟ್ ಖಾತೆಗೆ ಜಮೆಯಾಗಿದೆ. ಅನಧಿಕೃತ ವಸೂಲಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.</p>.<p>ಮೊಬೈಲ್ ಫೋನ್ ಹೊಂದಿರದವರು ಅಥವಾ ನೆಟ್ವರ್ಕ್ ಸಮಸ್ಯೆ ಎದುರಿಸುವ ಭಕ್ತರು ಯಾವುದೇ ವ್ಯಕ್ತಿಗಳಿಗೆ ದೇಣಿಗೆ ನೀಡದೆ ದೇವಸ್ಥಾನದ ಮುಂಭಾಗದಲ್ಲಿ ಸ್ಥಾಪಿಸಲಾದ ಅಧಿಕೃತ ದೇಣಿಗೆ ಪೆಟ್ಟಿಗೆಯಲ್ಲೇ ಹಣ ಹಾಕಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.</p>.<p>‘ಯಾತ್ರಾ ಉತ್ಸವದ ಪಾವಿತ್ರ್ಯ ಕಾಪಾಡುವುದು, ಭಕ್ತರ ನಂಬಿಕೆಯನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಉದ್ದೇಶ. ದೇಣಿಗೆಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬಂದರೆ ದೇವಸ್ಥಾನದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಭಕ್ತರು ಟ್ರಸ್ಟ್ ನಿರ್ಧಾರಕ್ಕೆ ಸಹಕಾರ ನೀಡಬೇಕು’ ಎಂದು ಈ ಕುರಿತು ಟ್ರಸ್ಟ್ ಅಧ್ಯಕ್ಷ ರಾಜ್ಕುಮಾರ್ ಪಾಟೀಲ ಅವರು ಮನವಿ ಮಾಡಿದ್ದಾರೆ.</p>.<p>ಹೊಸ ವ್ಯವಸ್ಥೆಗೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಗಿದ್ದು ಯಾತ್ರೆಯ ಸಮಯದಲ್ಲಿ ನಡೆಯುತ್ತಿದ್ದ ಆರೋಪ–ಪ್ರತ್ಯಾರೋಪಗಳಿಗೆ ತೆರೆ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>