<p><strong>ಆಣದೂರು (ಜನವಾಡ):</strong> ಮಳೆ ನೀರು ಸಂರಕ್ಷಣೆ ಕುರಿತು ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಭಗತ್ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಹಾಗೂ ಕೊಳಾರ(ಕೆ) ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.<br />ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.<br />ಮಳೆ ನೀರು ಸಂಗ್ರಹಕ್ಕೆ ಪ್ರತಿ ಮನೆಗಳಲ್ಲೂ ಇಂಗು ಗುಂಡಿ ತೋಡಬೇಕು. ಮನೆ ಛಾವಣಿ ಮೇಲೆ ಬೀಳುವ ಮಳೆ ನೀರು ಗುಂಡಿಗೆ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ನೆಹರೂ ಯುವ ಕೇಂದ್ರದ ಲಕ್ಷ್ಮಣ ಪಿ. ಮಚ್ಕೊರೆ ಹೇಳಿದರು.<br />ಮಳೆ ನೀರನ್ನು ಬಟ್ಟೆ ತೊಳೆಯಲು, ಕೈತೋಟಕ್ಕೆ, ಮರ, ಗಿಡಗಳಿಗೆ ಬಳಸಬಹುದು ಎಂದು ತಿಳಿಸಿದರು.<br />ನೀರು ಬಹಳ ಅಮೂಲ್ಯವಾಗಿದೆ. ಕಾರಣ, ಹಿತ ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಹೇಳಿದರು.<br />ಕಲಾವಿದರಾದ ಸಾರಿಕಾ, ರಜನಿಕಾ, ಉದಿತ್ ರಾಠೋಡ್, ಬೀರಗೊಂಡ ಮೇತ್ರೆ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಣದೂರು (ಜನವಾಡ):</strong> ಮಳೆ ನೀರು ಸಂರಕ್ಷಣೆ ಕುರಿತು ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಭಗತ್ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಹಾಗೂ ಕೊಳಾರ(ಕೆ) ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.<br />ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.<br />ಮಳೆ ನೀರು ಸಂಗ್ರಹಕ್ಕೆ ಪ್ರತಿ ಮನೆಗಳಲ್ಲೂ ಇಂಗು ಗುಂಡಿ ತೋಡಬೇಕು. ಮನೆ ಛಾವಣಿ ಮೇಲೆ ಬೀಳುವ ಮಳೆ ನೀರು ಗುಂಡಿಗೆ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ನೆಹರೂ ಯುವ ಕೇಂದ್ರದ ಲಕ್ಷ್ಮಣ ಪಿ. ಮಚ್ಕೊರೆ ಹೇಳಿದರು.<br />ಮಳೆ ನೀರನ್ನು ಬಟ್ಟೆ ತೊಳೆಯಲು, ಕೈತೋಟಕ್ಕೆ, ಮರ, ಗಿಡಗಳಿಗೆ ಬಳಸಬಹುದು ಎಂದು ತಿಳಿಸಿದರು.<br />ನೀರು ಬಹಳ ಅಮೂಲ್ಯವಾಗಿದೆ. ಕಾರಣ, ಹಿತ ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಹೇಳಿದರು.<br />ಕಲಾವಿದರಾದ ಸಾರಿಕಾ, ರಜನಿಕಾ, ಉದಿತ್ ರಾಠೋಡ್, ಬೀರಗೊಂಡ ಮೇತ್ರೆ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>