ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂರಕ್ಷಣೆ: ಬೀದಿ ನಾಟಕ ಪ್ರದರ್ಶನ

Last Updated 25 ಮಾರ್ಚ್ 2023, 13:20 IST
ಅಕ್ಷರ ಗಾತ್ರ

ಆಣದೂರು (ಜನವಾಡ): ಮಳೆ ನೀರು ಸಂರಕ್ಷಣೆ ಕುರಿತು ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಭಗತ್‍ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಹಾಗೂ ಕೊಳಾರ(ಕೆ) ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.
ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಮಳೆ ನೀರು ಸಂಗ್ರಹಕ್ಕೆ ಪ್ರತಿ ಮನೆಗಳಲ್ಲೂ ಇಂಗು ಗುಂಡಿ ತೋಡಬೇಕು. ಮನೆ ಛಾವಣಿ ಮೇಲೆ ಬೀಳುವ ಮಳೆ ನೀರು ಗುಂಡಿಗೆ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ನೆಹರೂ ಯುವ ಕೇಂದ್ರದ ಲಕ್ಷ್ಮಣ ಪಿ. ಮಚ್ಕೊರೆ ಹೇಳಿದರು.
ಮಳೆ ನೀರನ್ನು ಬಟ್ಟೆ ತೊಳೆಯಲು, ಕೈತೋಟಕ್ಕೆ, ಮರ, ಗಿಡಗಳಿಗೆ ಬಳಸಬಹುದು ಎಂದು ತಿಳಿಸಿದರು.
ನೀರು ಬಹಳ ಅಮೂಲ್ಯವಾಗಿದೆ. ಕಾರಣ, ಹಿತ ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಹೇಳಿದರು.
ಕಲಾವಿದರಾದ ಸಾರಿಕಾ, ರಜನಿಕಾ, ಉದಿತ್ ರಾಠೋಡ್, ಬೀರಗೊಂಡ ಮೇತ್ರೆ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT