<p><strong>ಬೀದರ್:</strong> ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಸಾಧಾರಣದಿಂದ ಕೂಡಿದ ಜಿಟಿ ಜಿಟಿ ಮಳೆಯು ಜನ ಜೀವನ ಅಸ್ತವ್ಯಸ್ತಗೊಳಿಸಿತು.</p>.<p>ಬೆಳಿಗ್ಗೆ ಆಗಸ ಶುಭ್ರವಾಗಿದ್ದರೂ, ಮಧ್ಯಾಹ್ನದ ವೇಳೆಗೆ ದಟ್ಟ ಮೊಡಗಳು ಆವರಿಸಿಕೊಂಡವು. ಮಧ್ಯಾಹ್ನ ಆರಂಭದಲ್ಲಿ ಕೆಲ ಕಾಲ ಮಳೆ ಹನಿಗಳು ಉದುರಿ ಮರೆಯಾದವು. ನಂತರ ಸಾಧಾರಣ ಮಳೆ ಸುರಿಯಿತು. ಅನಂತರ ಜಿಟಿ ಜಿಟಿಯಾಗಿ ಮುಂದುವರಿಯಿತು.</p>.<p>ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರಿದರು. ಅನೇಕರು ಕೊಡೆಗಳನ್ನು ಹಿಡಿದುಕೊಂಡು ಓಡಾಡಿದರು. ಬೀದರ್ ತಾಲ್ಲೂಕಿನ ಚಿಕ್ಕಪೇಟೆ, ಮರಕಲ್, ಜನವಾಡ, ಔರಾದ್ ತಾಲ್ಲೂಕಿನ ಕೌಠಾ, ಸಂತಪುರ, ಭಾಲ್ಕಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.</p>.<p class="Briefhead">ಸಂತಪುರ, ಚಿಂತಾಕಿ ಹೋಬಳಿಯಲ್ಲಿ ಸಾಧಾರಣ ಮಳೆ</p>.<p>ಔರಾದ್: ತಾಲ್ಲೂಕಿನ ಸಂತಪುರ ಹಾಗೂ ಚಿಂತಾಕಿ ಹೋಬಳಿಯಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.<br />ಸಂತಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 1 ಗಂಟೆಗೂ ಹೆಚ್ಚು ಮಳೆ ಸುರಿದಿದೆ.</p>.<p>ಚಿಂತಾಕಿ, ವಡಗಾಂವ್, ಗುಡಪಳ್ಳಿ, ಮುಸ್ತಾಪುರ, ಕೌಠಾ, ಹೆಡಗಾಪುರ ಗ್ರಾಮಗಳಲ್ಲಿಯೂ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಸೋಯಾ ಬಿತ್ತನೆಗೆ ಇದು ಸಕಾಲ. ಬಿತ್ತನೆ ಕಾಲಕ್ಕೆ ಬೀಜ ಹೆಚ್ಚು ಆಳ ಹೋಗದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ಸಲಹೆ ನೀಡಿದ್ದಾರೆ.</p>.<p class="Briefhead">ತುಂತುರು ಮಳೆ</p>.<p>ಭಾಲ್ಕಿ: ವಿವಿಧೆಡೆ ಉತ್ತಮ ಮಳೆ ಪ್ರಜಾವಾಣಿ ವಾರ್ತೆ ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ಉತ್ತಮ ಮಳೆಯಾಗಿದೆ.</p>.<p>ಧಾರಜವಾಡಿ, ಕದಲಾಬಾದ್, ತಳವಾಡ, ಕರಡ್ಯಾಳ, ಕೋನಮೇಳಕುಂದಾ, ಹಲಬರ್ಗಾ, ಭಾತಂಬ್ರಾ, ಕಲವಾಡಿ, ನಿಡೇಬನ, ಆನಂದವಾಡಿ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಆಗಿದೆ. ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಮಳೆ ಬಾರದ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಸಾಧಾರಣದಿಂದ ಕೂಡಿದ ಜಿಟಿ ಜಿಟಿ ಮಳೆಯು ಜನ ಜೀವನ ಅಸ್ತವ್ಯಸ್ತಗೊಳಿಸಿತು.</p>.<p>ಬೆಳಿಗ್ಗೆ ಆಗಸ ಶುಭ್ರವಾಗಿದ್ದರೂ, ಮಧ್ಯಾಹ್ನದ ವೇಳೆಗೆ ದಟ್ಟ ಮೊಡಗಳು ಆವರಿಸಿಕೊಂಡವು. ಮಧ್ಯಾಹ್ನ ಆರಂಭದಲ್ಲಿ ಕೆಲ ಕಾಲ ಮಳೆ ಹನಿಗಳು ಉದುರಿ ಮರೆಯಾದವು. ನಂತರ ಸಾಧಾರಣ ಮಳೆ ಸುರಿಯಿತು. ಅನಂತರ ಜಿಟಿ ಜಿಟಿಯಾಗಿ ಮುಂದುವರಿಯಿತು.</p>.<p>ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರಿದರು. ಅನೇಕರು ಕೊಡೆಗಳನ್ನು ಹಿಡಿದುಕೊಂಡು ಓಡಾಡಿದರು. ಬೀದರ್ ತಾಲ್ಲೂಕಿನ ಚಿಕ್ಕಪೇಟೆ, ಮರಕಲ್, ಜನವಾಡ, ಔರಾದ್ ತಾಲ್ಲೂಕಿನ ಕೌಠಾ, ಸಂತಪುರ, ಭಾಲ್ಕಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.</p>.<p class="Briefhead">ಸಂತಪುರ, ಚಿಂತಾಕಿ ಹೋಬಳಿಯಲ್ಲಿ ಸಾಧಾರಣ ಮಳೆ</p>.<p>ಔರಾದ್: ತಾಲ್ಲೂಕಿನ ಸಂತಪುರ ಹಾಗೂ ಚಿಂತಾಕಿ ಹೋಬಳಿಯಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.<br />ಸಂತಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 1 ಗಂಟೆಗೂ ಹೆಚ್ಚು ಮಳೆ ಸುರಿದಿದೆ.</p>.<p>ಚಿಂತಾಕಿ, ವಡಗಾಂವ್, ಗುಡಪಳ್ಳಿ, ಮುಸ್ತಾಪುರ, ಕೌಠಾ, ಹೆಡಗಾಪುರ ಗ್ರಾಮಗಳಲ್ಲಿಯೂ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಸೋಯಾ ಬಿತ್ತನೆಗೆ ಇದು ಸಕಾಲ. ಬಿತ್ತನೆ ಕಾಲಕ್ಕೆ ಬೀಜ ಹೆಚ್ಚು ಆಳ ಹೋಗದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ಸಲಹೆ ನೀಡಿದ್ದಾರೆ.</p>.<p class="Briefhead">ತುಂತುರು ಮಳೆ</p>.<p>ಭಾಲ್ಕಿ: ವಿವಿಧೆಡೆ ಉತ್ತಮ ಮಳೆ ಪ್ರಜಾವಾಣಿ ವಾರ್ತೆ ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ಉತ್ತಮ ಮಳೆಯಾಗಿದೆ.</p>.<p>ಧಾರಜವಾಡಿ, ಕದಲಾಬಾದ್, ತಳವಾಡ, ಕರಡ್ಯಾಳ, ಕೋನಮೇಳಕುಂದಾ, ಹಲಬರ್ಗಾ, ಭಾತಂಬ್ರಾ, ಕಲವಾಡಿ, ನಿಡೇಬನ, ಆನಂದವಾಡಿ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಆಗಿದೆ. ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಮಳೆ ಬಾರದ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>