‘ಕೋವಿಡ್ ಲಾಕ್ಡೌನ್ ಕಾರಣ ರಾಜ್ಯ ಸರ್ಕಾರ ಕೃಷಿಕರು ಹಾಗೂ ಕೂಲಿ ಕಾರ್ಮಿಕರು, ಕುಶಲ ಕರ್ಮಿಗಳಿಗೆ ಘೋಷಿಸಿರುವ ಪ್ಯಾಕೇಜ್ ಸಮರ್ಪಕ ಆಗಿಲ್ಲ. ಇವರು ನೀಡಿರುವ ಪರಿಹಾರದ ಹಣ ಯಾತಕ್ಕೂ ಸಾಕಾಗುವುದಿಲ್ಲ. ಅಲ್ಲದೆ, ಎಲ್ಲ ವರ್ಗದ ಶ್ರಮಿಕರಿಗೆ ಪರಿಹಾರ ದೊರೆತಿಲ್ಲ. ಇದಕ್ಕಿಂತ ಮುಖ್ಯವೆಂದರೆ, ಕೋವಿಡ್ ತಪಾಸಣೆ, ಚಿಕಿತ್ಸೆಯಲ್ಲಿ ನಿರ್ಲಕ್ಷ ತೋರಲಾಗುತ್ತಿದೆ. ಇನ್ನು ಮುಂದಾದರೂ ಉತ್ತಮ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸಂದೀಪ ಬುಯೆ ಮಾತನಾಡಿ,‘ಕೊರೊನಾ ಸೋಂಕಿತರಿಗೆ ವೈದ್ಯರು ಸೂಚಿಸಿರುವ ಜ್ವರ ಮತ್ತು ಕೆಮ್ಮಿನ ಐದು ತರಹದ ಮಾತ್ರೆ ಹಾಗೂ ಔಷಧವನ್ನು ಕಿಟ್ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಸದ್ಯಕ್ಕೆ 500 ಕಿಟ್ಗಳು ಲಭ್ಯ ಇವೆ. ಕಿಟ್ ಅಗತ್ಯವಿದ್ದವರು 9611221242, 7795099971, 9880138831, 7019950778 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು. ವೈದ್ಯರ ಸಲಹೆ ಅಗತ್ಯವಿದ್ದರೆ 7204527379, 9986926365 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು’ ಎಂದು ಅವರು ಕೇಳಿಕೊಂಡರು.