ಅರಬಸಾಬ್ ಅವರ ಸಮಾಧಿ ಪಕ್ಕದಲ್ಲಿರುವ ಹನುಮಾನ ಮಂದಿರ ಇದ್ದು, ಹನುಮಾನ್ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮುಸ್ಲಿಂ ಸಮುದಾಯದವರು ಮೆರವಣಿಗೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಳ್ಳುತ್ತಾರೆ. ದಾಸೋಹ ಮಾಡುತ್ತಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಮರು ತಮ್ಮ ಅಕ್ಕ–ಪಕ್ಕದ ಹಿಂದುಗಳನ್ನು ಕರೆದು ಊಟ ಬಡಿಸುತ್ತಾರೆ. ಹಿಂದುಗಳು ಸಹ ಇಫ್ತಾರ್ ಕೂಟ ಆಯೋಜಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.