<p><strong>ಬೀದರ್:</strong> ಹಿಂದೂಗಳ ಹಬ್ಬ ಹರಿದಿನಗಳು ಇನ್ನೂ ಒಂದು ತಿಂಗಳು ಇವೆ. ತರಕಾರಿ ಬೆಲೆ ಸ್ಥಿರವಾಗಿರಬಹುದು ಅಂದುಕೊಂಡಿದ್ದ ಗ್ರಾಹಕರ ಲೆಕ್ಕಾಚಾರ ಬುಡಮೇಲಾಗಿದೆ. ಮಳೆಯ ಕಾರಣ ಹೊರ ಜಿಲ್ಲೆಗಳಿಂದ ಹೆಚ್ಚು ತರಕಾರಿ ಬಂದಿಲ್ಲ. ತರಕಾರಿ ಬೆಲೆ ಈ ವಾರ ಪ್ರತಿ ಕ್ವಿಂಟಲ್ಗೆ ₹ 500 ರಿಂದ ₹ 1 ಸಾವಿರ ವರೆಗೆ ಹೆಚ್ಚಾಗಿದೆ.</p>.<p>ಬಕ್ರೀದ್ ಸಮೀಪಿಸುತ್ತಿರುವ ಕಾರಣ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಔಷಧೀಯ ಗುಣ ಹೊಂದಿದ ಹಾಗೂ ಅಡುಗೆ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 2 ಸಾವಿರ ಏರಿಕೆಯಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್ಗೆ ₹ 10 ಸಾವಿರ ಇದ್ದ ಬೆಲೆ ₹12 ಸಾವಿರಕ್ಕೆ ಏರಿಕೆ ಕಂಡಿದೆ.</p>.<p>ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಆಲೂಗಡ್ಡೆ ಹಾಗೂ ಹಿರೇಕಾಯಿ ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ತರಕಾರಿ ರಾಜ ಬದನೆಕಾಯಿ ತನ್ನ ಘನತೆ ಹೆಚ್ಚಿಸಿಕೊಂಡರೆ, ಮೆಣಸಿನ ಕಾಯಿ ಗ್ರಾಹಕರ ಪಾಲಿಗೆ ಮತ್ತಷ್ಟು ಖಾರವಾಗಿದೆ. ಹಸಿ ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ, ಎಲೆಕೋಸು, ಗಜ್ಜರಿ ಹಾಗೂ ಬೀಟ್ರೂಟ್ ಬೆಲೆ ಪ್ರತಿಕ್ವಿಂಟಲ್ಗೆ ₹ 500 ಹೆಚ್ಚಾಗಿದೆ.</p>.<p>ಬೀನ್ಸ್ಗೆ ಎಲ್ಲ ತರಕಾರಿಗಿಂತಲೂ ಹೆಚ್ಚಿನ ಬೆಲೆ ಇದೆ. ಕಳೆದ ವಾರ ₹ 1,800 ಇದ್ದ ಬೆಲೆ ₹ 1,700ಗೆ ಇಳಿದಿದೆ. ಬೀನ್ಸ್, ಸಾಮಾನ್ಯ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇಲ್ಲ. ಹೂಕೋಸು ಬೆಲೆ ₹ 1,500, ಈರುಳ್ಳಿ, ಟೊಮೆಟೊ. ಸಬ್ಬಸಗಿ, ಮೆಂತೆ ಸೊಪ್ಪು ಹಾಗೂ ಕರಿಬೇವು ಬೆಲೆ ಪ್ರತಿ ₹ 500 ಕಡಿಮೆಯಾಗಿದೆ. ಈ ವಾರ ಕೊತಂಬರಿ ಹಾಗೂ ಪಾಲಕ್ ಸ್ಥಿರವಾಗಿದೆ.</p>.<p>ಬೆಳಗಾವಿ ಜಿಲ್ಲೆಯಿಂದ ಗಿಳಿ ಹಸಿರು ಹಾಗೂ ಎಲೆ ಹಸಿರಿನ ಬಣ್ಣದ ಎರಡು ಬಗೆಯ ಹಸಿ ಮೆಣಸಿನಕಾಯಿ ಬೀದರ್ ಮಾರುಕಟ್ಟೆಗೆ ಬಂದಿದೆ. ನಾಸಿಕ್ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್ನಿಂದ ಬೀನ್ಸ್, ತೊಂಡೆಕಾಯಿ ಹಾಗೂ ಹಿರೇಕಾಯಿ ಆವಕವಾಗಿದೆ.</p>.<p>ಬದನೆಕಾಯಿ, ತೊಂಡೆಕಾಯಿ, ಕೊತಂಬರಿ, ಕರಿಬೇವು, ಸಬ್ಬಸಗಿ ಸೊಪ್ಪು ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಿಂದ ಬಂದಿದೆ. ಬೆಲೆ ಹೆಚ್ಚಳ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.</p>.<p><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ</strong><br /><strong>ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ</strong><br /><br />ಈರುಳ್ಳಿ 20-25, 20-25<br />ಮೆಣಸಿನಕಾಯಿ 70-80, 80-85<br />ಆಲೂಗಡ್ಡೆ 35-40, 40-50<br />ಎಲೆಕೋಸು 15-20, 20-25<br />ಬೆಳ್ಳುಳ್ಳಿ 90-100, 100-120<br />ಗಜ್ಜರಿ 40-45, 40-50<br />ಬೀನ್ಸ್ 170-180, 160-170<br />ಬದನೆಕಾಯಿ 40-45, 40-50<br />ಮೆಂತೆ ಸೊಪ್ಪು 40-50, 40-45<br />ಹೂಕೋಸು 20-25, 30-40<br />ಸಬ್ಬಸಗಿ 40-50, 40-45<br />ಬೀಟ್ರೂಟ್ 35-40, 40-45<br />ತೊಂಡೆಕಾಯಿ 40-45, 40-50<br />ಕರಿಬೇವು 25-30, 20-25<br />ಕೊತಂಬರಿ 20-25, 20-25<br />ಟೊಮೆಟೊ 20-25, 15-20<br />ಪಾಲಕ್ 40-50, 45-50<br />ಬೆಂಡೆಕಾಯಿ 35-40, 40-45<br />ಹಿರೇಕಾಯಿ 30-30, 30-40<br />ನುಗ್ಗೆಕಾಯಿ 70-75, 70-80</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಹಿಂದೂಗಳ ಹಬ್ಬ ಹರಿದಿನಗಳು ಇನ್ನೂ ಒಂದು ತಿಂಗಳು ಇವೆ. ತರಕಾರಿ ಬೆಲೆ ಸ್ಥಿರವಾಗಿರಬಹುದು ಅಂದುಕೊಂಡಿದ್ದ ಗ್ರಾಹಕರ ಲೆಕ್ಕಾಚಾರ ಬುಡಮೇಲಾಗಿದೆ. ಮಳೆಯ ಕಾರಣ ಹೊರ ಜಿಲ್ಲೆಗಳಿಂದ ಹೆಚ್ಚು ತರಕಾರಿ ಬಂದಿಲ್ಲ. ತರಕಾರಿ ಬೆಲೆ ಈ ವಾರ ಪ್ರತಿ ಕ್ವಿಂಟಲ್ಗೆ ₹ 500 ರಿಂದ ₹ 1 ಸಾವಿರ ವರೆಗೆ ಹೆಚ್ಚಾಗಿದೆ.</p>.<p>ಬಕ್ರೀದ್ ಸಮೀಪಿಸುತ್ತಿರುವ ಕಾರಣ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಔಷಧೀಯ ಗುಣ ಹೊಂದಿದ ಹಾಗೂ ಅಡುಗೆ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 2 ಸಾವಿರ ಏರಿಕೆಯಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್ಗೆ ₹ 10 ಸಾವಿರ ಇದ್ದ ಬೆಲೆ ₹12 ಸಾವಿರಕ್ಕೆ ಏರಿಕೆ ಕಂಡಿದೆ.</p>.<p>ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಆಲೂಗಡ್ಡೆ ಹಾಗೂ ಹಿರೇಕಾಯಿ ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ತರಕಾರಿ ರಾಜ ಬದನೆಕಾಯಿ ತನ್ನ ಘನತೆ ಹೆಚ್ಚಿಸಿಕೊಂಡರೆ, ಮೆಣಸಿನ ಕಾಯಿ ಗ್ರಾಹಕರ ಪಾಲಿಗೆ ಮತ್ತಷ್ಟು ಖಾರವಾಗಿದೆ. ಹಸಿ ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ನುಗ್ಗೆಕಾಯಿ, ಎಲೆಕೋಸು, ಗಜ್ಜರಿ ಹಾಗೂ ಬೀಟ್ರೂಟ್ ಬೆಲೆ ಪ್ರತಿಕ್ವಿಂಟಲ್ಗೆ ₹ 500 ಹೆಚ್ಚಾಗಿದೆ.</p>.<p>ಬೀನ್ಸ್ಗೆ ಎಲ್ಲ ತರಕಾರಿಗಿಂತಲೂ ಹೆಚ್ಚಿನ ಬೆಲೆ ಇದೆ. ಕಳೆದ ವಾರ ₹ 1,800 ಇದ್ದ ಬೆಲೆ ₹ 1,700ಗೆ ಇಳಿದಿದೆ. ಬೀನ್ಸ್, ಸಾಮಾನ್ಯ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇಲ್ಲ. ಹೂಕೋಸು ಬೆಲೆ ₹ 1,500, ಈರುಳ್ಳಿ, ಟೊಮೆಟೊ. ಸಬ್ಬಸಗಿ, ಮೆಂತೆ ಸೊಪ್ಪು ಹಾಗೂ ಕರಿಬೇವು ಬೆಲೆ ಪ್ರತಿ ₹ 500 ಕಡಿಮೆಯಾಗಿದೆ. ಈ ವಾರ ಕೊತಂಬರಿ ಹಾಗೂ ಪಾಲಕ್ ಸ್ಥಿರವಾಗಿದೆ.</p>.<p>ಬೆಳಗಾವಿ ಜಿಲ್ಲೆಯಿಂದ ಗಿಳಿ ಹಸಿರು ಹಾಗೂ ಎಲೆ ಹಸಿರಿನ ಬಣ್ಣದ ಎರಡು ಬಗೆಯ ಹಸಿ ಮೆಣಸಿನಕಾಯಿ ಬೀದರ್ ಮಾರುಕಟ್ಟೆಗೆ ಬಂದಿದೆ. ನಾಸಿಕ್ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್ನಿಂದ ಬೀನ್ಸ್, ತೊಂಡೆಕಾಯಿ ಹಾಗೂ ಹಿರೇಕಾಯಿ ಆವಕವಾಗಿದೆ.</p>.<p>ಬದನೆಕಾಯಿ, ತೊಂಡೆಕಾಯಿ, ಕೊತಂಬರಿ, ಕರಿಬೇವು, ಸಬ್ಬಸಗಿ ಸೊಪ್ಪು ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಿಂದ ಬಂದಿದೆ. ಬೆಲೆ ಹೆಚ್ಚಳ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.</p>.<p><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ</strong><br /><strong>ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ</strong><br /><br />ಈರುಳ್ಳಿ 20-25, 20-25<br />ಮೆಣಸಿನಕಾಯಿ 70-80, 80-85<br />ಆಲೂಗಡ್ಡೆ 35-40, 40-50<br />ಎಲೆಕೋಸು 15-20, 20-25<br />ಬೆಳ್ಳುಳ್ಳಿ 90-100, 100-120<br />ಗಜ್ಜರಿ 40-45, 40-50<br />ಬೀನ್ಸ್ 170-180, 160-170<br />ಬದನೆಕಾಯಿ 40-45, 40-50<br />ಮೆಂತೆ ಸೊಪ್ಪು 40-50, 40-45<br />ಹೂಕೋಸು 20-25, 30-40<br />ಸಬ್ಬಸಗಿ 40-50, 40-45<br />ಬೀಟ್ರೂಟ್ 35-40, 40-45<br />ತೊಂಡೆಕಾಯಿ 40-45, 40-50<br />ಕರಿಬೇವು 25-30, 20-25<br />ಕೊತಂಬರಿ 20-25, 20-25<br />ಟೊಮೆಟೊ 20-25, 15-20<br />ಪಾಲಕ್ 40-50, 45-50<br />ಬೆಂಡೆಕಾಯಿ 35-40, 40-45<br />ಹಿರೇಕಾಯಿ 30-30, 30-40<br />ನುಗ್ಗೆಕಾಯಿ 70-75, 70-80</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>