‘₹32.5 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಮಳಿಗೆಗಳು ಸದ್ಯ ಪಾಳು ಬಿದ್ದಂತಾಗಿವೆ. ಇದರಿಂದ ಪುರಸಭೆಗೂ ಲಾಭ ಇಲ್ಲ. ನಾಗರಿಕರಿಗೂ ಉಪಯೋಗವಿಲ್ಲ. ಸರ್ಕಾರದ ಹಣ ಪೋಲಾದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಮಳಿಗೆಗಳನ್ನು ಉದ್ಘಾಟಿಸಿ ವರ್ತಕರಿಗೆ ಬಾಡಿಗೆಗೆ ಕೊಡಬೇಕು. ಇದರಿಂದ ಪುರಸಭೆಗೆ ಆದಾಯ ಹೆಚ್ಚುತ್ತದೆ. ಬೀದಿ ವ್ಯಾಪಾರಿಗಳು ಸಣ್ಣ ಅಂಗಡಿ ನಡೆಸುವವರಿಗೆ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ’ ಎಂದು ವರ್ತಕರಾದ ರವಿ, ಶಂಕರ್ ಹಾಗೂ ಇತರರು ಆಗ್ರಹಿಸಿದ್ದಾರೆ.