ಹುಮನಾಬಾದ್: ಸೋಮವಾರ ನಸುಕಿನ ಜಾವ ಪಟ್ಟಣದ ಒಟ್ಟು ಐದು ವಿವಿಧ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.
ಈ ಹಿನ್ನೆಲೆ ಹುಮನಾಬಾದ್ ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಪಟ್ಟಣದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.
ಪಟ್ಟಣದ ಕಲ್ಲೂರ ರಸ್ತೆಯಲ್ಲಿರುವ ಪತಜಂಜಲಿ ಕೇಂದ್ರ, ಎಸ್.ಎಸ್. ಕಂಪ್ಯೂಟರ್ ಕೇಂದ್ರ, ತೆಂಗಿನ ಅಂಗಡಿ ಸೇರಿದಂತೆ ಒಟ್ಟು 5 ಅಂಗಡಿಗಳ ಬಾಗಿಲು ಮುರಿದಿದ್ದಾರೆ. ಆದರೆ ಅಂಗಡಿಗಳಲ್ಲಿನ ಯಾವುದೇ ಬೆಲೆ ಬಾಳುವ ವಸ್ತುಗಳ ಕಳವು ಆಗಿಲ್ಲ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.