ಗಾಳಿ, ಗುಡುಗು ಸಿಡಿಲಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಜನ ರಾತ್ರಿ ಪೂರ್ತಿ ಎಚ್ಚರವಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಹಲವರ ತಗಡಿ ಮನೆಗಳಲ್ಲಿ ಎಲ್ಲೆಂದರಲ್ಲಿ ನೀರ ಹನಿಗಳು ಸೋರುತ್ತಿರುವುದರಿಂದ ಹಾಸಿಗೆಗಳು ಒದ್ದೆಯಾಗಿದ್ದಕ್ಕೆ ಎಚ್ಚರವಾಗಿ ಕೂಡಬೇಕಾದ ಸ್ಥತಿ ಉಂಟಾಗಿತ್ತು. ಬೆಳಗ್ಗೆಯೂ ವಿದ್ಯುತ್ ಇಲ್ಲದಕ್ಕೆ ದಿನಬಳಕೆಯ ನೀರಿಗೂ ಸಮಸ್ಯೆ ಎದುರಿಸುವಂತಾಯಿತು. ಬೆಳೆ ಹಾನಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಆದರೆ, ಗಾಳಿ ಜೋರಾಗಿ ಬೀಸಿದ್ದರಿಂದ ಮಾವಿನ ಗಿಡಗಳ ಮಾವಿನ ಹಣ್ಣುಗಳು ಉದುರಿ ಬಿದ್ದ ಸಾಧ್ಯತೆ ಇದೆ.