ಜನವಾಡ: ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹನಿ ಬೀಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡದಲ್ಲಿ ಸೋಮವಾರ ‘ಉಡಾನ್ ಉತ್ಸವ’ ಶೀರ್ಷಿಕೆಯಡಿ ವಸ್ತು ಪ್ರದರ್ಶನ ನಡೆಯಿತು.
1ರಿಂದ 8ನೇ ತರಗತಿ ವರೆಗಿನ ಮಕ್ಕಳು ಸ್ವತಃ ಸಿದ್ಧಪಡಿಸಿದ ವಿಜ್ಞಾನ, ಗಣಿತ, ಕನ್ನಡ, ಇಂಗ್ಲಿಷ್ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾದರಿಗಳು ಎಲ್ಲರ ಗಮನ ಸೆಳೆದವು.
ಡಯಟ್ ಪ್ರಾಚಾರ್ಯ ಮಹಮ್ಮದ್ ಗುಲ್ಶನ್, ಪಿಡಿಒ ಶರತ್ ಅಭಿಮನ್ಯು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಅಧಿಕಾರಿ ಗೋಪಾಲರಾವ್ ಪಡವಳಕರ್, ಸಮೂಹ ಸಂಪನ್ಮೂಲ ಅಧಿಕಾರಿ ಶ್ರೀದೇವಿ ಹೂಗಾರ, ನಿರಂತರ ಫೌಂಡೇಷನ್ ವ್ಯವಸ್ಥಾಪಕ ನಿರಂಜನ ಶೀಲವಂತ, ಶಾಲೆಯ ಪ್ರಾಚಾರ್ಯೆ ಲಕ್ಷ್ಮಿ ಮುಗಳಿ, ಪ್ರೀತಿ ಖೇಣಿ ಇದ್ದರು.