ಅಭ್ಯರ್ಥಿಯ ಅಭಿಪ್ರಾಯ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಕೆಲಸಕ್ಕೆ ಸೇರಿಕೊಳ್ಳದೆ ತಂದೆ–ತಾಯಿಯ ಬಯಕೆಯಂತೆ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ಕೈಗೊಂಡು ದೆಹಲಿಯ ವಾಜಿರಾಮ್ ಆ್ಯಂಡ್ ರವಿ ಸೆಂಟರ್ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದೇನೆ. ನಂತರ ಐದು ವರ್ಷ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಿ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಓದಿದೆ. ದಿನದ 12 ಗಂಟೆ ಸತತವಾಗಿ ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದಕ್ಕೆ ಕೆಲ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕುವ ಸಾಧ್ಯತೆಯಿದೆ. ಪ್ರಾಮಾಣಿಕವಾಗಿ ಸೇವೆಗೈದು ಸಮಾಜದಲ್ಲಿ ಎಲ್ಲ ರೀತಿಯಿಂದ ಪರಿವರ್ತನೆ ತರುವ ಬಯಕೆ ಇದೆ.