<p>ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಲಖನ್ ಸಿಂಗ್ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023 ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 756ನೇ ರ್ಯಾಂಕ್ ಪಡೆದಿದ್ದಾರೆ.</p>.<p>ಯುಪಿಎಸ್ಸಿ ರ್ಯಾಂಕ್ ವಿಜೇತರ ವಿವರ</p>.<p>ರ್ಯಾಂಕ್ ಸಂಖ್ಯೆ-756</p>.<p>ಹೆಸರು: ಲಖನ್ ಸಿಂಗ್ ದಿಲದಾರಸಿಂಗ್ ರಾಠೋರ್</p>.<p>ವಿದ್ಯಾರ್ಹತೆ: ಬಿ.ಇ (ಸಿವಿಲ್)</p>.<p>ಹಾಲಿ ಹುದ್ದೆ: ಇಲ್ಲ</p>.<p>ಊರು: ಶಿವಾಜಿನಗರ ಓಣಿ, ಬಸವಕಲ್ಯಾಣ</p>.<p>ಕೌಟುಂಬಿಕ ಹಿನ್ನೆಲೆ: ಲಖನ್ ಸಿಂಗ್ ಅವರ ತಂದೆ ದಿಲದಾರಸಿಂಗ್ ಬಸವಕಲ್ಯಾಣ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ನಿವೃತ್ತರಾಗಿದ್ದರು. 18 ತಿಂಗಳ ಹಿಂದೆ ನಿಧನರಾಗಿದ್ದಾರೆ. ತಾಯಿ ಸೀಮಾ ಗೃಹಿಣಿಯಾಗಿದ್ದಾರೆ.</p>.<p>ಅಭ್ಯರ್ಥಿಯ ಅಭಿಪ್ರಾಯ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಕೆಲಸಕ್ಕೆ ಸೇರಿಕೊಳ್ಳದೆ ತಂದೆ–ತಾಯಿಯ ಬಯಕೆಯಂತೆ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ಕೈಗೊಂಡು ದೆಹಲಿಯ ವಾಜಿರಾಮ್ ಆ್ಯಂಡ್ ರವಿ ಸೆಂಟರ್ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದೇನೆ. ನಂತರ ಐದು ವರ್ಷ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಿ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಓದಿದೆ. ದಿನದ 12 ಗಂಟೆ ಸತತವಾಗಿ ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದಕ್ಕೆ ಕೆಲ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕುವ ಸಾಧ್ಯತೆಯಿದೆ. ಪ್ರಾಮಾಣಿಕವಾಗಿ ಸೇವೆಗೈದು ಸಮಾಜದಲ್ಲಿ ಎಲ್ಲ ರೀತಿಯಿಂದ ಪರಿವರ್ತನೆ ತರುವ ಬಯಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಲಖನ್ ಸಿಂಗ್ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023 ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 756ನೇ ರ್ಯಾಂಕ್ ಪಡೆದಿದ್ದಾರೆ.</p>.<p>ಯುಪಿಎಸ್ಸಿ ರ್ಯಾಂಕ್ ವಿಜೇತರ ವಿವರ</p>.<p>ರ್ಯಾಂಕ್ ಸಂಖ್ಯೆ-756</p>.<p>ಹೆಸರು: ಲಖನ್ ಸಿಂಗ್ ದಿಲದಾರಸಿಂಗ್ ರಾಠೋರ್</p>.<p>ವಿದ್ಯಾರ್ಹತೆ: ಬಿ.ಇ (ಸಿವಿಲ್)</p>.<p>ಹಾಲಿ ಹುದ್ದೆ: ಇಲ್ಲ</p>.<p>ಊರು: ಶಿವಾಜಿನಗರ ಓಣಿ, ಬಸವಕಲ್ಯಾಣ</p>.<p>ಕೌಟುಂಬಿಕ ಹಿನ್ನೆಲೆ: ಲಖನ್ ಸಿಂಗ್ ಅವರ ತಂದೆ ದಿಲದಾರಸಿಂಗ್ ಬಸವಕಲ್ಯಾಣ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ನಿವೃತ್ತರಾಗಿದ್ದರು. 18 ತಿಂಗಳ ಹಿಂದೆ ನಿಧನರಾಗಿದ್ದಾರೆ. ತಾಯಿ ಸೀಮಾ ಗೃಹಿಣಿಯಾಗಿದ್ದಾರೆ.</p>.<p>ಅಭ್ಯರ್ಥಿಯ ಅಭಿಪ್ರಾಯ: ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಕೆಲಸಕ್ಕೆ ಸೇರಿಕೊಳ್ಳದೆ ತಂದೆ–ತಾಯಿಯ ಬಯಕೆಯಂತೆ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ಕೈಗೊಂಡು ದೆಹಲಿಯ ವಾಜಿರಾಮ್ ಆ್ಯಂಡ್ ರವಿ ಸೆಂಟರ್ನಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದೇನೆ. ನಂತರ ಐದು ವರ್ಷ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಿ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಓದಿದೆ. ದಿನದ 12 ಗಂಟೆ ಸತತವಾಗಿ ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದಕ್ಕೆ ಕೆಲ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕುವ ಸಾಧ್ಯತೆಯಿದೆ. ಪ್ರಾಮಾಣಿಕವಾಗಿ ಸೇವೆಗೈದು ಸಮಾಜದಲ್ಲಿ ಎಲ್ಲ ರೀತಿಯಿಂದ ಪರಿವರ್ತನೆ ತರುವ ಬಯಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>