<p><strong>ಬೀದರ್: </strong>ಇಲ್ಲಿಯ ಬಸವ ಗಿರಿಯಲ್ಲಿ ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವದಲ್ಲಿ ಗುರುವಚನ ಸಾಮೂಹಿಕ ಪಾರಾಯಣವು ಅಕ್ಕ ಅನ್ನಪೂರ್ಣ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.</p>.<p>ನಂತರ ಮಾತನಾಡಿ ಅವರು, ‘ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು ವಚನಗಳು. ವಚನಗಳು ಸುಖ,ಶಾಂತಿ, ನೆಮ್ಮದಿಯ ಬದುಕಿನ ಸೂತ್ರಗಳಾಗಿವೆ’ ಎಂದರು.</p>.<p>‘ವಚನಗಳಲ್ಲಿ ಶರಣರ ದರ್ಶನವಿದೆ. ಮನೆ ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ. ವಚನಗಳನ್ನು ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ವಚನ ಪಾರಾಯಣ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.</p>.<p>‘ಬಸವಾದಿ ಶರಣರ ಆಧ್ಯಾತ್ಮ ವಚನಗಳು ಉತ್ತಮ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರದ್ಧೆ, ಭಕ್ತಿ, ಜ್ಞಾನ, ವಿನಯ, ಧೈರ್ಯ, ಸಮತೆ, ಸ್ವಾತಂತ್ರ್ಯತೆ, ಸಹಜತೆಗಳನ್ನು ಹೊಂದಿದ್ದು, ಪರಿಪೂರ್ಣ ಜೀವನ ಕಟ್ಟಿಕೊಡುವುದು’ ಎಂದು ವಿವರಿಸಿದರು.</p>.<p>ಆಕಾಶವಾಣಿಯ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಮಾತನಾಡಿ,‘ ಶರಣರು ಕಷ್ಟಪಟ್ಟು<br />ಉಳಿಸಿದ ವಚನ ಸಾಹಿತ್ಯದ ಸಂದರ್ಭ ನೆನೆಯುವುದೇ ವಚನ ವಿಜಯೋತ್ಸವ. ಶರಣರು ಕೋಟ್ಯಾಂತರ ವಚನಗಳು ಬರೆದಿದ್ದಾರೆ. ಆದರೆ ನಮಗೆ ದೊರೆತಿದ್ದು ಕೇವಲ 16 ಸಾವಿರ ವಚನಗಳು ಮಾತ್ರ’ ಎಂದದರು.</p>.<p>ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸಿದರು. ಅಕ್ಕನಾಗಲಾಂಬಿಕೆ, ಮಾತೆ ಶಾಂತಾದೇವಿ ನೇತೃತ್ವ ವಹಿಸಿದ್ದರು. ಶಿವಶಂಕರ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.</p>.<p>ಜಗದೀಶ ಖೂಬಾ, ಅಶೋಕ ಖಂಡ್ರೆ, ವೀರಣ್ಣ ಮರ್ತೂರ, ಮಹೇಶ ಘಾಳೆ, ಶ್ರೀಧರ್, ಜಗನ್ನಾಥ ಮೂಲಗೆ ಬಸವನಗೌಡ ಪಾಟೀಲ, ಸಂತೋಷ ಮಲಶೆಟ್ಟಿ, ಸಂಜಯ ಇಂಡೆ, ನೀಲಾಂಬಿಕಾ ಕಳಕಪ್ಪ, ಸುಮಂಗಲಾ ಪ್ರಭು ಇದ್ದರು.</p>.<p>ಲಿಂಗಾಕ್ಷಿ ಖೇಣಿ, ಬಸವ ಪ್ರಿಯ, ಬಸವ ಗೌರಿ ವಚನ ನೃತ್ಯ ಪ್ರದರ್ಶಿಸಿದರು. ಶಾಂತಾ ಖಂಡ್ರೆ ಸ್ವಾಗತಿಸಿದರು. ಜ್ಞಾನದೇವಿ ಬಬಚಡೆ ನಿರೂಪಿಸಿದರು. ಮಹಾನಂದಾ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಇಲ್ಲಿಯ ಬಸವ ಗಿರಿಯಲ್ಲಿ ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವದಲ್ಲಿ ಗುರುವಚನ ಸಾಮೂಹಿಕ ಪಾರಾಯಣವು ಅಕ್ಕ ಅನ್ನಪೂರ್ಣ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.</p>.<p>ನಂತರ ಮಾತನಾಡಿ ಅವರು, ‘ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು ವಚನಗಳು. ವಚನಗಳು ಸುಖ,ಶಾಂತಿ, ನೆಮ್ಮದಿಯ ಬದುಕಿನ ಸೂತ್ರಗಳಾಗಿವೆ’ ಎಂದರು.</p>.<p>‘ವಚನಗಳಲ್ಲಿ ಶರಣರ ದರ್ಶನವಿದೆ. ಮನೆ ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ. ವಚನಗಳನ್ನು ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ವಚನ ಪಾರಾಯಣ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.</p>.<p>‘ಬಸವಾದಿ ಶರಣರ ಆಧ್ಯಾತ್ಮ ವಚನಗಳು ಉತ್ತಮ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರದ್ಧೆ, ಭಕ್ತಿ, ಜ್ಞಾನ, ವಿನಯ, ಧೈರ್ಯ, ಸಮತೆ, ಸ್ವಾತಂತ್ರ್ಯತೆ, ಸಹಜತೆಗಳನ್ನು ಹೊಂದಿದ್ದು, ಪರಿಪೂರ್ಣ ಜೀವನ ಕಟ್ಟಿಕೊಡುವುದು’ ಎಂದು ವಿವರಿಸಿದರು.</p>.<p>ಆಕಾಶವಾಣಿಯ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಮಾತನಾಡಿ,‘ ಶರಣರು ಕಷ್ಟಪಟ್ಟು<br />ಉಳಿಸಿದ ವಚನ ಸಾಹಿತ್ಯದ ಸಂದರ್ಭ ನೆನೆಯುವುದೇ ವಚನ ವಿಜಯೋತ್ಸವ. ಶರಣರು ಕೋಟ್ಯಾಂತರ ವಚನಗಳು ಬರೆದಿದ್ದಾರೆ. ಆದರೆ ನಮಗೆ ದೊರೆತಿದ್ದು ಕೇವಲ 16 ಸಾವಿರ ವಚನಗಳು ಮಾತ್ರ’ ಎಂದದರು.</p>.<p>ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸಿದರು. ಅಕ್ಕನಾಗಲಾಂಬಿಕೆ, ಮಾತೆ ಶಾಂತಾದೇವಿ ನೇತೃತ್ವ ವಹಿಸಿದ್ದರು. ಶಿವಶಂಕರ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.</p>.<p>ಜಗದೀಶ ಖೂಬಾ, ಅಶೋಕ ಖಂಡ್ರೆ, ವೀರಣ್ಣ ಮರ್ತೂರ, ಮಹೇಶ ಘಾಳೆ, ಶ್ರೀಧರ್, ಜಗನ್ನಾಥ ಮೂಲಗೆ ಬಸವನಗೌಡ ಪಾಟೀಲ, ಸಂತೋಷ ಮಲಶೆಟ್ಟಿ, ಸಂಜಯ ಇಂಡೆ, ನೀಲಾಂಬಿಕಾ ಕಳಕಪ್ಪ, ಸುಮಂಗಲಾ ಪ್ರಭು ಇದ್ದರು.</p>.<p>ಲಿಂಗಾಕ್ಷಿ ಖೇಣಿ, ಬಸವ ಪ್ರಿಯ, ಬಸವ ಗೌರಿ ವಚನ ನೃತ್ಯ ಪ್ರದರ್ಶಿಸಿದರು. ಶಾಂತಾ ಖಂಡ್ರೆ ಸ್ವಾಗತಿಸಿದರು. ಜ್ಞಾನದೇವಿ ಬಬಚಡೆ ನಿರೂಪಿಸಿದರು. ಮಹಾನಂದಾ ಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>