<p><strong>ಹುಮನಾಬಾದ್:</strong> ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಕ್ತರನ್ನು ಶ್ರದ್ಧಾ–ಭಕ್ತಿಯಿಂದ ತನ್ನಡೆಗೆ ಸೆಳೆಯುವಂಥ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಅದೇ ರೀತಿ ಜಯಸಿಂಹ ನಗರ ಎಂಬ ಪುರಾತನ ಹೆಸರು ಹೊಂದಿದ ಹುಮನಾಬಾದ್ನಲ್ಲಿ ಪ್ರತಿವರ್ಷ ವೀರಭದ್ರೇಶ್ವರ ಜಾತ್ರೆಯು ಸರ್ವಧರ್ಮೀಯರ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ.</p>.<p>ಈ ಜಾತ್ರೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಮೂಲಕ ವೀರಭದ್ರೇಶ್ವರನ ದರ್ಶನ ಪಡೆಯುತ್ತಾರೆ.</p>.<p>ಮಕರ ಸಂಕ್ರಮಣ ದಿನದಿಂದ ಶುರುವಾಗುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಅಗ್ಗಿ ತುಳಿಯುವುದು ಹಾಗೂ ರಥೋತ್ಸವ ಜರುಗುತ್ತದೆ. ಪ್ರತಿ ವರ್ಷ ಜನವರಿ 26ರಂದು ಜರುಗುವ ಅದ್ದೂರಿ ರಥೋತ್ಸವ ಭಕ್ತರನ್ನು ಪುಳಕಿತರನ್ನಾಗಿಸುತ್ತದೆ.</p>.<p>ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ರಾಜ್ಯ ಸೇರಿದಂತೆ ಬೇರೆ ಯಾವುದೇ ರಾಜ್ಯಗಳಲ್ಲಿ ಇದ್ದರೂ ಈ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಅವರು ವೀರಭದ್ರೇಶ್ವರನ ದರ್ಶನ ಪಡೆದು ಉತ್ಸವದಲ್ಲಿ ಭಾಗಿಯಾಗುವುದು ಇಲ್ಲಿಯ ಸಂಪ್ರದಾಯವಾಗಿದೆ.</p>.<p><strong>ಹಿನ್ನೆಲೆ:</strong> ಜಯಸಿಂಹ ನಗರ ಎಂಬುದು ಹುಮನಾಬಾದ್ನ ಪುರಾತನ ಹೆಸರು. ಈ ಭಾಗದಲ್ಲಿ ಆಳ್ವಿಕೆ ನಡೆಸಿದ ರಾಜಾ ರಾಮಚಂದ್ರ ಈ ಐತಿಹಾಸಿಕ ವೀರಭದ್ರೇಶ್ವರ ದೇಗುಲ ನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. ಅತ್ಯುತ್ತಮ ಶಿಲ್ಪ ತಜ್ಞನಾಗಿದ್ದ ರಾಜಾ ರಾಮಚಂದ್ರ, ತನ್ನ ಆಡಳಿತಾವಧಿಯಲ್ಲಿ ಹೊಸ ಹೊಸ ದೇವಸ್ಥಾನಗಳನ್ನು ನಿರ್ಮಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ.</p>.<p>ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದ ನಂತರ ಗರ್ಭಗುಡಿಯಲ್ಲಿ ಪ್ರತಿಮೆ ಸ್ಥಾಪಿಸುವ ದಿನ ಸಮೀಪಿಸಿದಾಗ ರಾಜಾ ರಾಮಚಂದ್ರನ ಕನಸಿನಲ್ಲಿ ಸ್ವತಃ ಬಂದ ವೀರಭದ್ರೇಶ್ವರ ದೇವರು, ಗಡವಂತಿ ಗ್ರಾಮದ ದೇವಸ್ಥಾನದಲ್ಲಿ ಇರುವ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನಂತೆ. ಕನಸಿನಲ್ಲಿ ಆದ ದಿವ್ಯದರ್ಶನದಿಂದ ಗಡವಂತಿ ಗ್ರಾಮಕ್ಕೆ ಹೋಗಿ ವೀರಭದ್ರೇಶ್ವರ ಮೂರ್ತಿಯನ್ನು ತಂದು ಹುಮನಾಬಾದ್ ದೇಗುಲದಲ್ಲಿ ವಿಧಿ-ವಿಧಾನಗಳಂತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿದರು ಎಂಬ ಪ್ರತೀತಿ ಇದೆ.</p>.<p>ವೀರಭದ್ರೇಶ್ವರ ದೇವಸ್ಥಾನವನ್ನು ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದೆಡೆಯಾದರೆ, 1725ರಲ್ಲಿ ರಾಜಾ ರಾಮಚಂದ್ರ ಜಾಧವ್ ನಿರ್ಮಿಸಿದ ಎಂಬ ಇನ್ನೊಂದು ಪ್ರತೀತಿಯೂ ಇದೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದೂ ಹೇಳಲಾಗುತ್ತದೆ.</p>.<p><strong>ವಾಸ್ತುಶಿಲ್ಪದ ಖಣಿ</strong></p><p>ದೇವಸ್ಥಾನವು ವಾಸ್ತುಶಿಲ್ಪ ಕಲೆಯ ಖಣಿ ಎಂದರೆ ತಪ್ಪಾಗದು. ಸೂಕ್ಷ್ಮ ಕುಸುರಿ ಕೆತ್ತನೆಯ ಆತ್ಯಾಕರ್ಷಕವಾದ ಸುಂದರ ಗೋಪುರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿ ನೋಡಿದರೆ ಸಾಕ್ಷಾತ್ ವೀರಭದ್ರೇಶ್ವರನೇ ಕಣ್ಣೆದುರು ನಿಂತಂತಿದೆ. ಗರ್ಭಗುಡಿಯಲ್ಲಿರುವ ದೇವರ ಮಂಟಪ ಕತ್ತಲೆಯಲ್ಲಿದ್ದರೂ ದೇವರ ಮೂರ್ತಿಯಿಂದ ಸದಾ ಝಗಮಗಿಸುತ್ತಿದೆ. ಇದರಿಂದ ಭಕ್ತರಿಗೆ ಕ್ಷಣಹೊತ್ತು ಸ್ವರ್ಗದಲ್ಲೇ ಇರುವಂತೆ ಭಾಸವಾಗುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ 8 ಕಲ್ಲಿನ ಕಂಬಗಳು, ಅದರ ಎದುರು 16 ಕಂಬಗಳು, ಅವುಗಳ ಮೇಲೆ 49 ಗಿಳಿಗಳು, ಮೂರು ಗೊಂಬೆ ಆಕಾರದ ಚಿತ್ರಗಳು, ಇದರ ಮುಂದೆ ಗಿಡಗಳು, ಕೆಳಭಾಗದಲ್ಲಿ ಕಲ್ಲಿನ ಗೋಲಾಕಾರದ ದೀಪಗಳಂತಿರುವ ಶಿಲ್ಪಗಳು ಕಣ್ಮನ ಸೆಳೆಯುತ್ತವೆ.</p>.<p>ಉತ್ತರದ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಯ ಸಂಗಮದಂತಿರುವ ದೇಗುಲದಲ್ಲಿ ಗರ್ಭಗೋಪುರ ಹಿಮಾಲಯದ ಕೇದಾರ, ಓರಿಸ್ಸಾದ ಭುವನೇಶ್ವರಿ ದೇವಾಲಯಗಳನ್ನು ನೆನಪಿಸಿದರೆ, ಮುಖ್ಯದ್ವಾರದ ಮೇಲ್ಗಡೆ ವಿನ್ಯಾಸ ದಕ್ಷಿಣದ ಮಧುರೈ, ಕಾಂಚಿನಗರ ದೇಗುಲಗಳನ್ನು ನೆನಪಿಸುವಂತಿದೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದ್ದು, ನಾಲ್ಕು ದಿಕ್ಕಿನಲ್ಲಿ ನಂದಿ ವಿಗ್ರಹಗಳಿವೆ. ಮೊದಲ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ನಿಂತಂತೆ ಭಾಸವಾಗುತ್ತದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ದೇವರು ಕೈಜೋಡಿಸಿ ನಿಂತಿರುವುದು ಗಮನ ಸೆಳೆಯುತ್ತದೆ.</p>.<p>ಮಹಾದ್ವಾರದ ಎದುರು 16 ಕಂಬಗಳ ವಿಶಾಲ ಮಂಟಪ ಅಂದಿನ ಶ್ರಮಜೀವಿಗಳ ಕಲಾ ಕೌಶಲ ಬಿಂಬಿಸುತ್ತದೆ. ಸೂರ್ಯೋದಯದ ಮೊದಲ ಕಿರಣ ಮಹಾದ್ವಾರದಿಂದ ನಂದಿ ಕೊಂಬಿನ ಮೂಲಕ ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರ ಬಲಭಾಗದ ಹೆಬ್ಬಟ್ಟಿನ ಮೇಲೆ ಬೀಳುವುದು ವಿಶೇಷ. ಅಂದರೆ ಅಂದು ಯಾವುದೇ ಆಧುನಿಕ ತಂತ್ರಜ್ಞಾನ ಇಲ್ಲದಿದ್ದರೂ ನಿರ್ಮಾತೃಗಳ ಬುದ್ಧಿಕ್ಷಮತೆ, ನಿರ್ಮಾಣ ಶೈಲಿ ಹೇಗಿದ್ದರೆ ಚೆನ್ನ ಎಂಬ ದೂರದೃಷ್ಟಿ ಫಲವೇ ಈ ವೈಶಿಷ್ಟ್ಯ ಎನ್ನಬಹುದಾಗಿದೆ.</p>.<p>ಗರ್ಭಗುಡಿಯ ಮುಂಭಾಗದಲ್ಲಿ 4, ಎಡಭಾಗದಲ್ಲಿ 4 ಕಲ್ಲಿನ ಕಂಬಗಳಿವೆ. ಎಡಭಾಗಕ್ಕೆ ಭದ್ರಕಾಳಿ, ಬಲಗಡೆ ಸಣ್ಣ ನಂದಿ ಪ್ರತಿಮೆ, ನಂದಿ ಸುತ್ತಲೂ 16 ಸುಂದರ ಕುಸುರಿ ಕೆತ್ತನೆಯ ಕಂಬಗಳ ಮಂಟಪಗಳಿವೆ. ಇಂಥ ವಿಶಿಷ್ಟ ದೇಗುಲದ ಗುಡಿಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಎದುರುಗಡೆ ಇರುವ ದೇವರ ಮೂರ್ತಿ ಭಕ್ತಿ ಉಕ್ಕಿ ಹರಿಯುವಂತೆ ಮಾಡುತ್ತದೆ.</p>.<p>ಇಂದಿನ ಜಂಜಾಟದ ಬದುಕಿನಲ್ಲಿ ನೆಮ್ಮದಿ ಕಾಣುವ ಸದಾಶಯದೊಂದಿಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ಎದುರಿನ ಮಂಟಪದಲ್ಲಿ ಕುಳಿತು ಧ್ಯಾನ ಮಾಡಿದರೆ ಸ್ವರ್ಗಸದೃಶದ ಅನುಭವವಾಗುತ್ತದೆ. ಇನ್ನಷ್ಟು ಕುಳಿತು ಕೊಳ್ಳಬೇಕು ಎಂದೆನಿಸದೇ ಇರದು.</p>.<p> <strong>‘ಚಂದ್ರಸೇನನ ಕಾಲದಲ್ಲಿ ಪುನರ್ ನಿರ್ಮಾಣ’</strong> </p><p>ಈ ದೇವಸ್ಥಾನವನ್ನು ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದಡೆಯಾದರೆ. 1725ರಲ್ಲಿ ರಾಜಾ ರಾಮಚಂದ್ರ ನಿರ್ಮಿಸಿದ ಎಂಬುದು ಇನ್ನೊಂಡೆಡೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದು ಹೇಳಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್:</strong> ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಕ್ತರನ್ನು ಶ್ರದ್ಧಾ–ಭಕ್ತಿಯಿಂದ ತನ್ನಡೆಗೆ ಸೆಳೆಯುವಂಥ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಅದೇ ರೀತಿ ಜಯಸಿಂಹ ನಗರ ಎಂಬ ಪುರಾತನ ಹೆಸರು ಹೊಂದಿದ ಹುಮನಾಬಾದ್ನಲ್ಲಿ ಪ್ರತಿವರ್ಷ ವೀರಭದ್ರೇಶ್ವರ ಜಾತ್ರೆಯು ಸರ್ವಧರ್ಮೀಯರ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ.</p>.<p>ಈ ಜಾತ್ರೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಮೂಲಕ ವೀರಭದ್ರೇಶ್ವರನ ದರ್ಶನ ಪಡೆಯುತ್ತಾರೆ.</p>.<p>ಮಕರ ಸಂಕ್ರಮಣ ದಿನದಿಂದ ಶುರುವಾಗುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಅಗ್ಗಿ ತುಳಿಯುವುದು ಹಾಗೂ ರಥೋತ್ಸವ ಜರುಗುತ್ತದೆ. ಪ್ರತಿ ವರ್ಷ ಜನವರಿ 26ರಂದು ಜರುಗುವ ಅದ್ದೂರಿ ರಥೋತ್ಸವ ಭಕ್ತರನ್ನು ಪುಳಕಿತರನ್ನಾಗಿಸುತ್ತದೆ.</p>.<p>ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ರಾಜ್ಯ ಸೇರಿದಂತೆ ಬೇರೆ ಯಾವುದೇ ರಾಜ್ಯಗಳಲ್ಲಿ ಇದ್ದರೂ ಈ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಅವರು ವೀರಭದ್ರೇಶ್ವರನ ದರ್ಶನ ಪಡೆದು ಉತ್ಸವದಲ್ಲಿ ಭಾಗಿಯಾಗುವುದು ಇಲ್ಲಿಯ ಸಂಪ್ರದಾಯವಾಗಿದೆ.</p>.<p><strong>ಹಿನ್ನೆಲೆ:</strong> ಜಯಸಿಂಹ ನಗರ ಎಂಬುದು ಹುಮನಾಬಾದ್ನ ಪುರಾತನ ಹೆಸರು. ಈ ಭಾಗದಲ್ಲಿ ಆಳ್ವಿಕೆ ನಡೆಸಿದ ರಾಜಾ ರಾಮಚಂದ್ರ ಈ ಐತಿಹಾಸಿಕ ವೀರಭದ್ರೇಶ್ವರ ದೇಗುಲ ನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. ಅತ್ಯುತ್ತಮ ಶಿಲ್ಪ ತಜ್ಞನಾಗಿದ್ದ ರಾಜಾ ರಾಮಚಂದ್ರ, ತನ್ನ ಆಡಳಿತಾವಧಿಯಲ್ಲಿ ಹೊಸ ಹೊಸ ದೇವಸ್ಥಾನಗಳನ್ನು ನಿರ್ಮಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ.</p>.<p>ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದ ನಂತರ ಗರ್ಭಗುಡಿಯಲ್ಲಿ ಪ್ರತಿಮೆ ಸ್ಥಾಪಿಸುವ ದಿನ ಸಮೀಪಿಸಿದಾಗ ರಾಜಾ ರಾಮಚಂದ್ರನ ಕನಸಿನಲ್ಲಿ ಸ್ವತಃ ಬಂದ ವೀರಭದ್ರೇಶ್ವರ ದೇವರು, ಗಡವಂತಿ ಗ್ರಾಮದ ದೇವಸ್ಥಾನದಲ್ಲಿ ಇರುವ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನಂತೆ. ಕನಸಿನಲ್ಲಿ ಆದ ದಿವ್ಯದರ್ಶನದಿಂದ ಗಡವಂತಿ ಗ್ರಾಮಕ್ಕೆ ಹೋಗಿ ವೀರಭದ್ರೇಶ್ವರ ಮೂರ್ತಿಯನ್ನು ತಂದು ಹುಮನಾಬಾದ್ ದೇಗುಲದಲ್ಲಿ ವಿಧಿ-ವಿಧಾನಗಳಂತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿದರು ಎಂಬ ಪ್ರತೀತಿ ಇದೆ.</p>.<p>ವೀರಭದ್ರೇಶ್ವರ ದೇವಸ್ಥಾನವನ್ನು ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದೆಡೆಯಾದರೆ, 1725ರಲ್ಲಿ ರಾಜಾ ರಾಮಚಂದ್ರ ಜಾಧವ್ ನಿರ್ಮಿಸಿದ ಎಂಬ ಇನ್ನೊಂದು ಪ್ರತೀತಿಯೂ ಇದೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದೂ ಹೇಳಲಾಗುತ್ತದೆ.</p>.<p><strong>ವಾಸ್ತುಶಿಲ್ಪದ ಖಣಿ</strong></p><p>ದೇವಸ್ಥಾನವು ವಾಸ್ತುಶಿಲ್ಪ ಕಲೆಯ ಖಣಿ ಎಂದರೆ ತಪ್ಪಾಗದು. ಸೂಕ್ಷ್ಮ ಕುಸುರಿ ಕೆತ್ತನೆಯ ಆತ್ಯಾಕರ್ಷಕವಾದ ಸುಂದರ ಗೋಪುರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿ ನೋಡಿದರೆ ಸಾಕ್ಷಾತ್ ವೀರಭದ್ರೇಶ್ವರನೇ ಕಣ್ಣೆದುರು ನಿಂತಂತಿದೆ. ಗರ್ಭಗುಡಿಯಲ್ಲಿರುವ ದೇವರ ಮಂಟಪ ಕತ್ತಲೆಯಲ್ಲಿದ್ದರೂ ದೇವರ ಮೂರ್ತಿಯಿಂದ ಸದಾ ಝಗಮಗಿಸುತ್ತಿದೆ. ಇದರಿಂದ ಭಕ್ತರಿಗೆ ಕ್ಷಣಹೊತ್ತು ಸ್ವರ್ಗದಲ್ಲೇ ಇರುವಂತೆ ಭಾಸವಾಗುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ 8 ಕಲ್ಲಿನ ಕಂಬಗಳು, ಅದರ ಎದುರು 16 ಕಂಬಗಳು, ಅವುಗಳ ಮೇಲೆ 49 ಗಿಳಿಗಳು, ಮೂರು ಗೊಂಬೆ ಆಕಾರದ ಚಿತ್ರಗಳು, ಇದರ ಮುಂದೆ ಗಿಡಗಳು, ಕೆಳಭಾಗದಲ್ಲಿ ಕಲ್ಲಿನ ಗೋಲಾಕಾರದ ದೀಪಗಳಂತಿರುವ ಶಿಲ್ಪಗಳು ಕಣ್ಮನ ಸೆಳೆಯುತ್ತವೆ.</p>.<p>ಉತ್ತರದ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಯ ಸಂಗಮದಂತಿರುವ ದೇಗುಲದಲ್ಲಿ ಗರ್ಭಗೋಪುರ ಹಿಮಾಲಯದ ಕೇದಾರ, ಓರಿಸ್ಸಾದ ಭುವನೇಶ್ವರಿ ದೇವಾಲಯಗಳನ್ನು ನೆನಪಿಸಿದರೆ, ಮುಖ್ಯದ್ವಾರದ ಮೇಲ್ಗಡೆ ವಿನ್ಯಾಸ ದಕ್ಷಿಣದ ಮಧುರೈ, ಕಾಂಚಿನಗರ ದೇಗುಲಗಳನ್ನು ನೆನಪಿಸುವಂತಿದೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದ್ದು, ನಾಲ್ಕು ದಿಕ್ಕಿನಲ್ಲಿ ನಂದಿ ವಿಗ್ರಹಗಳಿವೆ. ಮೊದಲ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ನಿಂತಂತೆ ಭಾಸವಾಗುತ್ತದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ದೇವರು ಕೈಜೋಡಿಸಿ ನಿಂತಿರುವುದು ಗಮನ ಸೆಳೆಯುತ್ತದೆ.</p>.<p>ಮಹಾದ್ವಾರದ ಎದುರು 16 ಕಂಬಗಳ ವಿಶಾಲ ಮಂಟಪ ಅಂದಿನ ಶ್ರಮಜೀವಿಗಳ ಕಲಾ ಕೌಶಲ ಬಿಂಬಿಸುತ್ತದೆ. ಸೂರ್ಯೋದಯದ ಮೊದಲ ಕಿರಣ ಮಹಾದ್ವಾರದಿಂದ ನಂದಿ ಕೊಂಬಿನ ಮೂಲಕ ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರ ಬಲಭಾಗದ ಹೆಬ್ಬಟ್ಟಿನ ಮೇಲೆ ಬೀಳುವುದು ವಿಶೇಷ. ಅಂದರೆ ಅಂದು ಯಾವುದೇ ಆಧುನಿಕ ತಂತ್ರಜ್ಞಾನ ಇಲ್ಲದಿದ್ದರೂ ನಿರ್ಮಾತೃಗಳ ಬುದ್ಧಿಕ್ಷಮತೆ, ನಿರ್ಮಾಣ ಶೈಲಿ ಹೇಗಿದ್ದರೆ ಚೆನ್ನ ಎಂಬ ದೂರದೃಷ್ಟಿ ಫಲವೇ ಈ ವೈಶಿಷ್ಟ್ಯ ಎನ್ನಬಹುದಾಗಿದೆ.</p>.<p>ಗರ್ಭಗುಡಿಯ ಮುಂಭಾಗದಲ್ಲಿ 4, ಎಡಭಾಗದಲ್ಲಿ 4 ಕಲ್ಲಿನ ಕಂಬಗಳಿವೆ. ಎಡಭಾಗಕ್ಕೆ ಭದ್ರಕಾಳಿ, ಬಲಗಡೆ ಸಣ್ಣ ನಂದಿ ಪ್ರತಿಮೆ, ನಂದಿ ಸುತ್ತಲೂ 16 ಸುಂದರ ಕುಸುರಿ ಕೆತ್ತನೆಯ ಕಂಬಗಳ ಮಂಟಪಗಳಿವೆ. ಇಂಥ ವಿಶಿಷ್ಟ ದೇಗುಲದ ಗುಡಿಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಎದುರುಗಡೆ ಇರುವ ದೇವರ ಮೂರ್ತಿ ಭಕ್ತಿ ಉಕ್ಕಿ ಹರಿಯುವಂತೆ ಮಾಡುತ್ತದೆ.</p>.<p>ಇಂದಿನ ಜಂಜಾಟದ ಬದುಕಿನಲ್ಲಿ ನೆಮ್ಮದಿ ಕಾಣುವ ಸದಾಶಯದೊಂದಿಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ಎದುರಿನ ಮಂಟಪದಲ್ಲಿ ಕುಳಿತು ಧ್ಯಾನ ಮಾಡಿದರೆ ಸ್ವರ್ಗಸದೃಶದ ಅನುಭವವಾಗುತ್ತದೆ. ಇನ್ನಷ್ಟು ಕುಳಿತು ಕೊಳ್ಳಬೇಕು ಎಂದೆನಿಸದೇ ಇರದು.</p>.<p> <strong>‘ಚಂದ್ರಸೇನನ ಕಾಲದಲ್ಲಿ ಪುನರ್ ನಿರ್ಮಾಣ’</strong> </p><p>ಈ ದೇವಸ್ಥಾನವನ್ನು ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದಡೆಯಾದರೆ. 1725ರಲ್ಲಿ ರಾಜಾ ರಾಮಚಂದ್ರ ನಿರ್ಮಿಸಿದ ಎಂಬುದು ಇನ್ನೊಂಡೆಡೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದು ಹೇಳಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>