<p><strong>ಕಮಲನಗರ</strong>: ತಾಲ್ಲೂಕು ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ, ತಡರಾತ್ರಿ ಧಾರಾಕಾರ ಮಳೆ ಸುರಿಯಿತು.</p>.<p>ಡೋಣಗಾಂವ್, ಸೋನಾಳ, ಕಳಗಾಪುರ, ಠಾಣಾಕುಶನೂರು, ಬೆಳಕುಣಿ, ದಾಬಕಾ, ಮುರ್ಕಿ, ಹೊಕರ್ಣಾ, ಭಂಡಾರಕುಮಟಾ, ಮುಧೋಳ, ಹೊಳಸಮುದ್ರ ಗ್ರಾಮಗಳಲ್ಲಿ ಮಳೆ ಸುರಿದಿದೆ.</p>.<p>ಎರಡು ದಿನಗಳಿಂದ ಅಲ್ಪ ಬಿಸಿಲು ಇದ್ದಿದ್ದರಿಂದ ಹೆಸರು, ಸೋಯಾ, ತೊಗರಿಗೆ ಕಳೆ ತೆಗೆಯಲು, ಎಡೆಕುಂಟೆ ಹೊಡೆಯಲು, ಔಷಧಿ ಸಿಂಪಡಣೆಗೆ ಮುಂದಾಗಿದ್ದ ರೈತರು ಸಂಜೆ ಸುರಿದ ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.</p>.<p>‘ಮುಂಗಾರು ಹಂಗಾಮಿನ ಇತರೆ ಬೆಳೆಗಳಿಗೆ ಹೊಲಿಸಿದಲ್ಲಿ ಹೆಸರು ಬೆಳೆ ಸೂಕ್ಷ್ಮ. ಅಧಿಕ ಮಳೆ ಸುರಿದರೆ ತಡೆದುಕೊಳ್ಳುವ ಶಕ್ತಿ ಈ ಬೆಳೆಗೆ ಇರುವುದಿಲ್ಲ’ ಎಂದು ರೈತರು ತಿಳಿಸಿದರು.</p>.<p>ಅಧಿಕ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಳಸೇತುವೆಗಳ ಮೇಲೆ ಮಳೆ ನೀರು ಹರಿದು ಗಂಟೆಗಳ ಕಾಲ ಉದಗೀರ-ಔರಾದ್, ಚಿಕ್ಲಿ-ಕಮಲನಗರ, ದಾಬಕಾ-ಖೇರ್ಡಾ, ಮುರ್ಕಿ ವಿವಿಧ ಗ್ರಾಮಕ್ಕೆ ತೆರಳುವ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ತಾಲ್ಲೂಕು ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ, ತಡರಾತ್ರಿ ಧಾರಾಕಾರ ಮಳೆ ಸುರಿಯಿತು.</p>.<p>ಡೋಣಗಾಂವ್, ಸೋನಾಳ, ಕಳಗಾಪುರ, ಠಾಣಾಕುಶನೂರು, ಬೆಳಕುಣಿ, ದಾಬಕಾ, ಮುರ್ಕಿ, ಹೊಕರ್ಣಾ, ಭಂಡಾರಕುಮಟಾ, ಮುಧೋಳ, ಹೊಳಸಮುದ್ರ ಗ್ರಾಮಗಳಲ್ಲಿ ಮಳೆ ಸುರಿದಿದೆ.</p>.<p>ಎರಡು ದಿನಗಳಿಂದ ಅಲ್ಪ ಬಿಸಿಲು ಇದ್ದಿದ್ದರಿಂದ ಹೆಸರು, ಸೋಯಾ, ತೊಗರಿಗೆ ಕಳೆ ತೆಗೆಯಲು, ಎಡೆಕುಂಟೆ ಹೊಡೆಯಲು, ಔಷಧಿ ಸಿಂಪಡಣೆಗೆ ಮುಂದಾಗಿದ್ದ ರೈತರು ಸಂಜೆ ಸುರಿದ ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.</p>.<p>‘ಮುಂಗಾರು ಹಂಗಾಮಿನ ಇತರೆ ಬೆಳೆಗಳಿಗೆ ಹೊಲಿಸಿದಲ್ಲಿ ಹೆಸರು ಬೆಳೆ ಸೂಕ್ಷ್ಮ. ಅಧಿಕ ಮಳೆ ಸುರಿದರೆ ತಡೆದುಕೊಳ್ಳುವ ಶಕ್ತಿ ಈ ಬೆಳೆಗೆ ಇರುವುದಿಲ್ಲ’ ಎಂದು ರೈತರು ತಿಳಿಸಿದರು.</p>.<p>ಅಧಿಕ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಳಸೇತುವೆಗಳ ಮೇಲೆ ಮಳೆ ನೀರು ಹರಿದು ಗಂಟೆಗಳ ಕಾಲ ಉದಗೀರ-ಔರಾದ್, ಚಿಕ್ಲಿ-ಕಮಲನಗರ, ದಾಬಕಾ-ಖೇರ್ಡಾ, ಮುರ್ಕಿ ವಿವಿಧ ಗ್ರಾಮಕ್ಕೆ ತೆರಳುವ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>