ಎರಡು ದಿನಗಳಿಂದ ಅಲ್ಪ ಬಿಸಿಲು ಇದ್ದಿದ್ದರಿಂದ ಹೆಸರು, ಸೋಯಾ, ತೊಗರಿಗೆ ಕಳೆ ತೆಗೆಯಲು, ಎಡೆಕುಂಟೆ ಹೊಡೆಯಲು, ಔಷಧಿ ಸಿಂಪಡಣೆಗೆ ಮುಂದಾಗಿದ್ದ ರೈತರು ಸಂಜೆ ಸುರಿದ ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.
‘ಮುಂಗಾರು ಹಂಗಾಮಿನ ಇತರೆ ಬೆಳೆಗಳಿಗೆ ಹೊಲಿಸಿದಲ್ಲಿ ಹೆಸರು ಬೆಳೆ ಸೂಕ್ಷ್ಮ. ಅಧಿಕ ಮಳೆ ಸುರಿದರೆ ತಡೆದುಕೊಳ್ಳುವ ಶಕ್ತಿ ಈ ಬೆಳೆಗೆ ಇರುವುದಿಲ್ಲ’ ಎಂದು ರೈತರು ತಿಳಿಸಿದರು.
ಅಧಿಕ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಳಸೇತುವೆಗಳ ಮೇಲೆ ಮಳೆ ನೀರು ಹರಿದು ಗಂಟೆಗಳ ಕಾಲ ಉದಗೀರ-ಔರಾದ್, ಚಿಕ್ಲಿ-ಕಮಲನಗರ, ದಾಬಕಾ-ಖೇರ್ಡಾ, ಮುರ್ಕಿ ವಿವಿಧ ಗ್ರಾಮಕ್ಕೆ ತೆರಳುವ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.