<p><strong>ಬೀದರ್:</strong> ‘ನಿತ್ಯ ಎಲ್ಲರೂ ಯೋಗ ಮಾಡಿದರೆ ರೋಗಮುಕ್ತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಬೀದರ್ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗೆಂದ್ರ ಯದಲಾಪೂರೆ ಹೇಳಿದರು.</p>.<p>ಹತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಒಂದು ದಿನದ ಯೋಗ ಕಾರ್ಯಾಗಾರ ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>ಭಾರತ ವಿಶ್ವಕ್ಕೆ ಯೋಗ ಕೊಟ್ಟಿದೆ. ನಮ್ಮ ಋಷಿ, ಮುನಿಗಳು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯ ಭಾಗ ಯೋಗ. ಅದನ್ನು ಎಲ್ಲರೂ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.</p>.<p>ಔರಾದ್ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಊರ್ವಶಿ ಕೊಡಲಿ ಮಾತನಾಡಿ, ಯೋಗದಿಂದ ದೈನಂದಿನ ಜಂಜಾಟಗಳು, ಒತ್ತಡದಿಂದ ಹೊರಬರಬಹುದು ಎಂದು ಹೇಳಿದರು.</p>.<p>ಬೀದರ್ ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಸಂಜುಕುಮಾರ ಅಪ್ಪೆ, ಪ್ರಾಂಶುಪಾಲ ಗೋಪಾಲ ಬಡಿಗೇರ್, ಉಪಪ್ರಾಂಶುಪಾಲ ಜಗದೇವಪ್ಪಾ ಚಕ್ಕಿ, ಕಾರ್ಯಾಗಾರದ ಸಂಯೋಜಕ ರವೀಂದ್ರ ಖೂಬಾ ಹಾಜರಿದ್ದರು. ಬೀದರ್, ಬಸವಕಲ್ಯಾಣ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ನಿತ್ಯ ಎಲ್ಲರೂ ಯೋಗ ಮಾಡಿದರೆ ರೋಗಮುಕ್ತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಬೀದರ್ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗೆಂದ್ರ ಯದಲಾಪೂರೆ ಹೇಳಿದರು.</p>.<p>ಹತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಒಂದು ದಿನದ ಯೋಗ ಕಾರ್ಯಾಗಾರ ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>ಭಾರತ ವಿಶ್ವಕ್ಕೆ ಯೋಗ ಕೊಟ್ಟಿದೆ. ನಮ್ಮ ಋಷಿ, ಮುನಿಗಳು ಹಾಕಿಕೊಟ್ಟ ಸಂಸ್ಕೃತಿ, ಪರಂಪರೆಯ ಭಾಗ ಯೋಗ. ಅದನ್ನು ಎಲ್ಲರೂ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.</p>.<p>ಔರಾದ್ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಊರ್ವಶಿ ಕೊಡಲಿ ಮಾತನಾಡಿ, ಯೋಗದಿಂದ ದೈನಂದಿನ ಜಂಜಾಟಗಳು, ಒತ್ತಡದಿಂದ ಹೊರಬರಬಹುದು ಎಂದು ಹೇಳಿದರು.</p>.<p>ಬೀದರ್ ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಸಂಜುಕುಮಾರ ಅಪ್ಪೆ, ಪ್ರಾಂಶುಪಾಲ ಗೋಪಾಲ ಬಡಿಗೇರ್, ಉಪಪ್ರಾಂಶುಪಾಲ ಜಗದೇವಪ್ಪಾ ಚಕ್ಕಿ, ಕಾರ್ಯಾಗಾರದ ಸಂಯೋಜಕ ರವೀಂದ್ರ ಖೂಬಾ ಹಾಜರಿದ್ದರು. ಬೀದರ್, ಬಸವಕಲ್ಯಾಣ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>