ಕಮಲನಗರ: ‘ಮಕ್ಕಳ ಕಳ್ಳರು ಎಂದು ಅನುಮಾನಿಸಿ, ಹಲ್ಲೆಗೆ ಮುಂದಾದ ಘಟನೆಯಲ್ಲಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ಪ್ರಕರಣದ ಬಳಿಕ ತಾಲ್ಲೂಕಿನ ಮುರ್ಕಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ’ ಎಂದು ಇನ್ಸ್ಪೆಕ್ಟರ್ ದಿಲೀಪ್ ಸಾಗರ್ ತಿಳಿಸಿದ್ದಾರೆ.
‘ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಮೂರು ದಿನಗಳಿಂದ ನಿಯೋಜಿಸಲಾಗಿದ್ದ ಜಿಲ್ಲಾ ಸಶಸ್ತ್ರ ಪಡೆಯ ಎರಡು ತುಕಡಿಗಳನ್ನು ವಾಪಸ್ ಕರೆಸಲಾಗಿದ್ದು, ಇಬ್ಬರು ಎಎಸ್ಐ ಹಾಗೂ ನಾಲ್ಕು ಜನ ಕಾನ್ಸ್ಟೆಬಲ್ಗಳನ್ನು ನಿಗಾ ವಹಿಸಲು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಯಾವುದೇ ವದಂತಿಗಳಿಗೆ ಕಿವಿಕೊಡಬಾರದು, ಸಾರ್ವಜನಿಕರಿಗೆ ತೊಂದರೆ ಆಗುವಂತಹ ವಿಷಯವಿದ್ದರೆ, ಕೂಡಲೇ ಪೊಲೀಸ್ ಠಾಣೆ ಸಂಪರ್ಕಿಸಬೇಕು’ ಎಂದರು.
ಮುರ್ಕಿ ಗ್ರಾಮ ಈಗ ಯಥಾಸ್ಥಿತಿಗೆ ಮರಳಿದ್ದು, ಸೋಮವಾರ ಅಂಗಡಿ, ಹೋಟೆಲ್ಗಳು ತೆರೆದಿದ್ದವು. ಜನ ಜೀವನ ಸಾಮಾನ್ಯವಾಗಿದೆ.