ಸಭೆಯಲ್ಲಿ ಗೋರನಳ್ಳಿಯ ಸರ್ವೇ ಸಂಖ್ಯೆ 22/1 ರ ವಸತಿ ವಿನ್ಯಾಸದಲ್ಲಿ ಗಣೇಶ ವಿಸರ್ಜನೆಗೆ ಹೊಂಡ ನಿರ್ಮಾಣ ಮಾಡಲು ನಿರ್ಧಾರ ತೆಗೆದುಕೊಂಡಿರುವುದು ಸರಿಯಾಗಿದೆ. ಆದರೆ, ಜನವರಿ 4 ರಂದು ನಡೆದಿದ್ದ ಸಭೆಯಲ್ಲಿ ನಾನು ಹಾಗೂ ಶಾಸಕ ರಹೀಂಖಾನ್ ಲೇಔಟ್ಗೆ ಯಡಿಯೂರಪ್ಪ ಅವರ ಹೆಸರು ಇಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವು. ಅದಾಗಿಯೂ ಪ್ರೊಸಿಡಿಂಗ್ನಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.