<p>ಬೀದರ್: ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆಗೆ ಒತ್ತು ನೀಡುವ ಪ್ರಾಥಮಿಕ ಹೊಣೆಗಾರಿಕೆಯಿರುವ ನಗರಸಭೆಗೆ ಹೊಸ ಸಾರಥಿಗಳು ಬಂದಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಮಹಿಳೆಯರೇ ನಗರಸಭೆಯ ಚುಕ್ಕಾಣಿ ಹಿಡಿದಿದ್ದಾರೆ.<br /> <br /> ನಗರಸಭೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ನಗರದಲ್ಲಿ ಸ್ವಚ್ಛತೆಯ ಕೊರತೆ ಪ್ರಶ್ನೆ ಮೂಡಿದಾಗಲೆಲ್ಲಾ ಚುನಾಯಿತ ಪ್ರತಿನಿಧಿಗಳು ಇಲ್ಲ ಎಂಬ ನೆಪ ಬರುತ್ತಿತ್ತು.<br /> <br /> ಈಗ ಅಂಥ ನೆಪ ಇರುವುದಿಲ್ಲ. ಹೊಸದಾಗಿ ಅಧ್ಯಕ್ಷೆಯಾಗಿರುವ ಫಾತಿಮಾ ಅನ್ವರ್ ಅಲಿ, ಸ್ವಚ್ಛ ಮತ್ತು ಹಸಿರುಮಯ ನಗರವಾಗಿ ಅಭಿವೃದ್ಧಿ ಪಡಿಸಲು ಪ್ರಾಶಸ್ತ್ಯ ನೀಡುವುದಾಗಿ ಹೇಳಿದ್ದಾರೆ.<br /> <br /> ಅಧ್ಯಕ್ಷರು ನಿಮಿತ್ತವಾದರೂ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಕೈಜೋಡಿಸುವುದೂ ಅಗತ್ಯ. ಕಳೆದ ಅವಧಿಯಲ್ಲೂ ಸದಸ್ಯೆಯಾಗಿದ್ದ ಫಾತಿಮಾ ತಮ್ಮ ನೇರ ಮಾತುಗಳಿಂದ ಗಮನಸೆಳೆದವರು. ಅಭಿವೃದ್ಧಿ ಮತ್ತು ಸ್ವಚ್ಛ ನಗರ ಮಾಡುವ ಚಿಂತನೆ ನಗರಸಭೆ ಅಂಗಳದಿಂದಲೇ ಆರಂಭವಾಗಲಿ ಎಂಬ ಮಾತು ಕೇಳಿಬಂದಿದೆ.<br /> <br /> ಏಕೆಂದರೆ, ನಿತ್ಯ ನೂರಾರು ಸಾರ್ವಜನಿಕರು ಭೇಟಿ ನೀಡುವ ನಗರಸಭೆಯ ಆವರಣದಲ್ಲಿ ಈಗಲೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಇದ್ದರೂ ಅದರ ಸ್ಥಿತಿ ನಗರಸಭೆಯ ಆಡಳಿತ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿ ಉಳಿದಿದೆ.<br /> <br /> ಮುರಿದು ಬಿದ್ದ ಪರಿಕರಗಳು, ಖಾಲಿ ಬಾಟಲಿಗಳು, ತ್ಯಾಜ್ಯಗಳನ್ನು ಬಿಸಾಡುವ ತಾಣವಾಗಿ ಅಲ್ಲಿನ ಶೌಚಾಲಯ ಬದಲಾಗಿದೆ. ಪರಿಣಾಮ ತುರ್ತು ಸಂದರ್ಭದಲ್ಲಿ ಅನಧಿಕೃತವಾಗಿ ನಗರಸಭೆ ಆವರಣವೇ ತಾತ್ಕಾಲಿಕ ಶೌಚಾಲಯವಾಗಿ ಬಿಡುತ್ತದೆ. ಇನ್ನು ಮಹಿಳೆಯರ ಪಾಡು ಹೇಳುವಂತೆಯೇ ಇಲ್ಲ.<br /> <br /> ಈ ಕುರಿತು ಸದಸ್ಯರೊಬ್ಬರು ಹೇಳಿದ್ದು, ‘ಸಮಸ್ಯೆ ಇರುವುದು ನಿಜ. ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧಿಕಾರಕ್ಕೆ ಬಂದಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಖಂಡಿತ ಒತ್ತು ನೀಡುತ್ತೇವೆ’.<br /> <br /> ಅಧಿಕಾರಗಳ ಆಡಳಿತಾವಧಿಯಲ್ಲಿ ನಗರಸಭೆ ಕಚೇರಿ ಎದುರು ಸಾರ್ವಜನಿಕರ ವಾಹನ ನಿಲುಗಡೆ, ಉದ್ಯಾನ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳುವ ಉತ್ತಮ ಕೆಲಸ ಆಗಿದ್ದರೂ, ಆವರಣ ಇನ್ನೂ ತ್ಯಾಜ್ಯ, ನಿರುಪಯೋಗಿ ವಸ್ತುಗಳ ತಾಣವಾಗಿಯೂ ಬಳಕೆಯಾಗುತ್ತಿದೆ.<br /> <br /> ಇದನ್ನು ತಪ್ಪಿಸಿ ಲಭ್ಯವಿರುವ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಸದಸ್ಯರು ಚಿಂತನೆ ನಡೆಸಿದರೂ ಉತ್ತಮ ಹೆಜ್ಜೆಯಾದೀತು. ಹೊಸ ಸದಸ್ಯರಿಗೂ ನಿಜಕ್ಕೂ ಸ್ವಚ್ಚ ನಗರ ರೂಪಿಸುವ ಹೊಣೆಗಾರಿಕೆ, ಆಸಕ್ತಿ ಇದ್ದರೆ ಆ ಕಾರ್ಯವನ್ನು ನಗರಸಭೆಯ ಅಂಗಳದಿಂದಲೇ ಆರಂಭಿಸಬಹುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆಗೆ ಒತ್ತು ನೀಡುವ ಪ್ರಾಥಮಿಕ ಹೊಣೆಗಾರಿಕೆಯಿರುವ ನಗರಸಭೆಗೆ ಹೊಸ ಸಾರಥಿಗಳು ಬಂದಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಮಹಿಳೆಯರೇ ನಗರಸಭೆಯ ಚುಕ್ಕಾಣಿ ಹಿಡಿದಿದ್ದಾರೆ.<br /> <br /> ನಗರಸಭೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ನಗರದಲ್ಲಿ ಸ್ವಚ್ಛತೆಯ ಕೊರತೆ ಪ್ರಶ್ನೆ ಮೂಡಿದಾಗಲೆಲ್ಲಾ ಚುನಾಯಿತ ಪ್ರತಿನಿಧಿಗಳು ಇಲ್ಲ ಎಂಬ ನೆಪ ಬರುತ್ತಿತ್ತು.<br /> <br /> ಈಗ ಅಂಥ ನೆಪ ಇರುವುದಿಲ್ಲ. ಹೊಸದಾಗಿ ಅಧ್ಯಕ್ಷೆಯಾಗಿರುವ ಫಾತಿಮಾ ಅನ್ವರ್ ಅಲಿ, ಸ್ವಚ್ಛ ಮತ್ತು ಹಸಿರುಮಯ ನಗರವಾಗಿ ಅಭಿವೃದ್ಧಿ ಪಡಿಸಲು ಪ್ರಾಶಸ್ತ್ಯ ನೀಡುವುದಾಗಿ ಹೇಳಿದ್ದಾರೆ.<br /> <br /> ಅಧ್ಯಕ್ಷರು ನಿಮಿತ್ತವಾದರೂ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಕೈಜೋಡಿಸುವುದೂ ಅಗತ್ಯ. ಕಳೆದ ಅವಧಿಯಲ್ಲೂ ಸದಸ್ಯೆಯಾಗಿದ್ದ ಫಾತಿಮಾ ತಮ್ಮ ನೇರ ಮಾತುಗಳಿಂದ ಗಮನಸೆಳೆದವರು. ಅಭಿವೃದ್ಧಿ ಮತ್ತು ಸ್ವಚ್ಛ ನಗರ ಮಾಡುವ ಚಿಂತನೆ ನಗರಸಭೆ ಅಂಗಳದಿಂದಲೇ ಆರಂಭವಾಗಲಿ ಎಂಬ ಮಾತು ಕೇಳಿಬಂದಿದೆ.<br /> <br /> ಏಕೆಂದರೆ, ನಿತ್ಯ ನೂರಾರು ಸಾರ್ವಜನಿಕರು ಭೇಟಿ ನೀಡುವ ನಗರಸಭೆಯ ಆವರಣದಲ್ಲಿ ಈಗಲೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಇದ್ದರೂ ಅದರ ಸ್ಥಿತಿ ನಗರಸಭೆಯ ಆಡಳಿತ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿ ಉಳಿದಿದೆ.<br /> <br /> ಮುರಿದು ಬಿದ್ದ ಪರಿಕರಗಳು, ಖಾಲಿ ಬಾಟಲಿಗಳು, ತ್ಯಾಜ್ಯಗಳನ್ನು ಬಿಸಾಡುವ ತಾಣವಾಗಿ ಅಲ್ಲಿನ ಶೌಚಾಲಯ ಬದಲಾಗಿದೆ. ಪರಿಣಾಮ ತುರ್ತು ಸಂದರ್ಭದಲ್ಲಿ ಅನಧಿಕೃತವಾಗಿ ನಗರಸಭೆ ಆವರಣವೇ ತಾತ್ಕಾಲಿಕ ಶೌಚಾಲಯವಾಗಿ ಬಿಡುತ್ತದೆ. ಇನ್ನು ಮಹಿಳೆಯರ ಪಾಡು ಹೇಳುವಂತೆಯೇ ಇಲ್ಲ.<br /> <br /> ಈ ಕುರಿತು ಸದಸ್ಯರೊಬ್ಬರು ಹೇಳಿದ್ದು, ‘ಸಮಸ್ಯೆ ಇರುವುದು ನಿಜ. ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧಿಕಾರಕ್ಕೆ ಬಂದಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಖಂಡಿತ ಒತ್ತು ನೀಡುತ್ತೇವೆ’.<br /> <br /> ಅಧಿಕಾರಗಳ ಆಡಳಿತಾವಧಿಯಲ್ಲಿ ನಗರಸಭೆ ಕಚೇರಿ ಎದುರು ಸಾರ್ವಜನಿಕರ ವಾಹನ ನಿಲುಗಡೆ, ಉದ್ಯಾನ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳುವ ಉತ್ತಮ ಕೆಲಸ ಆಗಿದ್ದರೂ, ಆವರಣ ಇನ್ನೂ ತ್ಯಾಜ್ಯ, ನಿರುಪಯೋಗಿ ವಸ್ತುಗಳ ತಾಣವಾಗಿಯೂ ಬಳಕೆಯಾಗುತ್ತಿದೆ.<br /> <br /> ಇದನ್ನು ತಪ್ಪಿಸಿ ಲಭ್ಯವಿರುವ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಸದಸ್ಯರು ಚಿಂತನೆ ನಡೆಸಿದರೂ ಉತ್ತಮ ಹೆಜ್ಜೆಯಾದೀತು. ಹೊಸ ಸದಸ್ಯರಿಗೂ ನಿಜಕ್ಕೂ ಸ್ವಚ್ಚ ನಗರ ರೂಪಿಸುವ ಹೊಣೆಗಾರಿಕೆ, ಆಸಕ್ತಿ ಇದ್ದರೆ ಆ ಕಾರ್ಯವನ್ನು ನಗರಸಭೆಯ ಅಂಗಳದಿಂದಲೇ ಆರಂಭಿಸಬಹುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>