<p>ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೆಳ್ಳಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದರಿಂದ ಅನೇಕ ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ.<br /> <br /> ಸುಮಾರು 110 ಮೆಟ್ಟಿಲುಗಳಿರುವ ಎತ್ತರವಾದ ಗುಡ್ಡದ ಮೇಲಿನ ಈ ದೇವಸ್ಥಾನ ಈ ಭಾಗದಲ್ಲಿ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿದೆ. ಆಕರ್ಷಕ ಗೋಪುರ, ಗರ್ಭಗುಡಿ ಮತ್ತು ಮುಖ ಮಂಟಪ ಸಹ ಆಕರ್ಷಕವಾಗಿದೆ. ಇಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದಾದರೂ ಪ್ರತಿ ದಸರಾಕ್ಕೆ ಹನ್ನೊಂದು ದಿನಗಳವರೆಗೆ ನವರಾತ್ರಿ ಸಂಭ್ರಮದಿಂದ ಆಚರಿಸಲಾಗುತ್ತದೆ.<br /> <br /> ಈ ಸಲ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಘಟಸ್ಥಾಪನೆಯ ದಿನದಿಂದ ಪ್ರತಿದಿನ ವಿಶೇಷ ಪೂಜೆ ನಡೆಯುತ್ತಿದೆ. ರಾತ್ರಿ ದೇವಿ ಪುರಾಣ ಹೇಳಲಾಗುತ್ತಿದೆ.<br /> <br /> ಭಜನೆ, ಜಾಗರಣೆ ನಡೆಯುತ್ತಿದೆ. ದಯಾನಂದ ಸ್ವಾಮಿ ರಾಮತೀರ್ಥ ಪುರಾಣ ಹೇಳುತ್ತಾರೆ. ಶ್ರೀರಂಗ ಭುರೆ ವಾಚಕರಾಗಿದ್ದಾರೆ.<br /> <br /> ದೇವಸ್ಥಾನ ಸಮಿತಿ ಅಧ್ಯಕ್ಷ ಅರವಿಂದ ಕಾರಭಾರಿ ಇತರೆ ಪದಾಧಿಕಾರಿಗಳಾದ ಗೋವಿಂದರಾವ ದೇಸಾಯಿ, ಬಸವರಾಜ ಸ್ವಾಮಿ, ಸಂಜೀವ ಘೋಡಕೆ, ಶಾಂತಪ್ಪ ಮೇತ್ರೆ ಅವರು ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.<br /> <br /> ಮಹಾನವಮಿಯ ದಿನ ದೇವಸ್ಥಾನದ ಎದುರು ಬನ್ನಿಪೂಜೆ ನಡೆಯುತ್ತದೆ. ಮರುದಿನ ಸವಾದ್ಯಗಳೊಂದಿಗೆ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೆಳ್ಳಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದರಿಂದ ಅನೇಕ ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ.<br /> <br /> ಸುಮಾರು 110 ಮೆಟ್ಟಿಲುಗಳಿರುವ ಎತ್ತರವಾದ ಗುಡ್ಡದ ಮೇಲಿನ ಈ ದೇವಸ್ಥಾನ ಈ ಭಾಗದಲ್ಲಿ ಜಾಗೃತ ದೇವಸ್ಥಾನವೆಂದು ಪ್ರಸಿದ್ಧವಾಗಿದೆ. ಆಕರ್ಷಕ ಗೋಪುರ, ಗರ್ಭಗುಡಿ ಮತ್ತು ಮುಖ ಮಂಟಪ ಸಹ ಆಕರ್ಷಕವಾಗಿದೆ. ಇಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದಾದರೂ ಪ್ರತಿ ದಸರಾಕ್ಕೆ ಹನ್ನೊಂದು ದಿನಗಳವರೆಗೆ ನವರಾತ್ರಿ ಸಂಭ್ರಮದಿಂದ ಆಚರಿಸಲಾಗುತ್ತದೆ.<br /> <br /> ಈ ಸಲ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಘಟಸ್ಥಾಪನೆಯ ದಿನದಿಂದ ಪ್ರತಿದಿನ ವಿಶೇಷ ಪೂಜೆ ನಡೆಯುತ್ತಿದೆ. ರಾತ್ರಿ ದೇವಿ ಪುರಾಣ ಹೇಳಲಾಗುತ್ತಿದೆ.<br /> <br /> ಭಜನೆ, ಜಾಗರಣೆ ನಡೆಯುತ್ತಿದೆ. ದಯಾನಂದ ಸ್ವಾಮಿ ರಾಮತೀರ್ಥ ಪುರಾಣ ಹೇಳುತ್ತಾರೆ. ಶ್ರೀರಂಗ ಭುರೆ ವಾಚಕರಾಗಿದ್ದಾರೆ.<br /> <br /> ದೇವಸ್ಥಾನ ಸಮಿತಿ ಅಧ್ಯಕ್ಷ ಅರವಿಂದ ಕಾರಭಾರಿ ಇತರೆ ಪದಾಧಿಕಾರಿಗಳಾದ ಗೋವಿಂದರಾವ ದೇಸಾಯಿ, ಬಸವರಾಜ ಸ್ವಾಮಿ, ಸಂಜೀವ ಘೋಡಕೆ, ಶಾಂತಪ್ಪ ಮೇತ್ರೆ ಅವರು ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.<br /> <br /> ಮಹಾನವಮಿಯ ದಿನ ದೇವಸ್ಥಾನದ ಎದುರು ಬನ್ನಿಪೂಜೆ ನಡೆಯುತ್ತದೆ. ಮರುದಿನ ಸವಾದ್ಯಗಳೊಂದಿಗೆ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>