<p>ಬೀದರ್: ಆರ್.ಬಿ. ಬಿಡಪ್ ಅವರ ಸಾಮಾಜಿಕ ಕಳಕಳಿ ಸ್ಮರಣೀಯವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ನುಡಿದರು.<br /> <br /> ನಗರದ ಕರ್ನಾಟಕ ಕಾಲೇಜಿನಲ್ಲಿ ಭಾನುವಾರ ನಡೆದ ಆರ್.ಬಿ. ಬಿಡಪ್ ಅವರ ಪುಣ್ಯಸ್ಮರಣೆ ಹಾಗೂ ಆರ್.ವಿ. ಬಿಡಪ್ ಶಿಷ್ಯವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಮೇರು ವ್ಯಕ್ತಿತ್ವದ ಬಿಡಪ್ ಅವರು ಯಾರಿಗೂ ಶರಣಾಗುತ್ತಿರಲಿಲ್ಲ. ಅವರ ನಿರ್ಧಾರಗಳು ಅಚಲವಾಗುತ್ತಿದ್ದವು. ಆತ್ಮಸ್ಥೈರ್ಯ ಮತ್ತು ಧೈರ್ಯವೇ ಅವರ ಸಾಧನೆಯ ಶಕ್ತಿ ಆಗಿದ್ದವು ಎಂದು ಬಣ್ಣಿಸಿದರು.<br /> <br /> ಆರ್.ಬಿ. ಬಿಡಪ್ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಬಿಡಪ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಪ್ರೊ. ಬಿ.ಆರ್. ಕೊಂಡಾ ಹೇಳಿದರು.<br /> <br /> ಬಿಡಪ್ ರಾಷ್ಟ್ರೀಯ ಮನೋಭಾವ ಹೊಂದಿದ್ದದರು. ನೇತಾಜಿ ಸುಭಾಷಚಂದ್ರ ಅವರಂಥ ನಾಯಕರನ್ನು ಕಂಡಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿಯು ಪಾಲ್ಗೊಂಡಿದ್ದರು ಎಂದು ಹೇಳಿದರು. ಬೀದರ್ನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.<br /> <br /> ಜಿಲ್ಲೆಯಲ್ಲಿ ಸಾಧನೆ ಮಾಡಿರುವವರೆಲ್ಲ ಶ್ರಮದಿಂದಲೇ ಮೇಲಕ್ಕೆ ಬಂದವರು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ಎನ್. ನಾಯಕ್ ಹೇಳಿದರು.<br /> <br /> ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೆ ಪ್ರಯತ್ನಶೀಲರಾಗಿರಬೇಕು ಎಂದು ಸಲಹೆ ಮಾಡಿದರು.<br /> ಪ್ರೊ. ಎಸ್.ಎಸ್. ದೇವರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐವರು ವಿದ್ಯಾರ್ಥಿಗಳಿಗೆ ಆರ್.ವಿ. ಬಿಡಪ್ ಶಿಷ್ಯವೇತನ ವಿತರಿಸಲಾಯಿತು. ವೈದ್ಯ ವಿದ್ಯಾರ್ಥಿ ರಾಮಲಿಂಗ ಗೋಪಿನಾಥ (ರೂ. 10 ಸಾವಿರ), ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾವೇರಿ ಸುರೇಶ ಕರಂಜಿ, ಯೋಗೇಶ ಸೂರ್ಯವಂಶಿ (ತಲಾ ರೂ. 5 ಸಾವಿರ), ಪಿಯುಸಿ ವಿದ್ಯಾರ್ಥಿಗಳಾದ ಶಾಲಿನಿ ಶ್ರೀನಿವಾಸ ಮತ್ತು ಕೀರ್ತಿ ಬಾಬುರಾವ (ತಲಾ ರೂ. 2 ಸಾವಿರ) ಶಿಷ್ಯವೇತನ ಪಡೆದವರಲ್ಲಿ ಸೇರಿದ್ದಾರೆ.<br /> <br /> ಪ್ರಮುಖರಾದ ಬಾಬುರಾವ ಪಾಟೀಲ್ ಸಿರಗಾಪುರ, ಹರಿಶ್ಚಚಂದ್ರ ಗೋಯಲ್, ಬಸವಂತರಾವ ಶೆಟಕಾರ, ಪ್ರೊ. ಎಸ್.ಬಿ. ಬಿರಾದಾರ್, ವೀರಶೆಟ್ಟಿ ಗಂಗಶೆಟ್ಟಿ, ಮಲ್ಲಿಕಾರ್ಜುನ ಪ್ರಭಾ, ಪ್ರೊ. ಗಣೇಶನ್, ಪ್ರೊ. ರಾಜೇಂದ್ರ ಬೀರಾದಾರ್, ಪ್ರೊ. ಶಾಮಕಾಂತ ಕುಲಕರ್ಣಿ, ಪ್ರೊ. ಜೂಜಾ ಉಪಸ್ಥಿತರಿದ್ದರು. <br /> <br /> ಪ್ರಾಚಾರ್ಯ ಪ್ರೊ. ವಿ. ಧನಪಾಲ್ ಸ್ವಾಗತಿಸಿದರು. ಡಾ. ಜಗನ್ನಾಥ ಹೆಬ್ಬಾಳೆ ನಿರೂಪಿಸಿದರು. ಪ್ರೊ. ಎಂ.ಎಸ್. ಪಾಟೀಲ್ ವಂದಿಸಿದರು.<br /> <br /> 5ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಆರ್.ವಿ. ಬಿಡಪ್ ಅವರ ಪುತ್ಥಳಿಗೆ ಜಿಲ್ಲಾ ಸತ್ರ ನ್ಯಾಯಾಧಿಶ ಸದಾನಂದ ಎನ್. ನಾಯಕ್ ಮಾಲಾರ್ಪಣೆ ಮಾಡಿ ಗೌರವಿಸಿದರು. ಕೆಆರ್ಇ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಆರ್.ಬಿ. ಬಿಡಪ್ ಅವರ ಸಾಮಾಜಿಕ ಕಳಕಳಿ ಸ್ಮರಣೀಯವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ನುಡಿದರು.<br /> <br /> ನಗರದ ಕರ್ನಾಟಕ ಕಾಲೇಜಿನಲ್ಲಿ ಭಾನುವಾರ ನಡೆದ ಆರ್.ಬಿ. ಬಿಡಪ್ ಅವರ ಪುಣ್ಯಸ್ಮರಣೆ ಹಾಗೂ ಆರ್.ವಿ. ಬಿಡಪ್ ಶಿಷ್ಯವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಮೇರು ವ್ಯಕ್ತಿತ್ವದ ಬಿಡಪ್ ಅವರು ಯಾರಿಗೂ ಶರಣಾಗುತ್ತಿರಲಿಲ್ಲ. ಅವರ ನಿರ್ಧಾರಗಳು ಅಚಲವಾಗುತ್ತಿದ್ದವು. ಆತ್ಮಸ್ಥೈರ್ಯ ಮತ್ತು ಧೈರ್ಯವೇ ಅವರ ಸಾಧನೆಯ ಶಕ್ತಿ ಆಗಿದ್ದವು ಎಂದು ಬಣ್ಣಿಸಿದರು.<br /> <br /> ಆರ್.ಬಿ. ಬಿಡಪ್ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಬಿಡಪ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಪ್ರೊ. ಬಿ.ಆರ್. ಕೊಂಡಾ ಹೇಳಿದರು.<br /> <br /> ಬಿಡಪ್ ರಾಷ್ಟ್ರೀಯ ಮನೋಭಾವ ಹೊಂದಿದ್ದದರು. ನೇತಾಜಿ ಸುಭಾಷಚಂದ್ರ ಅವರಂಥ ನಾಯಕರನ್ನು ಕಂಡಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿಯು ಪಾಲ್ಗೊಂಡಿದ್ದರು ಎಂದು ಹೇಳಿದರು. ಬೀದರ್ನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.<br /> <br /> ಜಿಲ್ಲೆಯಲ್ಲಿ ಸಾಧನೆ ಮಾಡಿರುವವರೆಲ್ಲ ಶ್ರಮದಿಂದಲೇ ಮೇಲಕ್ಕೆ ಬಂದವರು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ಎನ್. ನಾಯಕ್ ಹೇಳಿದರು.<br /> <br /> ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೆ ಪ್ರಯತ್ನಶೀಲರಾಗಿರಬೇಕು ಎಂದು ಸಲಹೆ ಮಾಡಿದರು.<br /> ಪ್ರೊ. ಎಸ್.ಎಸ್. ದೇವರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐವರು ವಿದ್ಯಾರ್ಥಿಗಳಿಗೆ ಆರ್.ವಿ. ಬಿಡಪ್ ಶಿಷ್ಯವೇತನ ವಿತರಿಸಲಾಯಿತು. ವೈದ್ಯ ವಿದ್ಯಾರ್ಥಿ ರಾಮಲಿಂಗ ಗೋಪಿನಾಥ (ರೂ. 10 ಸಾವಿರ), ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾವೇರಿ ಸುರೇಶ ಕರಂಜಿ, ಯೋಗೇಶ ಸೂರ್ಯವಂಶಿ (ತಲಾ ರೂ. 5 ಸಾವಿರ), ಪಿಯುಸಿ ವಿದ್ಯಾರ್ಥಿಗಳಾದ ಶಾಲಿನಿ ಶ್ರೀನಿವಾಸ ಮತ್ತು ಕೀರ್ತಿ ಬಾಬುರಾವ (ತಲಾ ರೂ. 2 ಸಾವಿರ) ಶಿಷ್ಯವೇತನ ಪಡೆದವರಲ್ಲಿ ಸೇರಿದ್ದಾರೆ.<br /> <br /> ಪ್ರಮುಖರಾದ ಬಾಬುರಾವ ಪಾಟೀಲ್ ಸಿರಗಾಪುರ, ಹರಿಶ್ಚಚಂದ್ರ ಗೋಯಲ್, ಬಸವಂತರಾವ ಶೆಟಕಾರ, ಪ್ರೊ. ಎಸ್.ಬಿ. ಬಿರಾದಾರ್, ವೀರಶೆಟ್ಟಿ ಗಂಗಶೆಟ್ಟಿ, ಮಲ್ಲಿಕಾರ್ಜುನ ಪ್ರಭಾ, ಪ್ರೊ. ಗಣೇಶನ್, ಪ್ರೊ. ರಾಜೇಂದ್ರ ಬೀರಾದಾರ್, ಪ್ರೊ. ಶಾಮಕಾಂತ ಕುಲಕರ್ಣಿ, ಪ್ರೊ. ಜೂಜಾ ಉಪಸ್ಥಿತರಿದ್ದರು. <br /> <br /> ಪ್ರಾಚಾರ್ಯ ಪ್ರೊ. ವಿ. ಧನಪಾಲ್ ಸ್ವಾಗತಿಸಿದರು. ಡಾ. ಜಗನ್ನಾಥ ಹೆಬ್ಬಾಳೆ ನಿರೂಪಿಸಿದರು. ಪ್ರೊ. ಎಂ.ಎಸ್. ಪಾಟೀಲ್ ವಂದಿಸಿದರು.<br /> <br /> 5ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಆರ್.ವಿ. ಬಿಡಪ್ ಅವರ ಪುತ್ಥಳಿಗೆ ಜಿಲ್ಲಾ ಸತ್ರ ನ್ಯಾಯಾಧಿಶ ಸದಾನಂದ ಎನ್. ನಾಯಕ್ ಮಾಲಾರ್ಪಣೆ ಮಾಡಿ ಗೌರವಿಸಿದರು. ಕೆಆರ್ಇ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>