<p><strong>ಬಸವಕಲ್ಯಾಣ:</strong> ಜೂನ್ 23 ರಂದು ಜೇಷ್ಠ ಮಾಸದ ಹುಣ್ಣಿಮೆ ಇದ್ದು, ಈ ದಿನದಂದು ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಕಾರಹುಣ್ಣಿಮೆ ಹಬ್ಬ ಆಚರಿಸುತ್ತಾರೆ. ಜತೆಗೆ ದೇಶದ ಬಹುಭಾಗದಲ್ಲಿ ನಡೆಸುವಂತೆ ವಟಸಾವಿತ್ರಿ ಪೂಜೆ ಸಹ ಕೈಗೊಳ್ಳುವ ವಾಡಿಕೆ ಇದೆ.<br /> <br /> ವಟ ಎಂದರೆ ಆಲದ ಮರ. ಹಿಂದಿನ ಕಾಲದಲ್ಲಿ ಅಶ್ವಪತಿರಾಜನ ಮಗಳು ಸಾವಿತ್ರಿ ವರಾನ್ವೇಷಣೆ ಕೈಗೊಳ್ಳುತ್ತಾಳೆ. ಶಾಲ್ವದೇಶದ ರಾಜನ ಮಗ ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದಿದ್ದರೂ ಆತನ ಜತೆ ಮದುವೆ ಆಗುತ್ತಾಳೆ.<br /> <br /> ಮುಂದೆ ಕಾಡಿನಲ್ಲಿ ಹೋಗುತ್ತಿರುವಾಗ ಯಮನು ಆತನ ಪ್ರಾಣ ತೆಗೆಯುತ್ತಾನೆ. ಆಗ ಆಕೆ ಶವವನ್ನು ಆಲದ ಮರದ ಕೆಳಗಿಟ್ಟು ಪರಿಪರಿಯಾಗಿ ಬೇಡಿಕೊಂಡು ಮತ್ತೆ ಪ್ರಾಣ ಬರುವಂತೆ ಮಾಡುತ್ತಾಳೆ.<br /> <br /> ಆದ್ದರಿಂದ ಈ ದಿನ ಸುಮಂಗಲೆಯರು ಉಪವಾಸ ವ್ರತ ಕೈಗೊಂಡು ಕುಂಕುಮ, ಅರಿಷಿಣ ತೆಗೆದುಕೊಂಡು ಹೋಗಿ ಈ ವೃಕ್ಷಕ್ಕೆ ದಾರ ಸುತ್ತಿ ಪತಿಯ ಸೌಖ್ಯ ಬಯಸಿ ಪೂಜೆ ಸಲ್ಲಿಸುತ್ತಾರೆ. ತಮ್ಮ ವಂಶ ವೃಕ್ಷವೂ ಈ ವಟವೃಕ್ಷದಂತೆ ವಿಶಾಲವಾಗಿ ಬೆಳೆಯಲಿ, ಕುಟುಂಬದ ಸದಸ್ಯರು ದೀರ್ಘಾಯುಷಿಗಳಾಗಲಿ ಎಂದು ಪ್ರಾರ್ಥಿಸುತ್ತಾರೆ.<br /> <br /> ಇನ್ನೊಂದು ಕತೆಯ ಪ್ರಕಾರ ಸತ್ಯವಾನನು ಕಾಡಿನಲ್ಲಿ ಹೋಗುತಿದ್ದಾಗ ಆತನಿಗೆ ಉಷ್ಮಾಘಾತವಾಗಿ ನೆಲಕ್ಕೆ ಬೀಳುತ್ತಾನೆ. ಆಗ ಅಲ್ಲಿಂದ ಹಾದು ಹೋಗುವವರ ಸಲಹೆಯಂತೆ ಆತನನ್ನು ಸಾವಿತ್ರಿ ವಟವೃಕ್ಷದ ಕೆಳಗೆ ತಂದು ಮಲಗಿಸುತ್ತಾಳೆ.<br /> <br /> ಈ ಮರದ ಕೆಳಗೆ ಯಾವಾಗಲೂ ಆರ್ದ್ರತೆ ಇರುವುದರಿಂದ ಆತನಿಗೆ ಎಚ್ಚರವಾಗುತ್ತದೆ. ಆಕೆ ಈ ಮರವೇ ತನ್ನ ಗಂಡನನ್ನು ಉಳಿಸಿತು ಎಂದು ಅದರ ಪೂಜೆ ನೆರವೆರಿಸುತ್ತಾಳೆ. ಅಂದಿನಿಂದ ಇದಕ್ಕೆ ಪೂಜಿಸುವ ಪರಿಪಾಠ ಬೆಳೆದಿದೆ ಎನ್ನಲಾಗುತ್ತದೆ. ವೈಜ್ಞಾನಿಕ ಆಧಾರದ ಪ್ರಕಾರ ಈ ಮರ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಹೊರಸೂಸುತ್ತದೆ. ಆದ್ದರಿಂದ ಗಾಳಿ ಶುದ್ಧಗೊಳ್ಳುತ್ತದೆ. ಈ ಕಾರಣ ಈ ಮರದ ಕೆಳಗೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಿತಕರ ಎನ್ನಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ಜೂನ್ 23 ರಂದು ಜೇಷ್ಠ ಮಾಸದ ಹುಣ್ಣಿಮೆ ಇದ್ದು, ಈ ದಿನದಂದು ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಕಾರಹುಣ್ಣಿಮೆ ಹಬ್ಬ ಆಚರಿಸುತ್ತಾರೆ. ಜತೆಗೆ ದೇಶದ ಬಹುಭಾಗದಲ್ಲಿ ನಡೆಸುವಂತೆ ವಟಸಾವಿತ್ರಿ ಪೂಜೆ ಸಹ ಕೈಗೊಳ್ಳುವ ವಾಡಿಕೆ ಇದೆ.<br /> <br /> ವಟ ಎಂದರೆ ಆಲದ ಮರ. ಹಿಂದಿನ ಕಾಲದಲ್ಲಿ ಅಶ್ವಪತಿರಾಜನ ಮಗಳು ಸಾವಿತ್ರಿ ವರಾನ್ವೇಷಣೆ ಕೈಗೊಳ್ಳುತ್ತಾಳೆ. ಶಾಲ್ವದೇಶದ ರಾಜನ ಮಗ ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದಿದ್ದರೂ ಆತನ ಜತೆ ಮದುವೆ ಆಗುತ್ತಾಳೆ.<br /> <br /> ಮುಂದೆ ಕಾಡಿನಲ್ಲಿ ಹೋಗುತ್ತಿರುವಾಗ ಯಮನು ಆತನ ಪ್ರಾಣ ತೆಗೆಯುತ್ತಾನೆ. ಆಗ ಆಕೆ ಶವವನ್ನು ಆಲದ ಮರದ ಕೆಳಗಿಟ್ಟು ಪರಿಪರಿಯಾಗಿ ಬೇಡಿಕೊಂಡು ಮತ್ತೆ ಪ್ರಾಣ ಬರುವಂತೆ ಮಾಡುತ್ತಾಳೆ.<br /> <br /> ಆದ್ದರಿಂದ ಈ ದಿನ ಸುಮಂಗಲೆಯರು ಉಪವಾಸ ವ್ರತ ಕೈಗೊಂಡು ಕುಂಕುಮ, ಅರಿಷಿಣ ತೆಗೆದುಕೊಂಡು ಹೋಗಿ ಈ ವೃಕ್ಷಕ್ಕೆ ದಾರ ಸುತ್ತಿ ಪತಿಯ ಸೌಖ್ಯ ಬಯಸಿ ಪೂಜೆ ಸಲ್ಲಿಸುತ್ತಾರೆ. ತಮ್ಮ ವಂಶ ವೃಕ್ಷವೂ ಈ ವಟವೃಕ್ಷದಂತೆ ವಿಶಾಲವಾಗಿ ಬೆಳೆಯಲಿ, ಕುಟುಂಬದ ಸದಸ್ಯರು ದೀರ್ಘಾಯುಷಿಗಳಾಗಲಿ ಎಂದು ಪ್ರಾರ್ಥಿಸುತ್ತಾರೆ.<br /> <br /> ಇನ್ನೊಂದು ಕತೆಯ ಪ್ರಕಾರ ಸತ್ಯವಾನನು ಕಾಡಿನಲ್ಲಿ ಹೋಗುತಿದ್ದಾಗ ಆತನಿಗೆ ಉಷ್ಮಾಘಾತವಾಗಿ ನೆಲಕ್ಕೆ ಬೀಳುತ್ತಾನೆ. ಆಗ ಅಲ್ಲಿಂದ ಹಾದು ಹೋಗುವವರ ಸಲಹೆಯಂತೆ ಆತನನ್ನು ಸಾವಿತ್ರಿ ವಟವೃಕ್ಷದ ಕೆಳಗೆ ತಂದು ಮಲಗಿಸುತ್ತಾಳೆ.<br /> <br /> ಈ ಮರದ ಕೆಳಗೆ ಯಾವಾಗಲೂ ಆರ್ದ್ರತೆ ಇರುವುದರಿಂದ ಆತನಿಗೆ ಎಚ್ಚರವಾಗುತ್ತದೆ. ಆಕೆ ಈ ಮರವೇ ತನ್ನ ಗಂಡನನ್ನು ಉಳಿಸಿತು ಎಂದು ಅದರ ಪೂಜೆ ನೆರವೆರಿಸುತ್ತಾಳೆ. ಅಂದಿನಿಂದ ಇದಕ್ಕೆ ಪೂಜಿಸುವ ಪರಿಪಾಠ ಬೆಳೆದಿದೆ ಎನ್ನಲಾಗುತ್ತದೆ. ವೈಜ್ಞಾನಿಕ ಆಧಾರದ ಪ್ರಕಾರ ಈ ಮರ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಹೊರಸೂಸುತ್ತದೆ. ಆದ್ದರಿಂದ ಗಾಳಿ ಶುದ್ಧಗೊಳ್ಳುತ್ತದೆ. ಈ ಕಾರಣ ಈ ಮರದ ಕೆಳಗೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಿತಕರ ಎನ್ನಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>