<p><strong>ಭಾಲ್ಕಿ:</strong> ಸಾಧನೆಗೆ ಬಡತನ ಯಾವತ್ತೂ ಅಡ್ಡಿಯಾಗುವದಿಲ್ಲ. ಸತತ ಪರಿಶ್ರಮ, ಪಾಲಕರ ಪ್ರೋತ್ಸಾಹ ಮತ್ತು ಗುರು ಹಿರಿಯರ ಆಶಿರ್ವಾದದ ಫಲವಾಗಿ ನಾನಿಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಲು ಸಾಧ್ಯವಾಯ್ತು ಎಂದು ಭಾಲ್ಕಿ ತಾಲ್ಲೂಕಿನ ಹೊನ್ನಳ್ಳಿಯ ಸಂಗಮೇಶ ಬಿರಾದಾರ ಅಭಿಪ್ರಾಯಪಟ್ಟಿದ್ದಾರೆ.<br /> <br /> ಬಾಲ್ಯದಿಂದಲೇ ಸಾಹಸಿ ಮತ್ತು ಪರಿಶ್ರಮಿಯಾಗಿರುವ ಸಂಗಮೇಶ ಪುಟ್ಟ ಹಳ್ಳಿಯಲ್ಲೇ 5ನೇ ವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ, 6ನೇ ವರ್ಗದಿಂದ 12ನೇ ವರೆಗೆ ಬಿಜಾಪುರದ ಸೈನಿಕ ಶಾಲೆಯಲ್ಲಿ ಓದಿದ್ದಾರೆ.<br /> <br /> ನಂತರ ರಾಷ್ಟ್ರ ಮಟ್ಟದಲ್ಲಿ ನಡೆದ ಎನ್ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ)ಗೆ ಆಯ್ಕೆಯಾಗಿ, ಡೆಹರಾಡೂನ್ ಮತ್ತು ಪೂನಾದಲ್ಲಿ ತರಬೇತಿ ಮುಗಿಸಿ ಈಗ ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ನೇಮಿಸಲಾಗಿದೆ.<br /> <br /> <strong>ಬಡತನ ಅಡ್ಡಿಯಾಗಿಲ್ಲ</strong>: ಸಂಗಮೇಶ ಅವರ ತಂದೆ ಶಿವರಾಜ ಬಿರಾದಾರ ಭಾಲ್ಕಿಯ ಶಿವಾಜಿ ಕಾಲೇಜಿನಲ್ಲಿ ಸಹಾಯಕರಾಗಿದ್ದಾರೆ. ಅತ್ಯಂತ ಬಡತನವನ್ನು ಎದುರಿಸಿ ತನ್ನ 2 ಗಂಡು ಮಕ್ಕಳಿಗೆ ಸೈನಿಕ ಶಾಲೆಯಲ್ಲಿ ಅಭ್ಯಾಸ ಮಾಡಿಸಿದ್ದಾರೆ.<br /> <br /> ಮಕ್ಕಳ ಸಾಧನೆಗೆ ಹರಕೆ ಹೊತ್ತು ಹಲವು ವರ್ಷಗಳ ವರೆಗೆ ಪಾದರಕ್ಷೆಯನ್ನೂ ಬಿಟ್ಟಿದ್ದರು. ಸರಳ ವ್ಯಕ್ತಿತ್ವ, ಸದ್ವಿಚಾರವುಳ್ಳ ಪಾಲಕರ ಆಶಿರ್ವಾದವೇ ನನ್ನ ಸಾಧನೆಯ ಶಕ್ತಿಯ ಮೂಲವಾಗಿದೆ ಎಂದು ಸಂಗಮೇಶ `ಪ್ರಜಾವಾಣಿ'ಗೆ ದೂರವಾಣಿ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.<br /> ರಾಷ್ಟ್ರಕ್ಕಾಗಿ ಉದಾತ್ತ ಸೇವೆ ಸಲ್ಲಿಸುವ ಗುರಿ ಹೊಂದಿದ್ದೇನೆ. ಈ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡಿದ ಸೈನಿಕ ಶಾಲೆಯ ಗುರುಗಳಿಗೂ, ಬಾಲ್ಯದ ಶಿಕ್ಷಕರಿಗೂ ಲೆಫ್ಟಿನೆಂಟ್ ಸಂಗಮೇಶ ಬಿರಾದಾರ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.<br /> <br /> ಅಭಿನಂದನೆ: ಹಳ್ಳಿಯ ಬಾಲಕ ಸಂಗಮೇಶನ ಸಾಧನೆಗೆ ಡಾ. ಬಸವಲಿಂಗ ಪಟ್ಟದ್ದೇವರು, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮೆಹಕರ್, ಕಿಸಾನ್ ಪ್ರಸಾರಕ ಮಂಡಳದ ಅಧ್ಯಕ್ಷ ಅನಿಲಕುಮಾರ ಸಿಂಧೆ, ಪತ್ರಕರ್ತ ಚಂದ್ರಕಾಂತ ಬಿರಾದಾರ, ಪ್ರೊ. ಎಸ್ಎಸ್ ಮೈನಾಳೆ, ಅಶೋಕ ರಾಜೋಳೆ, ಅಶೋಕ ಮೈನಾಳೆ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ಸಾಧನೆಗೆ ಬಡತನ ಯಾವತ್ತೂ ಅಡ್ಡಿಯಾಗುವದಿಲ್ಲ. ಸತತ ಪರಿಶ್ರಮ, ಪಾಲಕರ ಪ್ರೋತ್ಸಾಹ ಮತ್ತು ಗುರು ಹಿರಿಯರ ಆಶಿರ್ವಾದದ ಫಲವಾಗಿ ನಾನಿಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಲು ಸಾಧ್ಯವಾಯ್ತು ಎಂದು ಭಾಲ್ಕಿ ತಾಲ್ಲೂಕಿನ ಹೊನ್ನಳ್ಳಿಯ ಸಂಗಮೇಶ ಬಿರಾದಾರ ಅಭಿಪ್ರಾಯಪಟ್ಟಿದ್ದಾರೆ.<br /> <br /> ಬಾಲ್ಯದಿಂದಲೇ ಸಾಹಸಿ ಮತ್ತು ಪರಿಶ್ರಮಿಯಾಗಿರುವ ಸಂಗಮೇಶ ಪುಟ್ಟ ಹಳ್ಳಿಯಲ್ಲೇ 5ನೇ ವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ, 6ನೇ ವರ್ಗದಿಂದ 12ನೇ ವರೆಗೆ ಬಿಜಾಪುರದ ಸೈನಿಕ ಶಾಲೆಯಲ್ಲಿ ಓದಿದ್ದಾರೆ.<br /> <br /> ನಂತರ ರಾಷ್ಟ್ರ ಮಟ್ಟದಲ್ಲಿ ನಡೆದ ಎನ್ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ)ಗೆ ಆಯ್ಕೆಯಾಗಿ, ಡೆಹರಾಡೂನ್ ಮತ್ತು ಪೂನಾದಲ್ಲಿ ತರಬೇತಿ ಮುಗಿಸಿ ಈಗ ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ನೇಮಿಸಲಾಗಿದೆ.<br /> <br /> <strong>ಬಡತನ ಅಡ್ಡಿಯಾಗಿಲ್ಲ</strong>: ಸಂಗಮೇಶ ಅವರ ತಂದೆ ಶಿವರಾಜ ಬಿರಾದಾರ ಭಾಲ್ಕಿಯ ಶಿವಾಜಿ ಕಾಲೇಜಿನಲ್ಲಿ ಸಹಾಯಕರಾಗಿದ್ದಾರೆ. ಅತ್ಯಂತ ಬಡತನವನ್ನು ಎದುರಿಸಿ ತನ್ನ 2 ಗಂಡು ಮಕ್ಕಳಿಗೆ ಸೈನಿಕ ಶಾಲೆಯಲ್ಲಿ ಅಭ್ಯಾಸ ಮಾಡಿಸಿದ್ದಾರೆ.<br /> <br /> ಮಕ್ಕಳ ಸಾಧನೆಗೆ ಹರಕೆ ಹೊತ್ತು ಹಲವು ವರ್ಷಗಳ ವರೆಗೆ ಪಾದರಕ್ಷೆಯನ್ನೂ ಬಿಟ್ಟಿದ್ದರು. ಸರಳ ವ್ಯಕ್ತಿತ್ವ, ಸದ್ವಿಚಾರವುಳ್ಳ ಪಾಲಕರ ಆಶಿರ್ವಾದವೇ ನನ್ನ ಸಾಧನೆಯ ಶಕ್ತಿಯ ಮೂಲವಾಗಿದೆ ಎಂದು ಸಂಗಮೇಶ `ಪ್ರಜಾವಾಣಿ'ಗೆ ದೂರವಾಣಿ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.<br /> ರಾಷ್ಟ್ರಕ್ಕಾಗಿ ಉದಾತ್ತ ಸೇವೆ ಸಲ್ಲಿಸುವ ಗುರಿ ಹೊಂದಿದ್ದೇನೆ. ಈ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡಿದ ಸೈನಿಕ ಶಾಲೆಯ ಗುರುಗಳಿಗೂ, ಬಾಲ್ಯದ ಶಿಕ್ಷಕರಿಗೂ ಲೆಫ್ಟಿನೆಂಟ್ ಸಂಗಮೇಶ ಬಿರಾದಾರ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.<br /> <br /> ಅಭಿನಂದನೆ: ಹಳ್ಳಿಯ ಬಾಲಕ ಸಂಗಮೇಶನ ಸಾಧನೆಗೆ ಡಾ. ಬಸವಲಿಂಗ ಪಟ್ಟದ್ದೇವರು, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮೆಹಕರ್, ಕಿಸಾನ್ ಪ್ರಸಾರಕ ಮಂಡಳದ ಅಧ್ಯಕ್ಷ ಅನಿಲಕುಮಾರ ಸಿಂಧೆ, ಪತ್ರಕರ್ತ ಚಂದ್ರಕಾಂತ ಬಿರಾದಾರ, ಪ್ರೊ. ಎಸ್ಎಸ್ ಮೈನಾಳೆ, ಅಶೋಕ ರಾಜೋಳೆ, ಅಶೋಕ ಮೈನಾಳೆ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>