<p><strong>ಶಿವಮೊಗ್ಗ: </strong>ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರಿಂಕೋರ್ಟ್ ತೀರ್ಪಿನವಿರುದ್ಧ ಜಿಲ್ಲಾಬಹುಜನ ಸಮಾಜಪಕ್ಷ(ಬಿಎಸ್ಪಿ)ಅಸಮಾಧಾನ ವ್ಯಕ್ತಪಡಿಸಿದೆ.</p>.<p>ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪುಸಂವಿಧಾನ ಆಶಯಕ್ಕೆ ವಿರುದ್ಧ. ಬಿಜೆಪಿ ಸಿದ್ದಾಂತಕ್ಕೆ ಪೂರಕ.ನ್ಯಾಯಾಲಯಗಳ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆ ತಂದಿದೆ ಎಂದುಪಕ್ಷದಜಿಲ್ಲಾ ಸಂಯೋಜಕ ಜಿ.ಸಂಗಪ್ಪ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿದೂರಿದರು.</p>.<p>ಹಿಂದೆ ಸುಪ್ರಿಂ ಕೋರ್ಟ್ನ 7 ನ್ಯಾಯಾಧೀಶರ ಪೀಠ ಬಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಈಗಿನ ತೀರ್ಪು ವ್ಯತಿರಿಕ್ತವಾಗಿದೆ.ಇದು ವಿರೋಧಭಾಸ.ಈ ತೀರ್ಪಿನಹಿಂದೆ ಮೀಸಲಾತಿ ವಿರುದ್ಧದ ಒಂದು ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದರು.</p>.<p>ಲೋಕಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ 117ನೇ ತಿದ್ದುಪಡಿ ಮಸೂದೆ ಇಚ್ಚಾಶಕ್ತಿಕೊರತೆ ಕಾರಣಇತ್ಯರ್ಥವಾಗದೇ ಉಳಿದಿದೆ. ಈ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ,ಅನುಮೋದನೆ ನೀಡಬೇಕು.ಪರಿಶಿಷ್ಟ ಹಿತ ಕಾಯಬೇಕು. ಇಲ್ಲದಿದ್ದರೆ ಹೋರಾಟಅನಿವಾರ್ಯ ಎಂದು ಎಚ್ಚರಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ, ಪದಾಧಿಕಾರಿಗಳಾದ ಎಚ್.ಎನ್.ಶ್ರೀನಿವಾಸ್, ಲಕ್ಷ್ಮೀಪತಿ, ನರಸಪ್ಪ, ಎಚ್.ಎನ್.ಚಂದ್ರಪ್ಪ, ಎಸ್.ಎಚ್.ಮಾರುತಿ, ಕೃಷ್ಣಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರಿಂಕೋರ್ಟ್ ತೀರ್ಪಿನವಿರುದ್ಧ ಜಿಲ್ಲಾಬಹುಜನ ಸಮಾಜಪಕ್ಷ(ಬಿಎಸ್ಪಿ)ಅಸಮಾಧಾನ ವ್ಯಕ್ತಪಡಿಸಿದೆ.</p>.<p>ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳಿಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪುಸಂವಿಧಾನ ಆಶಯಕ್ಕೆ ವಿರುದ್ಧ. ಬಿಜೆಪಿ ಸಿದ್ದಾಂತಕ್ಕೆ ಪೂರಕ.ನ್ಯಾಯಾಲಯಗಳ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಧಕ್ಕೆ ತಂದಿದೆ ಎಂದುಪಕ್ಷದಜಿಲ್ಲಾ ಸಂಯೋಜಕ ಜಿ.ಸಂಗಪ್ಪ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿದೂರಿದರು.</p>.<p>ಹಿಂದೆ ಸುಪ್ರಿಂ ಕೋರ್ಟ್ನ 7 ನ್ಯಾಯಾಧೀಶರ ಪೀಠ ಬಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಈಗಿನ ತೀರ್ಪು ವ್ಯತಿರಿಕ್ತವಾಗಿದೆ.ಇದು ವಿರೋಧಭಾಸ.ಈ ತೀರ್ಪಿನಹಿಂದೆ ಮೀಸಲಾತಿ ವಿರುದ್ಧದ ಒಂದು ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದರು.</p>.<p>ಲೋಕಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ 117ನೇ ತಿದ್ದುಪಡಿ ಮಸೂದೆ ಇಚ್ಚಾಶಕ್ತಿಕೊರತೆ ಕಾರಣಇತ್ಯರ್ಥವಾಗದೇ ಉಳಿದಿದೆ. ಈ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ,ಅನುಮೋದನೆ ನೀಡಬೇಕು.ಪರಿಶಿಷ್ಟ ಹಿತ ಕಾಯಬೇಕು. ಇಲ್ಲದಿದ್ದರೆ ಹೋರಾಟಅನಿವಾರ್ಯ ಎಂದು ಎಚ್ಚರಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ, ಪದಾಧಿಕಾರಿಗಳಾದ ಎಚ್.ಎನ್.ಶ್ರೀನಿವಾಸ್, ಲಕ್ಷ್ಮೀಪತಿ, ನರಸಪ್ಪ, ಎಚ್.ಎನ್.ಚಂದ್ರಪ್ಪ, ಎಸ್.ಎಚ್.ಮಾರುತಿ, ಕೃಷ್ಣಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>