<p><strong>ಶಿವಮೊಗ್ಗ: </strong>ಸರ್ಕಾರಭೂ ಕಂದಾಯ ಕಾಯ್ದೆ 2007ಕ್ಕೆ ತಿದ್ದುಪಡಿತರುವ ಮೂಲಕಮಲೆನಾಡಿನ ಸಣ್ಣ ರೈತರ ರಕ್ಷಣೆನೀಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರಮಾಹಿತಿ ನೀಡಿದರು.</p>.<p>2007ರಕಾಯ್ದೆಯಿಂದರೈತರಿಗೆ ತೊಂದರೆಯಾಗಿದೆ.ನಗರ ಪ್ರದೇಶದ ಭೂ ಕಬಳಿಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಈ ಕಾಯ್ದೆ ಜಾರಿಗೆತರಲಾಗಿತ್ತು.ಇದರಿಂದ ಮಲೆನಾಡು ಭಾಗದಲ್ಲಿಸಾಗುವಳಿಮಾಡಿದ ರೈತರಿಗೆ ತೊಂದರೆಯಾಗಿದೆ. ತಿದ್ದುಪಡಿ ತರುವ ಮೂಲಕ ಅರಣ್ಯ, ಕಂದಾಯ ಭೂಮಿಗಳಲ್ಲಿ 4 ಎಕರೆಗಿಂತ ಕಡಿಮೆ ಉಳುಮೆ ಮಾಡಿದ ಬಗರ್ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡಲಾಗುವುದು. ಇದರಿಂದ ಸೊಪ್ಪಿನಬೆಟ್ಟ, ಕಾಫಿತೋಟಗಳು, ಅಡಿಕೆ ತೋಟಗಳ ರೈತರಿಗೆಅನುಕೂಲವಾಗಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಬೆಂಗಳೂರಿನಲ್ಲಿ ಈಗಾಗಲೇ ಮುಖ್ಯಮಂತ್ರಿಅಧ್ಯಕ್ಷತೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತುಉನ್ನತಮಟ್ಟದ ಸಭೆ ನಡೆದಿದೆ. ಮಲೆನಾಡಿನ ರೈತರ ಮೇಲೆಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ.ಶೀಘ್ರ ಸದನದಅನುಮೋದನೆದೊರೆಯಲಿದೆ ಎಂದರು.</p>.<p>ಭೂ ನ್ಯಾಯಾಲಯದಲ್ಲಿ 4,725 ರೈತರ ವಿರುದ್ಧ ಪ್ರಕರಣ ದಾಖಲಾಗಿದೆ.15 ದಿನಕ್ಕೆ ಒಮ್ಮೆ ವಿಚಾರಣೆಗೆ ಬರುವಂತೆ ಆದೇಶ ನೀಡಲಾಗುತ್ತಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬರಲು ಸಮಸ್ಯೆಯಾಗುತ್ತದೆ.ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ವಿಚಾರಣೆಗೆ ಅನುಮತಿ ನೀಡುವುದು, 4 ಎಕರೆಗಿಂತ ಕಡಿಮೆ ಸಾಗುವಳಿ, ಕೊಟ್ಟಿಗೆ, ಕಣ, ವಾಸದ ಮನೆಗಾಗಿ ಒತ್ತುವರಿಗೆ ಕಾನೂನು ಸಮ್ಮತಿ ದೊರಕಿಸುವುದುತಿದ್ದುಪಡಿಯ ಉದ್ದೇಶ ಎಂದು ವಿವರ ನೀಡಿದರು.</p>.<p>ನಗರ ಪ್ರದೇಶದ ಒತ್ತುವರಿ, ಹೊಸ ಬಡಾವಣೆ,ಕೆರೆಗಳ ಒತ್ತುವರಿಗೆ ವಿನಾಯಿತಿ ಇಲ್ಲ. ಚಿಕ್ಕಮಗಳೂರು ಭಾಗದಲ್ಲಿ ನೂರಾರು ಎಕರೆ ಒತ್ತುವರಿ ಮಾಡಿಕೊಂಡವರಿಗೆ ಈಕಾನೂನು ಅನ್ವಯಿಸುವುದಿಲ್ಲಎಂದು ಸ್ಪಷ್ಟಪಡಿಸಿದರು.</p>.<p>ಹೊಸ ಸಮಸ್ಯೆಗಳು ಎದುರಾದರೆ ಸಮರ್ಥವಾಗಿಎದುರಿಸಲು ಮಲೆನಾಡು ಭಾಗದ ಜಿಲ್ಲೆಗಳಲ್ಲಿ 10 ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಅಧಿಕಾರಿಗಳ ಮೇಲುಸ್ತುವಾರಿಗೆಐಎಎಸ್ ಅಧಿಕಾರಿಇರುತ್ತಾರೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿಬಿಜೆಪಿ ಮುಖಂಡರಾದಎಸ್.ದತ್ತಾತ್ರಿ, ಮೇಘರಾಜ್, ಶ್ರೀನಾಥ್, ಎಸ್.ಎಸ್.ಜ್ಯೋತಿ ಪ್ರಕಾಶ್, ಸುನಿತಾ ಅಣ್ಣಪ್ಪ, ಮಾಲತೇಶ್, ಋಷಿಕೇಷ್ ಪೈ, ವೀರಭದ್ರಪ್ಪ ಪೂಜಾರ್, ಕೆ.ವಿ.ಅಣ್ಣಪ್ಪ , ರತ್ನಾಕರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಸರ್ಕಾರಭೂ ಕಂದಾಯ ಕಾಯ್ದೆ 2007ಕ್ಕೆ ತಿದ್ದುಪಡಿತರುವ ಮೂಲಕಮಲೆನಾಡಿನ ಸಣ್ಣ ರೈತರ ರಕ್ಷಣೆನೀಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರಮಾಹಿತಿ ನೀಡಿದರು.</p>.<p>2007ರಕಾಯ್ದೆಯಿಂದರೈತರಿಗೆ ತೊಂದರೆಯಾಗಿದೆ.ನಗರ ಪ್ರದೇಶದ ಭೂ ಕಬಳಿಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಈ ಕಾಯ್ದೆ ಜಾರಿಗೆತರಲಾಗಿತ್ತು.ಇದರಿಂದ ಮಲೆನಾಡು ಭಾಗದಲ್ಲಿಸಾಗುವಳಿಮಾಡಿದ ರೈತರಿಗೆ ತೊಂದರೆಯಾಗಿದೆ. ತಿದ್ದುಪಡಿ ತರುವ ಮೂಲಕ ಅರಣ್ಯ, ಕಂದಾಯ ಭೂಮಿಗಳಲ್ಲಿ 4 ಎಕರೆಗಿಂತ ಕಡಿಮೆ ಉಳುಮೆ ಮಾಡಿದ ಬಗರ್ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡಲಾಗುವುದು. ಇದರಿಂದ ಸೊಪ್ಪಿನಬೆಟ್ಟ, ಕಾಫಿತೋಟಗಳು, ಅಡಿಕೆ ತೋಟಗಳ ರೈತರಿಗೆಅನುಕೂಲವಾಗಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.</p>.<p>ಬೆಂಗಳೂರಿನಲ್ಲಿ ಈಗಾಗಲೇ ಮುಖ್ಯಮಂತ್ರಿಅಧ್ಯಕ್ಷತೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತುಉನ್ನತಮಟ್ಟದ ಸಭೆ ನಡೆದಿದೆ. ಮಲೆನಾಡಿನ ರೈತರ ಮೇಲೆಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ.ಶೀಘ್ರ ಸದನದಅನುಮೋದನೆದೊರೆಯಲಿದೆ ಎಂದರು.</p>.<p>ಭೂ ನ್ಯಾಯಾಲಯದಲ್ಲಿ 4,725 ರೈತರ ವಿರುದ್ಧ ಪ್ರಕರಣ ದಾಖಲಾಗಿದೆ.15 ದಿನಕ್ಕೆ ಒಮ್ಮೆ ವಿಚಾರಣೆಗೆ ಬರುವಂತೆ ಆದೇಶ ನೀಡಲಾಗುತ್ತಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬರಲು ಸಮಸ್ಯೆಯಾಗುತ್ತದೆ.ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ವಿಚಾರಣೆಗೆ ಅನುಮತಿ ನೀಡುವುದು, 4 ಎಕರೆಗಿಂತ ಕಡಿಮೆ ಸಾಗುವಳಿ, ಕೊಟ್ಟಿಗೆ, ಕಣ, ವಾಸದ ಮನೆಗಾಗಿ ಒತ್ತುವರಿಗೆ ಕಾನೂನು ಸಮ್ಮತಿ ದೊರಕಿಸುವುದುತಿದ್ದುಪಡಿಯ ಉದ್ದೇಶ ಎಂದು ವಿವರ ನೀಡಿದರು.</p>.<p>ನಗರ ಪ್ರದೇಶದ ಒತ್ತುವರಿ, ಹೊಸ ಬಡಾವಣೆ,ಕೆರೆಗಳ ಒತ್ತುವರಿಗೆ ವಿನಾಯಿತಿ ಇಲ್ಲ. ಚಿಕ್ಕಮಗಳೂರು ಭಾಗದಲ್ಲಿ ನೂರಾರು ಎಕರೆ ಒತ್ತುವರಿ ಮಾಡಿಕೊಂಡವರಿಗೆ ಈಕಾನೂನು ಅನ್ವಯಿಸುವುದಿಲ್ಲಎಂದು ಸ್ಪಷ್ಟಪಡಿಸಿದರು.</p>.<p>ಹೊಸ ಸಮಸ್ಯೆಗಳು ಎದುರಾದರೆ ಸಮರ್ಥವಾಗಿಎದುರಿಸಲು ಮಲೆನಾಡು ಭಾಗದ ಜಿಲ್ಲೆಗಳಲ್ಲಿ 10 ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಅಧಿಕಾರಿಗಳ ಮೇಲುಸ್ತುವಾರಿಗೆಐಎಎಸ್ ಅಧಿಕಾರಿಇರುತ್ತಾರೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿಬಿಜೆಪಿ ಮುಖಂಡರಾದಎಸ್.ದತ್ತಾತ್ರಿ, ಮೇಘರಾಜ್, ಶ್ರೀನಾಥ್, ಎಸ್.ಎಸ್.ಜ್ಯೋತಿ ಪ್ರಕಾಶ್, ಸುನಿತಾ ಅಣ್ಣಪ್ಪ, ಮಾಲತೇಶ್, ಋಷಿಕೇಷ್ ಪೈ, ವೀರಭದ್ರಪ್ಪ ಪೂಜಾರ್, ಕೆ.ವಿ.ಅಣ್ಣಪ್ಪ , ರತ್ನಾಕರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>