<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 142 ಕೋವಿಡ್ ಪ್ರಕರಣಗಳು ದಾಖಲಾಗಿವೆ. 216 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.</p>.<p>ಸಕ್ರಿಯ ಪ್ರಕರಣಗಳ ಸಂಖ್ಯೆ 1,410ಕ್ಕೆ ಇಳಿದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿದ್ದು, ಸದ್ಯ 52 ಮಂದಿ ಇದ್ದಾರೆ. ಹೋಂ ಐಸೊಲೇಷನ್ನಲ್ಲಿ 72 ಮಂದಿ ಇದ್ದಾರೆ. ಉಳಿದವರು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 29,343 ಮಂದಿಗೆ ಕೋವಿಡ್ ದೃಢಪಟ್ಟಿದೆ. 27,454 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಯೇತರ ಕಾರಣದಿಂದ ಮೃತಪಟ್ಟ ಸೋಂಕಿತರೂ ಸೇರಿದಂತೆ 504 ಮಂದಿ ಕೊನೆಯುಸಿರೆಳೆದಿದ್ದಾರೆ.</p>.<p>ಶನಿವಾರ 1,599 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,469 ವರದಿಗಳು ನೆಗೆಟಿವ್ ಬಂದಿವೆ. 130 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಹಳೆಯ 12 ಪ್ರಕರಣಗಳು ಸೇರಿದಂತೆ 142 ಪ್ರಕರಣಗಳನ್ನು ಜಿಲ್ಲಾಡಳಿತ ವರದಿಯಲ್ಲಿ ಉಲ್ಲೇಖಿಸಿದೆ.</p>.<p>ಹೊಸ ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 59, ಗುಂಡ್ಲುಪೇಟೆಯ 44, ಕೊಳ್ಳೇಗಾಲದ 14, ಹನೂರಿನ 16, ಯಳಂದೂರು ತಾಲ್ಲೂಕಿನ ಎಂಟು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ.</p>.<p>ಶನಿವಾರ ಗುಣಮುಖರಾದ ಗುಣಮುಖರಾದ 216 ಜನರಲ್ಲಿ, ಆಸ್ಪತ್ರೆಯಲ್ಲಿ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಕೇರ್ ಕೇಂದ್ರದಲ್ಲಿ 185 ಮಂದಿ ಇದ್ದರು. ಹೋಂ ಐಸೊಲೇಷನ್ನಲ್ಲಿ ಎಂಟು ಮಂದಿ ಇದ್ದರು.</p>.<p>ಚಾಮರಾಜನಗರ ತಾಲ್ಲೂಕಿನ 71, ಗುಂಡ್ಲುಪೇಟೆ 42, ಕೊಳ್ಳೇಗಾಲದ 31, ಹನೂರಿನ 50, ಯಳಂದೂರು ತಾಲ್ಲೂಕಿನ 21 ಮಂದಿ ಮತ್ತು ಹೊರ ಜಿಲ್ಲೆಯ ಒಬ್ಬರು ಕೋವಿಡ್ ಗೆದ್ದಿದ್ದಾರೆ.</p>.<p class="Subhead"><strong>ಪರಿಷ್ಕೃತ ವರದಿ:</strong> ಜಿಲ್ಲಾಡಳಿತವು ಶುಕ್ರವಾರ ತಡರಾತ್ರಿ ಪರಿಷ್ಕೃತ ವರದಿ ಕಳುಹಿಸಿದ್ದು, ಅದರಲ್ಲಿ, ಶುಕ್ರವಾರ ದೃಢಪಟ್ಟ ಹೊಸ ಪ್ರಕರಣಗಳ ಸಂಖ್ಯೆ 195 ಎಂದು ಉಲ್ಲೇಖಿಸಿದೆ. ಅದಕ್ಕೂ ಮೊದಲು ಕಳುಹಿಸಿದ್ದ ವರದಿಯಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 142 ಕೋವಿಡ್ ಪ್ರಕರಣಗಳು ದಾಖಲಾಗಿವೆ. 216 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.</p>.<p>ಸಕ್ರಿಯ ಪ್ರಕರಣಗಳ ಸಂಖ್ಯೆ 1,410ಕ್ಕೆ ಇಳಿದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿದ್ದು, ಸದ್ಯ 52 ಮಂದಿ ಇದ್ದಾರೆ. ಹೋಂ ಐಸೊಲೇಷನ್ನಲ್ಲಿ 72 ಮಂದಿ ಇದ್ದಾರೆ. ಉಳಿದವರು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 29,343 ಮಂದಿಗೆ ಕೋವಿಡ್ ದೃಢಪಟ್ಟಿದೆ. 27,454 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಯೇತರ ಕಾರಣದಿಂದ ಮೃತಪಟ್ಟ ಸೋಂಕಿತರೂ ಸೇರಿದಂತೆ 504 ಮಂದಿ ಕೊನೆಯುಸಿರೆಳೆದಿದ್ದಾರೆ.</p>.<p>ಶನಿವಾರ 1,599 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,469 ವರದಿಗಳು ನೆಗೆಟಿವ್ ಬಂದಿವೆ. 130 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಹಳೆಯ 12 ಪ್ರಕರಣಗಳು ಸೇರಿದಂತೆ 142 ಪ್ರಕರಣಗಳನ್ನು ಜಿಲ್ಲಾಡಳಿತ ವರದಿಯಲ್ಲಿ ಉಲ್ಲೇಖಿಸಿದೆ.</p>.<p>ಹೊಸ ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 59, ಗುಂಡ್ಲುಪೇಟೆಯ 44, ಕೊಳ್ಳೇಗಾಲದ 14, ಹನೂರಿನ 16, ಯಳಂದೂರು ತಾಲ್ಲೂಕಿನ ಎಂಟು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ.</p>.<p>ಶನಿವಾರ ಗುಣಮುಖರಾದ ಗುಣಮುಖರಾದ 216 ಜನರಲ್ಲಿ, ಆಸ್ಪತ್ರೆಯಲ್ಲಿ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಕೇರ್ ಕೇಂದ್ರದಲ್ಲಿ 185 ಮಂದಿ ಇದ್ದರು. ಹೋಂ ಐಸೊಲೇಷನ್ನಲ್ಲಿ ಎಂಟು ಮಂದಿ ಇದ್ದರು.</p>.<p>ಚಾಮರಾಜನಗರ ತಾಲ್ಲೂಕಿನ 71, ಗುಂಡ್ಲುಪೇಟೆ 42, ಕೊಳ್ಳೇಗಾಲದ 31, ಹನೂರಿನ 50, ಯಳಂದೂರು ತಾಲ್ಲೂಕಿನ 21 ಮಂದಿ ಮತ್ತು ಹೊರ ಜಿಲ್ಲೆಯ ಒಬ್ಬರು ಕೋವಿಡ್ ಗೆದ್ದಿದ್ದಾರೆ.</p>.<p class="Subhead"><strong>ಪರಿಷ್ಕೃತ ವರದಿ:</strong> ಜಿಲ್ಲಾಡಳಿತವು ಶುಕ್ರವಾರ ತಡರಾತ್ರಿ ಪರಿಷ್ಕೃತ ವರದಿ ಕಳುಹಿಸಿದ್ದು, ಅದರಲ್ಲಿ, ಶುಕ್ರವಾರ ದೃಢಪಟ್ಟ ಹೊಸ ಪ್ರಕರಣಗಳ ಸಂಖ್ಯೆ 195 ಎಂದು ಉಲ್ಲೇಖಿಸಿದೆ. ಅದಕ್ಕೂ ಮೊದಲು ಕಳುಹಿಸಿದ್ದ ವರದಿಯಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>