<p><strong>ಚಾಮರಾಜನಗರ: </strong>ಅಕ್ಷಯ ತೃತೀಯ ದಿನವಾದ ಮಂಗಳವಾರ ಜಿಲ್ಲಾಕೇಂದ್ರದ ಚಿನ್ನಾಭರಣ ಅಂಗಡಿಗಳಲ್ಲಿ ಜನ ಸಂದಣಿ ಕಂಡು ಬಂತು.</p>.<p>ನಗರದಲ್ಲಿ ಚೆನ್ನಮ್ಮನ್ನೂರ್ ಜ್ಯುವೆಲ್ಲರ್ಸ್ ಬಿಟ್ಟರೆ ಬೇರೆ ದೊಡ್ಡ ಮಟ್ಟಿನ ಆಭರಣದ ಅಂಗಡಿಗಳಿಲ್ಲ. ಹಾಗಿದ್ದರೂ ಇರುವ ಮಳಿಗೆಗಳಿಗೆ ಭೇಟಿ ನೀಡಿದ ಜನರು ಚಿನ್ನ ಖರೀದಿಯಲ್ಲಿ ತೊಡಗಿದ್ದರು.</p>.<p>ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ದಿನ. ಅಂದು ಚಿನ್ನಾಭರಣ ಖರೀದಿಸಿದರೆ ಐಶ್ವರ್ಯ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ, ಆಭರಣ ಮಳಿಗೆಗಳು ಕೂಡ ಹಲವು ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತವೆ.</p>.<p>ಜಿಲ್ಲಾ ಕೇಂದ್ರದ ದೊಡ್ಡ ಅಂಗಡಿ ಬೀದಿಗಳಲ್ಲಿ ಹೆಚ್ಚು ಆಭರಣ ಅಂಗಡಿಗಳಿವೆ. ಎಲ್ಲ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಮಂಗಳವಾರ ಹೆಚ್ಚಿತ್ತು. ತಮ್ಮಲ್ಲಿರುವ ಹಣಕ್ಕೆ ಅನುಸಾರ ಜನರು ಚಿನ್ನ ಖರೀದಿಸಿದರು.</p>.<p>ಕೆಲವು ಮಂದಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಕೂಡ ಅಕ್ಷಯ ತೃತೀಯದಂದೇ ಬಿಡಿಸಿಕೊಂಡರು.</p>.<p class="Briefhead"><strong>ರಾಯರ ಬೃಂದಾವನಕ್ಕೆ ಶ್ರೀಗಂಧ ಲೇಪನ</strong></p>.<p>ಅಕ್ಷಯ ತೃತೀಯ ಅಂಗವಾಗಿ ಚಾಮರಾಜನಗರದ ವಾದಿರಾಜನಗರದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃತ್ತಿಕಾ ಬೃಂದಾವನಕ್ಕೆ ಶ್ರೀಗಂಧದ ಲೇಪನ ಮಾಡಲಾಗಿತ್ತು.</p>.<p>ಬೆಳಗ್ಗೆ ರಾಯರ ಬೃಂದಾವನಕ್ಕೆ ಸಾಂಪ್ರಾದಾಯಿಕವಾಗಿ ಅಭಿಷೇಕಗಳನ್ನು ಮಾಡಿ ನಂತರ 2 ಕೆಜಿ ಶ್ರೀಗಂಧದ ಚಕ್ಕೆಗಳನ್ನು ತೇದು ರಾಯರ ಬೃಂದಾವನಕ್ಕೆ ಲೇಪನ ಮಾಡಲಾಯಿತು.</p>.<p>ಮುಖ್ಯ ಅರ್ಚಕರಾದ ಪವನಾಚಾರ್, ಶ್ರೀಧರಾಚಾರ್, ರಾಮಚಂದ್ರ ಮಾರುತಿ, ದೇವಸ್ಥಾನದ ವ್ಯವಸ್ಥಾಪಕರಾದ ನಂಜುಂಡಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಅಕ್ಷಯ ತೃತೀಯ ದಿನವಾದ ಮಂಗಳವಾರ ಜಿಲ್ಲಾಕೇಂದ್ರದ ಚಿನ್ನಾಭರಣ ಅಂಗಡಿಗಳಲ್ಲಿ ಜನ ಸಂದಣಿ ಕಂಡು ಬಂತು.</p>.<p>ನಗರದಲ್ಲಿ ಚೆನ್ನಮ್ಮನ್ನೂರ್ ಜ್ಯುವೆಲ್ಲರ್ಸ್ ಬಿಟ್ಟರೆ ಬೇರೆ ದೊಡ್ಡ ಮಟ್ಟಿನ ಆಭರಣದ ಅಂಗಡಿಗಳಿಲ್ಲ. ಹಾಗಿದ್ದರೂ ಇರುವ ಮಳಿಗೆಗಳಿಗೆ ಭೇಟಿ ನೀಡಿದ ಜನರು ಚಿನ್ನ ಖರೀದಿಯಲ್ಲಿ ತೊಡಗಿದ್ದರು.</p>.<p>ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ದಿನ. ಅಂದು ಚಿನ್ನಾಭರಣ ಖರೀದಿಸಿದರೆ ಐಶ್ವರ್ಯ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ, ಆಭರಣ ಮಳಿಗೆಗಳು ಕೂಡ ಹಲವು ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತವೆ.</p>.<p>ಜಿಲ್ಲಾ ಕೇಂದ್ರದ ದೊಡ್ಡ ಅಂಗಡಿ ಬೀದಿಗಳಲ್ಲಿ ಹೆಚ್ಚು ಆಭರಣ ಅಂಗಡಿಗಳಿವೆ. ಎಲ್ಲ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಮಂಗಳವಾರ ಹೆಚ್ಚಿತ್ತು. ತಮ್ಮಲ್ಲಿರುವ ಹಣಕ್ಕೆ ಅನುಸಾರ ಜನರು ಚಿನ್ನ ಖರೀದಿಸಿದರು.</p>.<p>ಕೆಲವು ಮಂದಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಕೂಡ ಅಕ್ಷಯ ತೃತೀಯದಂದೇ ಬಿಡಿಸಿಕೊಂಡರು.</p>.<p class="Briefhead"><strong>ರಾಯರ ಬೃಂದಾವನಕ್ಕೆ ಶ್ರೀಗಂಧ ಲೇಪನ</strong></p>.<p>ಅಕ್ಷಯ ತೃತೀಯ ಅಂಗವಾಗಿ ಚಾಮರಾಜನಗರದ ವಾದಿರಾಜನಗರದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃತ್ತಿಕಾ ಬೃಂದಾವನಕ್ಕೆ ಶ್ರೀಗಂಧದ ಲೇಪನ ಮಾಡಲಾಗಿತ್ತು.</p>.<p>ಬೆಳಗ್ಗೆ ರಾಯರ ಬೃಂದಾವನಕ್ಕೆ ಸಾಂಪ್ರಾದಾಯಿಕವಾಗಿ ಅಭಿಷೇಕಗಳನ್ನು ಮಾಡಿ ನಂತರ 2 ಕೆಜಿ ಶ್ರೀಗಂಧದ ಚಕ್ಕೆಗಳನ್ನು ತೇದು ರಾಯರ ಬೃಂದಾವನಕ್ಕೆ ಲೇಪನ ಮಾಡಲಾಯಿತು.</p>.<p>ಮುಖ್ಯ ಅರ್ಚಕರಾದ ಪವನಾಚಾರ್, ಶ್ರೀಧರಾಚಾರ್, ರಾಮಚಂದ್ರ ಮಾರುತಿ, ದೇವಸ್ಥಾನದ ವ್ಯವಸ್ಥಾಪಕರಾದ ನಂಜುಂಡಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>