<p><strong>ಯಳಂದೂರು</strong>: ಪ್ರಸಿದ್ಧ ಬಿಳಿಗಿರಿಬೆಟ್ಟದ ಪೋಡುಗಳ ಸುತ್ತಮುತ್ತ ಮದ್ಯ ಮಾರಾಟ ಹೆಚ್ಚಾಗಿದೆ. ಶಾಲೆಗಳ ಬಳಿ ಸಂಜೆ ಮದ್ಯ ಸೇವಿಸಿ ಬಾಟಲ್ ಹಾಗೂ ಆಹಾರ ತ್ಯಾಜ್ಯ ಬಿಸಾಡುತ್ತಾರೆ. ಶಾಲೆಗಳು ಸುತ್ತುಗೋಡೆ, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಮಕ್ಕಳು ಗ್ರಾಮ ಸಭೆಯಲ್ಲಿ ದೂರಿದರು.</p>.<p>ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಹತ್ತಾರು ಸಮಸ್ಯೆಗಳನ್ನು ಮುಖಂಡರ ಎದುರಿನಲ್ಲಿ ಬಿಚ್ಚಿಟ್ಟರು.</p>.<p>ಯರಕನಗದ್ದೆ, ಬಿಳಿಗಿರಿಬೆಟ್ಟ ಗ್ರಾಮ ಶಾಲೆಗಳಲ್ಲಿ ಸೋಲಿಗ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗರ ಚಿಣ್ಣರು ಕಲಿಯುತ್ತಿದ್ದಾರೆ. ಕಲ್ಯಾಣಿಪೋಡು ದಾರಿ ಪೊದೆಗಳಿಂದ ಆವೃತವಾಗಿದ್ದು, ಶಾಲೆಗೆ ತೆರಳುವುದು ಸಮಸ್ಯೆಯಾಗಿದೆ. ವನ್ಯ ಜೀವಿಗಳ ಆತಂಕ ಹಾಗೂ ಅಲ್ಲಲ್ಲಿ ಮದ್ಯಪಾನಿಗಳ ಸಂಚಾರದಿಂದ ಮಕ್ಕಳು ಪರಿತಪಿಸಬೇಕು ಎಂದು ಪೋಷಕರು ಆರೋಪಿಸಿದರು.</p>.<p>ನೋಡಲ್ ಅಧಿಕಾರಿ ಬೊಮ್ಮಯ್ಯ ಮಾತನಾಡಿ, ‘ಮಕ್ಕಳ ಕಲಿಕಾ ವಾತಾವರಣವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಶೌಚಾಲಯ ಹಾಗೂ ಕೊಠಡಿಗಳನ್ನು ಶುದ್ಧವಾಗಿ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರವೂ ಇದೆ. ಸುತ್ತುಗೋಡೆ ನಿರ್ಮಾಣಕ್ಕೆ ಪಂಚಾಯಿತಿ ಮೂಲಕ ನೆರವು ಕಲ್ಪಿಸಲು ಮನವಿ ಸಲ್ಲಿಸಲಾಗುವುದು’ ಎಂದರು.</p>.<p>ಪಿಡಿಒ ಶಶಿಕಲಾ, ಪಂಚಾಯಿತಿ ಅಧ್ಯಕ್ಷ ಸಿಡಿ ಮಾದೇವ, ಸದಸ್ಯ ಪ್ರತೀಪ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ, ಸಾಕಮ್ಮ, ಬಸವಣ್ಣ, ರಂಗಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ಪ್ರಸಿದ್ಧ ಬಿಳಿಗಿರಿಬೆಟ್ಟದ ಪೋಡುಗಳ ಸುತ್ತಮುತ್ತ ಮದ್ಯ ಮಾರಾಟ ಹೆಚ್ಚಾಗಿದೆ. ಶಾಲೆಗಳ ಬಳಿ ಸಂಜೆ ಮದ್ಯ ಸೇವಿಸಿ ಬಾಟಲ್ ಹಾಗೂ ಆಹಾರ ತ್ಯಾಜ್ಯ ಬಿಸಾಡುತ್ತಾರೆ. ಶಾಲೆಗಳು ಸುತ್ತುಗೋಡೆ, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಮಕ್ಕಳು ಗ್ರಾಮ ಸಭೆಯಲ್ಲಿ ದೂರಿದರು.</p>.<p>ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಹತ್ತಾರು ಸಮಸ್ಯೆಗಳನ್ನು ಮುಖಂಡರ ಎದುರಿನಲ್ಲಿ ಬಿಚ್ಚಿಟ್ಟರು.</p>.<p>ಯರಕನಗದ್ದೆ, ಬಿಳಿಗಿರಿಬೆಟ್ಟ ಗ್ರಾಮ ಶಾಲೆಗಳಲ್ಲಿ ಸೋಲಿಗ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗರ ಚಿಣ್ಣರು ಕಲಿಯುತ್ತಿದ್ದಾರೆ. ಕಲ್ಯಾಣಿಪೋಡು ದಾರಿ ಪೊದೆಗಳಿಂದ ಆವೃತವಾಗಿದ್ದು, ಶಾಲೆಗೆ ತೆರಳುವುದು ಸಮಸ್ಯೆಯಾಗಿದೆ. ವನ್ಯ ಜೀವಿಗಳ ಆತಂಕ ಹಾಗೂ ಅಲ್ಲಲ್ಲಿ ಮದ್ಯಪಾನಿಗಳ ಸಂಚಾರದಿಂದ ಮಕ್ಕಳು ಪರಿತಪಿಸಬೇಕು ಎಂದು ಪೋಷಕರು ಆರೋಪಿಸಿದರು.</p>.<p>ನೋಡಲ್ ಅಧಿಕಾರಿ ಬೊಮ್ಮಯ್ಯ ಮಾತನಾಡಿ, ‘ಮಕ್ಕಳ ಕಲಿಕಾ ವಾತಾವರಣವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಶೌಚಾಲಯ ಹಾಗೂ ಕೊಠಡಿಗಳನ್ನು ಶುದ್ಧವಾಗಿ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರವೂ ಇದೆ. ಸುತ್ತುಗೋಡೆ ನಿರ್ಮಾಣಕ್ಕೆ ಪಂಚಾಯಿತಿ ಮೂಲಕ ನೆರವು ಕಲ್ಪಿಸಲು ಮನವಿ ಸಲ್ಲಿಸಲಾಗುವುದು’ ಎಂದರು.</p>.<p>ಪಿಡಿಒ ಶಶಿಕಲಾ, ಪಂಚಾಯಿತಿ ಅಧ್ಯಕ್ಷ ಸಿಡಿ ಮಾದೇವ, ಸದಸ್ಯ ಪ್ರತೀಪ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ, ಸಾಕಮ್ಮ, ಬಸವಣ್ಣ, ರಂಗಮ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>