<p><strong>ಚಾಮರಾಜನಗರ</strong>: ಇನ್ನು ಐದು ವರ್ಷಗಳಲ್ಲಿ ಚಾಮರಾಜನಗರ ಬಹಳಷ್ಟು ಮುಂದುವರಿಯಲಿದೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ ಮಂಗಳವಾರ ಹೇಳಿದರು. </p>.<p>ನಗರದಲ್ಲಿ ಆರ್ಬ್ ಎನರ್ಜಿ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಮ್ಮಿಕೊಂಡಿದ್ದ ಕೈಗಾರಿಕೆಗಳಲ್ಲಿ ಸೋಲಾರ್ ಬಳಕೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. </p>.<p>‘ಈಗಾಗಲೇ ಕೈಗಾರಿಕಾ ಪ್ರದೇಶದಲ್ಲಿ 1,460 ಎಕರೆ ಪ್ರದೇಶದಲ್ಲಿ ಕೆಲಸ ನಡೆಯುತ್ತಿದ್ದು ಇನ್ನು 900 ಎಕರೆ ಬಾಕಿ ಇದೆ. 2,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಬಂದಿದ್ದೇ ಅದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಮತ್ತು ಜಿಲ್ಲೆ ಬೆಳೆಯುತ್ತದೆ’ ಎಂದು ತಿಳಿಸಿದರು.</p>.<p>‘ಸೌರಶಕ್ತಿಯಿಂದ ಬಹಳಷ್ಟು ಉಪಯೋಗ ಇದ್ದು, ಇದಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಸೋಲಾರ್ ಬಳಕೆಯಿಂದ ಪರಿಸರ ಮಾಲಿನ್ಯ ತಪ್ಪುತ್ತದೆ. ಕೈಗಾರಿಕೆಗಳು ಸೋಲಾರ್ ಬಳಕೆಗೆ ಮುಂದಾಗಬೇಕು’ ಎಂದರು. </p>.<p>ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಎ.ಜಯಸಿಂಹ ಮಾತನಾಡಿ, ‘ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪುಟ್ಟ ಜನರಿಗೂ ಜಾಗ ಸಿಗುವಂತಾಗಬೇಕು. ಸಂತೇಮರಹಳ್ಳಿ ಸಮೀಪ ಸಾಕಷ್ಟು ಜಾಗ ಇದ್ದು ಅಲ್ಲೂ ಕೈಗಾರಿಕೆಗಳು ಬಂದು ಆ ಪ್ರದೇಶವೂ ಬೆಳೆಯುವಂತಾಗಬೇಕು’ ಎಂದರು.</p>.<p>ಆರ್ಬ್ ಎನರ್ಜಿ ವ್ಯವಸ್ಥಾಪಕ ಯಶವಂತ್ ಅವರು ಉಪನ್ಯಾಸ ನೀಡಿದರು. </p>.<p>ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್, ಕರಿಕಲ್ಲು ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ಎಫ್.ಕೆ.ಸಿ.ಸಿ.ಐ ಜಿಲ್ಲಾ ಅಧ್ಯಕ್ಷ ಪ್ರಭಾಕರ್, ಜವಳಿ ಇಲಾಖೆ ಉಪನಿರ್ದೇಶಕ ಶಶಿಧರ್, ಇಮ್ರಾನ್ ಅಹಮದ್ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಇನ್ನು ಐದು ವರ್ಷಗಳಲ್ಲಿ ಚಾಮರಾಜನಗರ ಬಹಳಷ್ಟು ಮುಂದುವರಿಯಲಿದೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ ಮಂಗಳವಾರ ಹೇಳಿದರು. </p>.<p>ನಗರದಲ್ಲಿ ಆರ್ಬ್ ಎನರ್ಜಿ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಮ್ಮಿಕೊಂಡಿದ್ದ ಕೈಗಾರಿಕೆಗಳಲ್ಲಿ ಸೋಲಾರ್ ಬಳಕೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. </p>.<p>‘ಈಗಾಗಲೇ ಕೈಗಾರಿಕಾ ಪ್ರದೇಶದಲ್ಲಿ 1,460 ಎಕರೆ ಪ್ರದೇಶದಲ್ಲಿ ಕೆಲಸ ನಡೆಯುತ್ತಿದ್ದು ಇನ್ನು 900 ಎಕರೆ ಬಾಕಿ ಇದೆ. 2,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಬಂದಿದ್ದೇ ಅದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಮತ್ತು ಜಿಲ್ಲೆ ಬೆಳೆಯುತ್ತದೆ’ ಎಂದು ತಿಳಿಸಿದರು.</p>.<p>‘ಸೌರಶಕ್ತಿಯಿಂದ ಬಹಳಷ್ಟು ಉಪಯೋಗ ಇದ್ದು, ಇದಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಸೋಲಾರ್ ಬಳಕೆಯಿಂದ ಪರಿಸರ ಮಾಲಿನ್ಯ ತಪ್ಪುತ್ತದೆ. ಕೈಗಾರಿಕೆಗಳು ಸೋಲಾರ್ ಬಳಕೆಗೆ ಮುಂದಾಗಬೇಕು’ ಎಂದರು. </p>.<p>ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಎ.ಜಯಸಿಂಹ ಮಾತನಾಡಿ, ‘ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪುಟ್ಟ ಜನರಿಗೂ ಜಾಗ ಸಿಗುವಂತಾಗಬೇಕು. ಸಂತೇಮರಹಳ್ಳಿ ಸಮೀಪ ಸಾಕಷ್ಟು ಜಾಗ ಇದ್ದು ಅಲ್ಲೂ ಕೈಗಾರಿಕೆಗಳು ಬಂದು ಆ ಪ್ರದೇಶವೂ ಬೆಳೆಯುವಂತಾಗಬೇಕು’ ಎಂದರು.</p>.<p>ಆರ್ಬ್ ಎನರ್ಜಿ ವ್ಯವಸ್ಥಾಪಕ ಯಶವಂತ್ ಅವರು ಉಪನ್ಯಾಸ ನೀಡಿದರು. </p>.<p>ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್, ಕರಿಕಲ್ಲು ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ಎಫ್.ಕೆ.ಸಿ.ಸಿ.ಐ ಜಿಲ್ಲಾ ಅಧ್ಯಕ್ಷ ಪ್ರಭಾಕರ್, ಜವಳಿ ಇಲಾಖೆ ಉಪನಿರ್ದೇಶಕ ಶಶಿಧರ್, ಇಮ್ರಾನ್ ಅಹಮದ್ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>