ಕಾನನದಲ್ಲಿದ್ದರೂ ಗಜ ರಾಜನ ಸಮೀಪದ ದರ್ಶನ ಮಾಡಲಾಗದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಕೋಡಿಗೆ ಬಂದ ಗಜ ರಾಜನ ಮರಿಯನ್ನು ಕಂಡು ಸಂಭ್ರಮಿಸಿದರು. ಮರಿಗೆ ಹಾಲು ನೀಡಿ ಸಂತೈಸಿದರು. ಆಹಾರ ನೀಡಿ ಮುದ್ದಾಡಿದರು. ಪ್ರಾಥಮಿಕ ಶಾಲೆಯ ಚಿಣ್ಣರು, 'ಆನೆ ಬಂತೊಂದಾನೆ, ಯಾವೂರ ಆನೆ' ಎಂದು ಹಾಡಿ ಮರಿಯೊಟ್ಟಿಗೆ ಕುಣಿದು ಕುಪ್ಪಳಿಸಿದರು.