ಮೋಡಳ್ಳಿಯಲ್ಲಿರುವ ಐದು ಎಕರೆ ಜಮೀನಿನ ಪೈಕಿ ಮೂರು ಎಕರೆಯಲ್ಲಿ ನೇಂದ್ರ ಬಾಳೆ ಬೆಳೆದಿದ್ದರು. ಸುಮಾರು ಐದು ಸಾವಿರ ಬಾಳೆ ಗಿಡಗಳನ್ನು ಹಾಕಿದ್ದು ಬಹುತೇಕ ಎಲ್ಲಾ ಮರಗಳನ್ನು ಬಾಳೆ ಹಣ್ಣು ಕಟಾವಿಗೆ ಬಂದಿದ್ದವು. ಆದರೆ ಈಚೆಗೆ ಬೀಸಿದ ಭಾರಿ ಗಾಳಿಗೆ ಸುಮಾರು ಎರಡು ಸಾವಿರ ಮರಗಳು ನೆಲಕ್ಕುರಳಿವೆ. ವರ್ಷದಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಫಸಲು ಈಗ ನೆಲಕಚ್ಚಿರುವುದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ವೆಂಕಟೇಶ್ ಒತ್ತಾಯಿಸಿದ್ದಾರೆ.