‘ಸಾಂಸ್ಕೃತಿಕ ಮನ್ನಣೆ ನೀಡುವ ರಂಗೋಲಿಯೂ ನಿಸರ್ಗಕ್ಕೆ ಪೂರಕ ಆಗಿರಬೇಕು. ಝಗ ಮಗಿಸುವ ರಂಗು ರಂಗಿನ ಬಣ್ಣಗಳಲ್ಲಿ ರಾಸಾಯನಿಕ ಇರುತ್ತದೆ. ಹೂ ದಳ, ಕಲ್ಲು ಪುಡಿ, ಬೀಜಗಳ ಸಹಜಬಣ್ಣಗಳನ್ನು ಬಳಸಿದ ರಂಗೋಲಿ ನಡುವೆ ಪುಷ್ಪಗಳ ಎಲೆ, ಕೇಸರ ಉದುರಿಸಿ, ನಡುವೆ ಹಣತೆಹೆಚ್ಚಿದರೆ ಹಬ್ಬದ ಮಿನುಗು, ಮಿಂಚು ಹೆಚ್ಚುತ್ತದೆ. ಹೆಣ್ಣುಮಕ್ಕಳ ಸೃಜನಶೀಲತೆಯ ಪರಿಚಯವೂಆಗುತ್ತದೆ’ ಎಂದು ಮಲಾರಪಾಳ್ಯ ಶಾಲೆಯ ವಿದ್ಯಾರ್ಥಿಗಳಾದ ಅಮೃತ, ಖುಷಿ, ಇಂಚರ, ಸಂದೀಪ,ಅರ್ಜುನ್ ಮತ್ತು ಮಹದೇಪ್ರಸಾದ್ ಅವರು ಹೇಳಿದರು.