ಪ್ರಶಸ್ತಿಗೆ ಆಯ್ಕೆಯಾಗಿರುವ ಸುನಿತಾ ಧೈರ್ಯಂ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾರಿಯಮ್ಮನ ಟ್ರಸ್ಟ್ ನಡೆಸುತ್ತಾ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ಹುಲಿ, ಚಿರತೆಗಳು ಜಾನುವಾರುಗಳನ್ನು ಕೊಂದರೆ, ಜಾನುವಾರುಗಳ ಮಾಲೀಕರಿಗೆ ಟ್ರಸ್ಟ್ ಮೂಲಕ ಪರಿಹಾರ ವಿತರಿಸಿ, ಗ್ರಾಮಸ್ಥರು ಹುಲಿ, ಚಿರತೆಗಳಿಗೆ ಯಾವುದೇ ಹಾನಿ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.