‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ₹500 ಕೋಟಿ ವೆಚ್ಚವಾಗಲಿದ್ದು, ಸರ್ಕಾರದಿಂದ ನೆರವು ಪಡೆಯದೇ ನಿರ್ಮಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಹಲವು ಉದ್ಯಮಿಗಳು ದೇಣಿಗೆ ನೀಡಲು ಮುಂದೆ ಮಂದಿದ್ದಾರೆ. ಆದರೆ, ಮಂದಿರದಲ್ಲಿ ಜನಸಾಮಾನ್ಯರ ಪಾಲೂ ಇರಬೇಕು ಎಂಬ ಆಶಯ ಟ್ರಸ್ಟ್ನದ್ದು. ಹಾಗಾಗಿ ಜನರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದೆ’ ಎಂದರು.