‘ಮನೆ, ದೇವಾಲಯಗಳಲ್ಲಿ ಭಗವಾಧ್ವಜ ಹಾರಿಸಬೇಕು. ರಂಗೋಲಿ, ತೋರಣ ಕಟ್ಟಿ ಶೃಂಗರಿಸಬೇಕು, ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ಮನೆಯಲ್ಲಿ ದೀಪ, ದೂಪ ಹಚ್ಚಿ, ಮೂರು ಬಾರಿ ಓಂಕಾರ ಹೇಳಿ, ಶಂಖ ಜಾಗಟೆ ಮೊಳಗಿಸಬೇಕು. ಶ್ರೀರಾಮ ತಾರಕ ಮಂತ್ರವನ್ನು (ಶ್ರೀರಾಮ ಜಯರಾಮ ಜಯ ಜಯ ರಾಮ) 13 ಬಾರಿ ಪಠಿಸಬೇಕು. ದೇವಾಲಯಗಳಲ್ಲಿ ರಾಮ ಮಂದಿರಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳನ್ನು ಹಮ್ಮಿಕೊಂಡು, ಭೂಮಿ ಪೂಜೆ ಕಾರ್ಯ ಸುಲಲಿತವಾಗಿ ನಡೆಯಲಿ ಎಂದು ಪ್ರಾರ್ಥಿಸಬೇಕು’ ಎಂದು ಅವರು ಮನವಿ ಮಾಡಿದರು.