ಮತದಾನ ಮಾಡಲು ವೀಲ್ಚೇರ್ನಲ್ಲಿ ಬಂದ ಬಿಜೆಪಿ ಸದಸ್ಯ ಮಹದೇವಯ್ಯ
ಸುರೇಶ್ ಚಾಮರಾಜನಗರ ನಗರಸಭೆ ಅಧ್ಯಕ್ಷ
ಸುನೀಲ್ ಬೋಸ್
ಸಿ.ಪುಟ್ಟರಂಗಶೆಟ್ಟಿ
ಸಿ.ಎಸ್.ನಿರಂಜನಕುಮಾರ್
‘ಕುತಂತ್ರ ರಾಜಕಾರಣ’ ಕಾಂಗ್ರೆಸ್ನಿಂದ ಗೆದ್ದಿದ್ದ ಮೂವರು ಸದಸ್ಯರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಿದ ಬಿಜೆಪಿ ಕುತಂತ್ರ ರಾಜಕಾರಣ ಮಾಡಿದೆ. ಪಕ್ಷದ ವಿಪ್ ಉಲ್ಲಂಘಿಸಿದ ಮೂವರು ಸದಸ್ಯರ ಸದಸ್ಯತ್ವ ಅನರ್ಹತೆಗೊಳಿಸಲು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಪಕ್ಷದಿಂದಲೂ ಉಚ್ಛಾಟಿಸುವಂತೆ ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು. ರಾಜಕಾರಣ ಹೊರತಾಗಿ ಚಾಮರಾಜನಗರದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಶ್ರಮಿಸಬೇಕು.
–ಸುನೀಲ್ ಬೋಸ್ ಸಂಸದ
‘ತಕ್ಕ ಪಾಠ’ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಅಡ್ಡಮತದಾನ ಮಾಡಿದ ಸದಸ್ಯೆಗೆ ಹಾಗೂ ಚುನಾವಣೆಗೆ ಗೈರಾದ ಮೂವರ ವಿರುದ್ಧ ಉಚ್ಛಾಟನೆ ಹಾಗೂ ಸದಸ್ಯತ್ವ ಅನರ್ಹತೆಯ ಕ್ರಮ ಜರುಗಿಸಲಾಗುವುದು. ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಲಾಗುವುದು.
–ಪುಟ್ಟರಂಗಶೆಟ್ಟಿ ಶಾಸಕ
- ‘ಕಾಂಗ್ರೆಸ್ ಕುತಂತ್ರಕ್ಕೆ ಫಲ ಸಿಗಲಿಲ್ಲ’ ಗುಂಡ್ಲುಪೇಟೆ ಪುರಸಭೆ ಹಾಗೂ ಕೊಳ್ಳೇಗಾಲ ನಗರಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಪಿತೂರಿ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಚಾಮರಾಜನಗರ ನಗರಭೆಯಲ್ಲೂ ಅಧಿಕಾರ ಹಿಡಿಯಲು ಜಿಲ್ಲಾಧಿಕಾರಿ ಮೂಲಕ ಬಿಎಸ್ಪಿ ಸದಸ್ಯನ ಸದ್ಯತ್ವ ಅನರ್ಹಗೊಳಿಸಿತು. ಆದರೆ ಕಾಂಗ್ರೆಸ್ನ ಕುತಂತ್ರ ರಾಜಕಾರಣ ಫಲ ನೀಡಲಿಲ್ಲ. ಬಿಜೆಪಿ ವಿಜಯ ಪತಾಕೆ ಹಾರಿಸಿದೆ.
–ಸಿ.ಎಸ್.ನಿರಂಜನಕುಮಾರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
- ಸಮರ್ಪಕ ಕಸ ವಿಲೇವಾರಿಗೆ ಒತ್ತು ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಹಾಗೂ ಸಮರ್ಪಕ ಕಸ ವಿಲೇವಾರಿಗೆ ಒತ್ತು ನೀಡಲಾಗುವುದು. ಆಡಳಿತ ಯಂತ್ರಕ್ಕೆ ಚುರುಕು ನೀಡಲಾಗುವುದು.