ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಮಾತನಾಡಿ, ‘ಒಂದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ನಿಂತು ಗೆಲುವು ಸಾಧಿಸಿದ್ದ ನಮ್ಮ ಪುಟ್ಟರಂಗಶೆಟ್ಟಿ ನಿಜವಾದ ಅಹಿಂದ ನಾಯಕರು. ಪ್ರಬಲ ನಾಯಕರಾದ ಸೋಮಣ್ಣ, ಬೆಂಕಿ ಮಹದೇವು, ಮಲ್ಲಿಕಾರ್ಜುನಪ್ಪ ಸೇರಿದಂತೆ ಇತರರನ್ನು ಸೋಲಿಸಿದವರು. ಇಂತಹ ನಾಯಕರಿಗೆ ಕಾಂಗ್ರೆಸ್ ಪಕ್ಷದವರು ಅನ್ಯಾಯ ಮಾಡಿದೆ’ ಎಂದು ಹೇಳಿದರು.