<p><strong>ಚಾಮರಾಜನಗರ: </strong>ನಗರದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ನಗರಸಭೆ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಸೋಮವಾರ ಉದ್ಘಾಟನೆಯಾಗಲಿದೆ.ನಗರಸಭೆ ನಿರ್ಮಿಸಿರುವ ಮೊದಲ ವಾಣಿಜ್ಯ ಸಂಕೀರ್ಣ ಇದು.</p>.<p>ಪೌರಾಡಾಳಿತ ಸಚಿವ ನಾರಾಯಣ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.</p>.<p>ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ₹2.90 ಕೋಟಿ ವೆಚ್ಚದಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.</p>.<p>ತಳಮಹಡಿ, ನೆಲಮಹಡಿ ಹಾಗೂ ಮೊದಲ ಮಹಡಿಯನ್ನು ಹೊಂದಿರುವ ಕಟ್ಟಡವು ಒಟ್ಟು 1,148.52 ಚದರ ಮೀಟರ್ ವಿಸ್ತೀರ್ಣವಿದೆ. ನೆಲಮಹಡಿ 381.84 ಚ.ಮೀ ವಿಸ್ತೀರ್ಣವಿದ್ದರೆ ಉಳಿದ ಎರಡು ಮಹಡಿಗಳು ತಲಾ 382.84 ಚ.ಮೀ ವಿಸ್ತೀರ್ಣ ಹೊಂದಿವೆ.</p>.<p>2016-17ನೇ ಸಾಲಿನಲ್ಲೇ ಹಣ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿರಲಿಲ್ಲ. 2018ರ ಮಾರ್ಚ್ನಲ್ಲಿ ಗುತ್ತಿಗೆ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ.</p>.<p class="Subhead">ಏನೆಲ್ಲ ಇದೆ?: ಕಟ್ಟಡದಲ್ಲಿ ಎರಡು ಮಹಡಿಗಳು ಮಾತ್ರ ವಾಣಿಜ್ಯ ಉದ್ದೇಶಕ್ಕೆ ನೀಡಬಹುದಾಗಿದೆ. ಚಿನ್ನದ ಅಂಗಡಿ, ಬಟ್ಟೆಯಂಗಡಿ ಮುಂತಾದ ದೊಡ್ಡ ಮಳಿಗೆಗಳನ್ನು ತೆರೆಯಬಹುದಾಗಿದೆ.</p>.<p>ತಳಮಹಡಿಯಲ್ಲಿ ವಾಹನ ನಿಲುಗಡೆ, ಸಾಮಗ್ರಿಗಳ ದಾಸ್ತಾನು ಕೊಠಡಿ, ಲಿಫ್ಟ್ ಕೊಠಡಿ ಹಾಗೂ ಶೌಚಾಲಯ ಇದೆ. ನೆಲಮಹಡಿ ಮತ್ತು ಮೊದಲ ಮಹಡಿಗಳಲ್ಲಿ ಶಾಪಿಂಗ್ ಮಾಲ್, ಲಿಫ್ಟ್ ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ</p>.<p class="Subhead">ಬಾಡಿಗೆ ₹2.99 ಲಕ್ಷ ನಿಗದಿ: 'ನಗರ ಸಭೆಯಿಂದ ನಿರ್ಮಿಸಲಾಗಿರುವ ಮೊದಲ ವಾಣಿಜ್ಯ ಸಂಕೀರ್ಣ ಇದು. ಟೆಕ್ಸ್ ಟೈಲ್, ಚಿನ್ನದ ಅಂಗಡಿ ಸೇರಿದಂತೆ ದೊಡ್ಡ ಮಟ್ಟಿನ ಮಳಿಗೆಗಳನ್ನು ತೆರೆಯಲು ಬಯಸುವವರಿಗೆ ಇದು ಅನುಕೂಲ' ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಕೆಲವರು ಈಗಾಗಲೇ ಬಾಡಿಗೆಯ ಬಗ್ಗೆ ವಿಚಾರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯು ಇಡೀ ಕಟ್ಟಡಕ್ಕೆ ತಿಂಗಳಿಗೆ ₹2.99 ಲಕ್ಷ ಬಾಡಿಗೆ ನಿಗದಿ ಪಡಿಸಿದೆ. ಠೇವಣಿ ಮೊತ್ತಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು' ಎಂದು ಅವರು ಹೇಳಿದರು.</p>.<p>'ನಗರದಲ್ಲಿ ಮಾಲ್ ಆರಂಭಿಸಲು ಬಯಸಿರುವ ಉದ್ಯಮಿಗಳು ಈಗಾಗಲೇ ಕಟ್ಟಡವನ್ನು ಕೇಳಿದ್ದಾರೆ. ಕೆಲವು ಬಟ್ಟೆ ಅಂಗಡಿಯವರೂ ಆಸಕ್ತಿ ತೋರಿಸಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.</p>.<p class="Subhead">ಮತ್ತೊಂದು ವಾಣಿಜ್ಯ ಸಂಕೀರ್ಣ: ನಗರಸಭೆಯು ಸಂತೇಮರಹಳ್ಳಿ ವೃತ್ತದ ಬಳಿ ಬಹು ಮಹಡಿಗಳ ಮತ್ತೊಂದು ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದೆ. ₹4.5 ಕೋಟಿ ವೆಚ್ಚದಲ್ಲಿ ಇದರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.</p>.<p class="Briefhead">ಖಾಸಗಿ ಬಸ್ ನಿಲ್ದಾಣವೂ ಪೂರ್ಣ</p>.<p>ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಬಳಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯೂ ಪೂರ್ಣಗೊಂಡಿದ್ದು, ಅದು ಕೂಡ ಸೋಮವಾರ ಬಳಕೆಗೆ ಮುಕ್ತವಾಗಲಿದೆ. ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಿಲ್ದಾಣ ಕಳೆದ ವರ್ಷವೇ ಲೋಕಾರ್ಣೆಯಾಗಬೇಕಿತ್ತು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಳೆದ ವರ್ಷದ ನವೆಂಬರ್ 1ರ ವೇಳೆಗೆ ಉದ್ಘಾಟನೆಯಾಗಬೇಕು ಎಂದು ಗಡುವು ನೀಡಿದ್ದರು. ನಿಲ್ದಾಣದ ಬಹುತೇಕ ಕಾಮಗಾರಿಗಳು ಮುಗಿದಿದ್ದರೂ, ಚರಂಡಿ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿಯಾಗಿದ್ದವು.</p>.<p>22 ಬಸ್ಗಳಿಗೆ ನಿಲುಗಡೆ ವ್ಯವಸ್ಥೆ, ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ನಿಲ್ದಾಣದಲ್ಲಿದೆ ಹಾಗೂ ನಿಲ್ದಾಣದ ಸುತ್ತಲೂ ಕಾಂಕ್ರೀಟ್ ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ನಗರದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ನಗರಸಭೆ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಸೋಮವಾರ ಉದ್ಘಾಟನೆಯಾಗಲಿದೆ.ನಗರಸಭೆ ನಿರ್ಮಿಸಿರುವ ಮೊದಲ ವಾಣಿಜ್ಯ ಸಂಕೀರ್ಣ ಇದು.</p>.<p>ಪೌರಾಡಾಳಿತ ಸಚಿವ ನಾರಾಯಣ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.</p>.<p>ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ₹2.90 ಕೋಟಿ ವೆಚ್ಚದಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.</p>.<p>ತಳಮಹಡಿ, ನೆಲಮಹಡಿ ಹಾಗೂ ಮೊದಲ ಮಹಡಿಯನ್ನು ಹೊಂದಿರುವ ಕಟ್ಟಡವು ಒಟ್ಟು 1,148.52 ಚದರ ಮೀಟರ್ ವಿಸ್ತೀರ್ಣವಿದೆ. ನೆಲಮಹಡಿ 381.84 ಚ.ಮೀ ವಿಸ್ತೀರ್ಣವಿದ್ದರೆ ಉಳಿದ ಎರಡು ಮಹಡಿಗಳು ತಲಾ 382.84 ಚ.ಮೀ ವಿಸ್ತೀರ್ಣ ಹೊಂದಿವೆ.</p>.<p>2016-17ನೇ ಸಾಲಿನಲ್ಲೇ ಹಣ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿರಲಿಲ್ಲ. 2018ರ ಮಾರ್ಚ್ನಲ್ಲಿ ಗುತ್ತಿಗೆ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ.</p>.<p class="Subhead">ಏನೆಲ್ಲ ಇದೆ?: ಕಟ್ಟಡದಲ್ಲಿ ಎರಡು ಮಹಡಿಗಳು ಮಾತ್ರ ವಾಣಿಜ್ಯ ಉದ್ದೇಶಕ್ಕೆ ನೀಡಬಹುದಾಗಿದೆ. ಚಿನ್ನದ ಅಂಗಡಿ, ಬಟ್ಟೆಯಂಗಡಿ ಮುಂತಾದ ದೊಡ್ಡ ಮಳಿಗೆಗಳನ್ನು ತೆರೆಯಬಹುದಾಗಿದೆ.</p>.<p>ತಳಮಹಡಿಯಲ್ಲಿ ವಾಹನ ನಿಲುಗಡೆ, ಸಾಮಗ್ರಿಗಳ ದಾಸ್ತಾನು ಕೊಠಡಿ, ಲಿಫ್ಟ್ ಕೊಠಡಿ ಹಾಗೂ ಶೌಚಾಲಯ ಇದೆ. ನೆಲಮಹಡಿ ಮತ್ತು ಮೊದಲ ಮಹಡಿಗಳಲ್ಲಿ ಶಾಪಿಂಗ್ ಮಾಲ್, ಲಿಫ್ಟ್ ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ</p>.<p class="Subhead">ಬಾಡಿಗೆ ₹2.99 ಲಕ್ಷ ನಿಗದಿ: 'ನಗರ ಸಭೆಯಿಂದ ನಿರ್ಮಿಸಲಾಗಿರುವ ಮೊದಲ ವಾಣಿಜ್ಯ ಸಂಕೀರ್ಣ ಇದು. ಟೆಕ್ಸ್ ಟೈಲ್, ಚಿನ್ನದ ಅಂಗಡಿ ಸೇರಿದಂತೆ ದೊಡ್ಡ ಮಟ್ಟಿನ ಮಳಿಗೆಗಳನ್ನು ತೆರೆಯಲು ಬಯಸುವವರಿಗೆ ಇದು ಅನುಕೂಲ' ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು 'ಪ್ರಜಾವಾಣಿ'ಗೆ ತಿಳಿಸಿದರು.</p>.<p>'ಕೆಲವರು ಈಗಾಗಲೇ ಬಾಡಿಗೆಯ ಬಗ್ಗೆ ವಿಚಾರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯು ಇಡೀ ಕಟ್ಟಡಕ್ಕೆ ತಿಂಗಳಿಗೆ ₹2.99 ಲಕ್ಷ ಬಾಡಿಗೆ ನಿಗದಿ ಪಡಿಸಿದೆ. ಠೇವಣಿ ಮೊತ್ತಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು' ಎಂದು ಅವರು ಹೇಳಿದರು.</p>.<p>'ನಗರದಲ್ಲಿ ಮಾಲ್ ಆರಂಭಿಸಲು ಬಯಸಿರುವ ಉದ್ಯಮಿಗಳು ಈಗಾಗಲೇ ಕಟ್ಟಡವನ್ನು ಕೇಳಿದ್ದಾರೆ. ಕೆಲವು ಬಟ್ಟೆ ಅಂಗಡಿಯವರೂ ಆಸಕ್ತಿ ತೋರಿಸಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.</p>.<p class="Subhead">ಮತ್ತೊಂದು ವಾಣಿಜ್ಯ ಸಂಕೀರ್ಣ: ನಗರಸಭೆಯು ಸಂತೇಮರಹಳ್ಳಿ ವೃತ್ತದ ಬಳಿ ಬಹು ಮಹಡಿಗಳ ಮತ್ತೊಂದು ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದೆ. ₹4.5 ಕೋಟಿ ವೆಚ್ಚದಲ್ಲಿ ಇದರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.</p>.<p class="Briefhead">ಖಾಸಗಿ ಬಸ್ ನಿಲ್ದಾಣವೂ ಪೂರ್ಣ</p>.<p>ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಬಳಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯೂ ಪೂರ್ಣಗೊಂಡಿದ್ದು, ಅದು ಕೂಡ ಸೋಮವಾರ ಬಳಕೆಗೆ ಮುಕ್ತವಾಗಲಿದೆ. ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಿಲ್ದಾಣ ಕಳೆದ ವರ್ಷವೇ ಲೋಕಾರ್ಣೆಯಾಗಬೇಕಿತ್ತು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಳೆದ ವರ್ಷದ ನವೆಂಬರ್ 1ರ ವೇಳೆಗೆ ಉದ್ಘಾಟನೆಯಾಗಬೇಕು ಎಂದು ಗಡುವು ನೀಡಿದ್ದರು. ನಿಲ್ದಾಣದ ಬಹುತೇಕ ಕಾಮಗಾರಿಗಳು ಮುಗಿದಿದ್ದರೂ, ಚರಂಡಿ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿಯಾಗಿದ್ದವು.</p>.<p>22 ಬಸ್ಗಳಿಗೆ ನಿಲುಗಡೆ ವ್ಯವಸ್ಥೆ, ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ನಿಲ್ದಾಣದಲ್ಲಿದೆ ಹಾಗೂ ನಿಲ್ದಾಣದ ಸುತ್ತಲೂ ಕಾಂಕ್ರೀಟ್ ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>