ಅಂಬಳೆ, ಚಂಗಚಹಳ್ಳಿ, ಹೆಗ್ಗಡೆಹುಂಡಿ ಹಾಗೂ ಕಂದಹಳ್ಳಿ ಗ್ರಾಮಗಳ ನಾಲ್ಕೂ ದಿಕ್ಕಿನಲ್ಲೂ ನೆಲೆ ನಿಂತ ದೇವತೆಗಳು ರಕ್ತ ಬಿಜಾಸುರನನ್ನು ಸಂಹರಿಸುತ್ತಾರೆ. ಚಾಮುಂಡಾಂಬೆ ಈ ಸಂಭ್ರಮದಲ್ಲಿ ಭಾಗವಹಿಸುತ್ತಾಳೆ. ಇದಕ್ಕೂ ಮೊದಲು ಗ್ರಾಮಸ್ಥರು ಸುವರ್ಣಾವತಿ ನದಿಯಲ್ಲಿ ಹೊಸ ನೀರು ತಂದು, ಖೇಲು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಂಗದ ಮಾರಮ್ಮ, ದೇವಳಮ್ಮ, ಗದ್ದೆಮಾರಮ್ಮರನ್ನು ಹಬ್ಬಕ್ಕೆ ಆಹ್ವಾನಿಸುತ್ತಾರೆ.