ಗುತ್ತಿಗೆ ಪಡೆದವರು ಮತ್ತು ರೈತರು ಹಣ್ಣು ಮತ್ತು ತರಕಾರಿ ಬೆಳೆದು, ಕೊಯ್ಲಿನ ನಂತರ ಸಾಗಣೆ ಮಾಡಲಾಗದೆ, ಖರ್ಚುವೆಚ್ಚಗಳಿಗೆ ಹೆದರಿ ಹೊಲದಲ್ಲಿ ಬಿಟ್ಟಿದ್ದಾರೆ. ಆಮೆಕೆರೆ ಮತ್ತು ವಡಗೆರೆ ಸುತ್ತಮುತ್ತ ಲಕ್ಷಾಂತರ ರೂಪಾಯಿ ವ್ಯಯಿಸಿ ಉತ್ತಮ ಇಳುವರಿ ಪಡೆದರೂ ಗ್ರಾಹಕರು ಇಲ್ಲದೆ ಕೈಚೆಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಗುಣಮಟ್ಟದ ಕಲ್ಲಂಗಡಿ ಬೆಳೆದವರು ಕೊಯ್ಲು ಮಾಡಲಾಗದೆ ಬಿಟ್ಟಿದ್ದು, ಕಳೆಗಿಡಗಳ ಮಧ್ಯೆ ಹಣ್ಣು ಕೊಳೆಯುತ್ತಿದೆ.