‘ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಮಧ್ಯಾಹ್ನ ಸಿಲಿಂಡರ್ ಸಿಡಿದಾಗ ದೇವರ ಪಟದ ಮುಂದೆ ಉರಿಯುತ್ತಿದ್ದ ದೀಪಕ್ಕೆ ತಗುಲಿ ಬೆಂಕಿ ಆವರಿಸಿರುವ ಸಾಧ್ಯತೆ ಇದೆ. ಮನೆಯಲ್ಲಿ ಇದ್ದ ಒಡವೆ, ಹಣ, ಆಸ್ತಿಪತ್ರ ಹಾಗೂ ಬೆಲೆ ಬಾಳುವ ವಸ್ತುಗಳು ಸುಟ್ಟಿವೆ. ಲಕ್ಷಾಂತರ ಹಣ ನಷ್ಟವಾಗಿದೆ’ ಎಂದು ತಾಯಮ್ಮ ಅಳಲು ತೋಡಿಕೊಂಡರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.