ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಸಿಲಿಂಡರ್ ಸ್ಫೋಟ: ಹಣ, ಒಡವೆ, ಆಸ್ತಿಪತ್ರ ಭಸ್ಮ

Published 28 ಏಪ್ರಿಲ್ 2024, 14:25 IST
Last Updated 28 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಭಾನುವಾರ ಅಡುಗೆ ಅನಿಲದ ಸಿಲಿಂಡರ್  ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟುಭಸ್ಮವಾಗಿದೆ.

ಮಧ್ಯಾಹ್ನ ಬಿಸಿಲ ತಾಪ ಹೆಚ್ಚಾದ ಕಾರಣ ನಿವಾಸಿ ಸಾಕಮ್ಮ ಮನೆ ಮಂದಿ ಹೊರಗೆ ಕುಳಿತಿದ್ದರು. ಈ ವೇಳೆ ಮನೆ ಒಳ ಭಾಗದಿಂದ ಶಬ್ಧ ಕೇಳಿ ಬಂದ ತಕ್ಷಣ ಬೆಂಕಿ ಆವರಿಸಿತು. ಅಕ್ಕಪಕ್ಕದ ನಿವಾಸಿಗಳು ತಕ್ಷಣ ನೀರು,  ಮಣ್ಣು ಸುರಿದು ಬೆಂಕಿ ಇತರೆಡೆ ವ್ಯಾಪಿಸದಂತೆ ತಡೆದರು. ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿ   ಮುಂದಾಗುವ ಅನಾಹುತ ತಪ್ಪಿಸಿದರು.

‘ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಮಧ್ಯಾಹ್ನ ಸಿಲಿಂಡರ್ ಸಿಡಿದಾಗ ದೇವರ ಪಟದ ಮುಂದೆ ಉರಿಯುತ್ತಿದ್ದ ದೀಪಕ್ಕೆ ತಗುಲಿ ಬೆಂಕಿ ಆವರಿಸಿರುವ ಸಾಧ್ಯತೆ ಇದೆ. ಮನೆಯಲ್ಲಿ ಇದ್ದ ಒಡವೆ, ಹಣ, ಆಸ್ತಿಪತ್ರ ಹಾಗೂ ಬೆಲೆ ಬಾಳುವ ವಸ್ತುಗಳು ಸುಟ್ಟಿವೆ. ಲಕ್ಷಾಂತರ ಹಣ ನಷ್ಟವಾಗಿದೆ’ ಎಂದು ತಾಯಮ್ಮ ಅಳಲು ತೋಡಿಕೊಂಡರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಭಾನುವಾರ ಸಾಕಮ್ಮ ಅವರ ಮನೆಗೆ ತಗುಲಿದ ಬೆಂಕಿಯನ್ನು ನೆರೆಹೊರೆ ಜನರು ನಂದಿಸಿದರು.
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಭಾನುವಾರ ಸಾಕಮ್ಮ ಅವರ ಮನೆಗೆ ತಗುಲಿದ ಬೆಂಕಿಯನ್ನು ನೆರೆಹೊರೆ ಜನರು ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT