ಕೋವಿಡ್ ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆ ಹಾಗೂ ಪ್ರಸ್ತುತ ಕೋವಿಡ್ ಪ್ರಕರಣಗಳು, ಲಸಿಕೆ ಕಾರ್ಯದ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿಜಿಲ್ಲೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆರೋಗ್ಯ ಇಲಾಖೆಯ ಶುಶ್ರೂಕರಿಗೆ ಈಗಾಗಲೇ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳ ಆಸ್ಪತ್ರೆಯ ನಿಗಾ ಘಟಕ, ವೆಂಟಿಲೇಟರ್ಗಳ ನಿರ್ವಹಣೆ, ಇತರೆ ಚಿಕಿತ್ಸಾ ವಿಧಾನಗಳ ಕುರಿತ ತರಬೇತಿಯನ್ನುಆರೋಗ್ಯ ಇಲಾಖೆಯ ಉಳಿದ ಸಿಬ್ಬಂದಿಗೆತುರ್ತಾಗಿ ಏರ್ಪಡಿಸಬೇಕು’ ಎಂದರು.