<p><strong>ಮಹದೇಶ್ವರ ಬೆಟ್ಟ: </strong>ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ದೀಪಾವಳಿ ಹಬ್ಬದ ಆಚರಣೆ ಸಾಂಪ್ರದಾಯಿಕವಾಗಿ ಆರಂಭವಾಗಿದ್ದು, ಮೊದಲ ದಿನ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ ಪುನಸ್ಕಾರಗಳು ನಡೆದವು.</p>.<p>ಎಣ್ಣೆ ಮಜ್ಜನ ಸೇವೆಯ ಅಂಗವಾಗಿ ದೇವಾಲಯವದ ಒಳಾಂಗಣ ಹಾಗೂ ಹೊರಾಂಗಣವನ್ನು ಫಲಪುಷ್ಪಗಳಿಂದ ಶೃಂಗರಿಸಲಾಗಿತ್ತು.</p>.<p>ಪವಾಡ ಪುರುಷನಿಗೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಪೂಜೆ ಆರಂಭವಾಯಿತು. ಪುಷ್ಪಾರ್ಚನೆ, ಅಭಿಷೇಕ ಸೇವೆಗಳು ನಡೆದು ಮಹಾಮಂಗಳಾರತಿ ನೆರವೇರಿಸಲಾಯಿತು.</p>.<p>ಗುರುವಾರ ನಡೆಯಲಿರುವ ಹಾಲರವೆ ಉತ್ಸವಕ್ಕಾಗಿ ಬುಧವಾರ ಮಧ್ಯಾಹ್ನದಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮಧ್ಯಾಹ್ನ 2 ಗಂಟೆಯ ಒಳಗಾಗಿ ಸ್ವಾಮಿಯ ದರ್ಶನ ಪಡೆದರು.</p>.<p>ಮಧ್ಯಾಹ್ನ 12 ರಿಂದ 2 ಗಂಟೆ ನಡುವಿನ ಅವಧಿಯಲ್ಲಿ ಎಣ್ಣೆ ಮಜ್ಜನದ ವಿಶೇಷ ಪೂಜೆ, ರುದ್ರಾಭಿಷೇಕ, ವಿವಿಧ ಪುನಸ್ಕಾರ ನಡೆದುಮಹಾಮಂಗಳಾರತಿ ನೆರವೇರಿತು. ಸಂಜೆಯ ಹೊತ್ತಿಗೂ ದೇವಾಲಯದಲ್ಲಿ ಭಕ್ತರು ಇದ್ದರು. ಆದರೆ, ಸಂಖ್ಯೆ ತುಂಬಾ ಕಡಿಮೆ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ: </strong>ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ದೀಪಾವಳಿ ಹಬ್ಬದ ಆಚರಣೆ ಸಾಂಪ್ರದಾಯಿಕವಾಗಿ ಆರಂಭವಾಗಿದ್ದು, ಮೊದಲ ದಿನ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ ಪುನಸ್ಕಾರಗಳು ನಡೆದವು.</p>.<p>ಎಣ್ಣೆ ಮಜ್ಜನ ಸೇವೆಯ ಅಂಗವಾಗಿ ದೇವಾಲಯವದ ಒಳಾಂಗಣ ಹಾಗೂ ಹೊರಾಂಗಣವನ್ನು ಫಲಪುಷ್ಪಗಳಿಂದ ಶೃಂಗರಿಸಲಾಗಿತ್ತು.</p>.<p>ಪವಾಡ ಪುರುಷನಿಗೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಪೂಜೆ ಆರಂಭವಾಯಿತು. ಪುಷ್ಪಾರ್ಚನೆ, ಅಭಿಷೇಕ ಸೇವೆಗಳು ನಡೆದು ಮಹಾಮಂಗಳಾರತಿ ನೆರವೇರಿಸಲಾಯಿತು.</p>.<p>ಗುರುವಾರ ನಡೆಯಲಿರುವ ಹಾಲರವೆ ಉತ್ಸವಕ್ಕಾಗಿ ಬುಧವಾರ ಮಧ್ಯಾಹ್ನದಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮಧ್ಯಾಹ್ನ 2 ಗಂಟೆಯ ಒಳಗಾಗಿ ಸ್ವಾಮಿಯ ದರ್ಶನ ಪಡೆದರು.</p>.<p>ಮಧ್ಯಾಹ್ನ 12 ರಿಂದ 2 ಗಂಟೆ ನಡುವಿನ ಅವಧಿಯಲ್ಲಿ ಎಣ್ಣೆ ಮಜ್ಜನದ ವಿಶೇಷ ಪೂಜೆ, ರುದ್ರಾಭಿಷೇಕ, ವಿವಿಧ ಪುನಸ್ಕಾರ ನಡೆದುಮಹಾಮಂಗಳಾರತಿ ನೆರವೇರಿತು. ಸಂಜೆಯ ಹೊತ್ತಿಗೂ ದೇವಾಲಯದಲ್ಲಿ ಭಕ್ತರು ಇದ್ದರು. ಆದರೆ, ಸಂಖ್ಯೆ ತುಂಬಾ ಕಡಿಮೆ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>