ಅರಣ್ಯದೊಳಗೆ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಭದ್ರತೆ ನೀಡುವಷ್ಟು ಸಿಬ್ಬಂದಿ ಇಲಾಖೆಯಲ್ಲಿ ಇಲ್ಲ. ಭಕ್ತರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ಪಾದಯಾತ್ರೆ ಮಾಡುವುದು ಸೂಕ್ತವಲ್ಲ. ತೆರೆದ ಜಾಗಗಳಲ್ಲಿ ರಾತ್ರಿ ಹೊತ್ತು ಮಲಗುವುದು ಕೂಡ ಅಪಾಯಕಾರಿಯಾಗಿದ್ದು ಭಕ್ತರು ಕ್ಷೇತ್ರದ ವಸತಿಗೃಹ ತಂಗುದಾಣಗಳಲ್ಲಿ ಮಾತ್ರ ಉಳಿಯಬೇಕು. –ಭಾಸ್ಕರ್ ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್