ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪಕ್ಷ ಕಟ್ಟುವುದರಲ್ಲಿ ಯಡಿಯೂರಪ್ಪ ಅವರ ಪಾತ್ರ ಅಪಾರ. ಬಹಳ ವರ್ಷಗಳಿಂದ ಅವರನ್ನು ನೋಡಿದ್ದೇನೆ. ರೈತ ನಾಯಕರಾಗಿ ಹಲವು ಚಳವಳಿ, ಪಾದಯಾತ್ರೆಗಳನ್ನು ಮಾಡಿದ್ದಾರೆ. ಪಕ್ಷದಲ್ಲಿ ಅವರಿಗಿರುವ ಸ್ಥಾನ, ಅವರ ಮೇಲಿನ ಗೌರವವನ್ನು ಯಾವತ್ತಿಗೂ ಮರೆಯುವುದಕ್ಕಾಗುವುದಿಲ್ಲ. ಕೇಂದ್ರ ನಾಯಕರೊಂದಿಗೆ ಅವರು ಮಾತನಾಡಿದ್ದಾರೆ. ಅದರ ಫಲಶ್ರುತಿ ಗೊತ್ತಾಗಬೇಕಿದೆ’ ಎಂದರು.