<p><strong>ಚಾಮರಾಜನಗರ</strong>: ಜಿಲ್ಲೆಯಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಸಂಭ್ರಮ ಮನೆ ಮಾಡಿತ್ತು. ಒಂದು ತಿಂಗಳು ಕಠಿಣ ಉಪವಾಸ ಆಚರಿಸಿದ್ದ ಮುಸ್ಲಿಮರು ಉಪವಾಸಕ್ಕೆ ತೆರೆ ಎಳೆದು ಸಂಭ್ರಮದಿಂದ ಹಬ್ಬ ಆಚರಿಸಿದರು.</p>.<p>ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಎಲ್ಲ ಮಸೀದಿಗಳಲ್ಲಿ ಈದ್ ನಿಮಿತ್ತ ವಿಶೇಷ ನಮಾಜ್ ಸಲ್ಲಿಸಲಾಯಿತು.</p>.<p>ಧರ್ಮಗುರುಗಳು ರಂಜಾನ್ ಮಾಸದ ಮಹತ್ವವನ್ನು ತಿಳಿಸಿದರು.</p>.<p>‘ಅಲ್ಲಾಹುವಿನ ಅಣತಿಯಂತೆ ಜೀವನದಲ್ಲಿ ಉತ್ತಮ ಕಾರ್ಯಗಳಲ್ಲಿ ನಿರತರಾಗಬೇಕು, ನೆರೆ ಹೊರೆಯವರು ಸಹಿತ ಸಮಾಜದ ಪ್ರತಿಯೊಬ್ಬರ ಜೊತೆ ಸೌಹಾರ್ದಯುತವಾಗಿ ಬದುಕಬೇಕು. ನಡೆ– ನುಡಿ ಶುದ್ಧವಾಗಿರಬೇಕು, ಪ್ರೀತಿ– ವಿಶ್ವಾಸ ತೋರಬೇಕು, ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು’ ಎಂದು ಮೌಲ್ವಿಗಳು ಕರೆ ನೀಡಿದರು.</p>.<p>ಸಾಮೂಹಿಕ ಪ್ರಾರ್ಥನೆ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದು ಹಬ್ಬದ ಶುಭಾಶಯ ಕೋರಿದರು.</p>.<p>ಈ ಸಂದರ್ಭ ಶಾಸಕರನ್ನು ಈದ್ಗಾ ನಿರ್ವಹಣಾ ಸಮಿತಿ ವತಿಯಿಂದ ಗೌರವಿಸಿ, ಹೆಚ್ಚಿನ ಅನುದಾನ ಮಂಜೂರಾತಿ ಕೋರಿ ಈದ್ಗಾ ಅಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಮಹಿಳೆಯರಿಗೂ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.</p>.<p>ಈ ಸಂದರ್ಭ ಜಾಮಿಯಾ ಮಸೀದಿ ಅಧ್ಯಕ್ಷ ಅಕ್ರಂ ಪಾಷಾ, ಕಾರ್ಯದರ್ಶಿ ಆಸೀಫ್ ಉಲ್ಲಾ, ಮುಖಂಡರಾದ ನಯಾಜ್ ಅಹ್ಮದ್, ಮಹಮ್ಮದ್, ಜಾವೀದ್ ಸೇರಿದಂತೆ ಹಲವರು ಇದ್ದರು.</p>.<p><strong>ಖರೀದಿ ಭರಾಟೆ ಜೋರು:</strong> ಈದ್ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಬಟ್ಟೆ ಮಾರಾಟ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದರು.</p>.<p><strong>ಮಾಂಸಕ್ಕೆ ಬೇಡಿಕೆ:</strong> ಹಬ್ಬಕ್ಕೆ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು, ನಗರದ ಮಾಂಸದ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಹೆಚ್ಚಿನವರು ಮುಂಚಿತವಾಗಿ ಗ್ರಾಮಾಂತರ ಭಾಗಗಳಿಂದ ಕುರಿ, ಮೇಕೆ, ಟಗರು ಖರೀದಿಸಿದ್ದರು.</p>.<p>ತರಹೇವಾರಿ ಖಾದ್ಯಗಳು: ಹಬ್ಬಕ್ಕೆ ಬಿರಿಯಾನಿ ಸಹಿತ ತರಹೇವಾರಿ ಮಾಂಸದ ಖಾದ್ಯಗಳನ್ನು ಸಿದ್ಧಪಡಿಸಿದ್ದ ಮುಸ್ಲಿಮರು ನೆರೆಹೊರೆಯವರೊಂದಿಗೆ ಸೇರಿ ಭೋಜನ ಸವಿದರು.</p>.<p>ಬಡವರಿಗೆ, ಅಶಕ್ತರಿಗೆ ಜಕಾತ್ ಸಹಿತ, ಆಹಾರ ಪದಾರ್ಥಗಳ ಕಿಟ್ ಹಂಚಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯಾದ್ಯಂತ ಸೋಮವಾರ ಈದ್ ಉಲ್ ಫಿತ್ರ್ ಸಂಭ್ರಮ ಮನೆ ಮಾಡಿತ್ತು. ಒಂದು ತಿಂಗಳು ಕಠಿಣ ಉಪವಾಸ ಆಚರಿಸಿದ್ದ ಮುಸ್ಲಿಮರು ಉಪವಾಸಕ್ಕೆ ತೆರೆ ಎಳೆದು ಸಂಭ್ರಮದಿಂದ ಹಬ್ಬ ಆಚರಿಸಿದರು.</p>.<p>ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಎಲ್ಲ ಮಸೀದಿಗಳಲ್ಲಿ ಈದ್ ನಿಮಿತ್ತ ವಿಶೇಷ ನಮಾಜ್ ಸಲ್ಲಿಸಲಾಯಿತು.</p>.<p>ಧರ್ಮಗುರುಗಳು ರಂಜಾನ್ ಮಾಸದ ಮಹತ್ವವನ್ನು ತಿಳಿಸಿದರು.</p>.<p>‘ಅಲ್ಲಾಹುವಿನ ಅಣತಿಯಂತೆ ಜೀವನದಲ್ಲಿ ಉತ್ತಮ ಕಾರ್ಯಗಳಲ್ಲಿ ನಿರತರಾಗಬೇಕು, ನೆರೆ ಹೊರೆಯವರು ಸಹಿತ ಸಮಾಜದ ಪ್ರತಿಯೊಬ್ಬರ ಜೊತೆ ಸೌಹಾರ್ದಯುತವಾಗಿ ಬದುಕಬೇಕು. ನಡೆ– ನುಡಿ ಶುದ್ಧವಾಗಿರಬೇಕು, ಪ್ರೀತಿ– ವಿಶ್ವಾಸ ತೋರಬೇಕು, ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು’ ಎಂದು ಮೌಲ್ವಿಗಳು ಕರೆ ನೀಡಿದರು.</p>.<p>ಸಾಮೂಹಿಕ ಪ್ರಾರ್ಥನೆ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಜರಿದ್ದು ಹಬ್ಬದ ಶುಭಾಶಯ ಕೋರಿದರು.</p>.<p>ಈ ಸಂದರ್ಭ ಶಾಸಕರನ್ನು ಈದ್ಗಾ ನಿರ್ವಹಣಾ ಸಮಿತಿ ವತಿಯಿಂದ ಗೌರವಿಸಿ, ಹೆಚ್ಚಿನ ಅನುದಾನ ಮಂಜೂರಾತಿ ಕೋರಿ ಈದ್ಗಾ ಅಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಮಹಿಳೆಯರಿಗೂ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.</p>.<p>ಈ ಸಂದರ್ಭ ಜಾಮಿಯಾ ಮಸೀದಿ ಅಧ್ಯಕ್ಷ ಅಕ್ರಂ ಪಾಷಾ, ಕಾರ್ಯದರ್ಶಿ ಆಸೀಫ್ ಉಲ್ಲಾ, ಮುಖಂಡರಾದ ನಯಾಜ್ ಅಹ್ಮದ್, ಮಹಮ್ಮದ್, ಜಾವೀದ್ ಸೇರಿದಂತೆ ಹಲವರು ಇದ್ದರು.</p>.<p><strong>ಖರೀದಿ ಭರಾಟೆ ಜೋರು:</strong> ಈದ್ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಬಟ್ಟೆ ಮಾರಾಟ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದರು.</p>.<p><strong>ಮಾಂಸಕ್ಕೆ ಬೇಡಿಕೆ:</strong> ಹಬ್ಬಕ್ಕೆ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು, ನಗರದ ಮಾಂಸದ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಹೆಚ್ಚಿನವರು ಮುಂಚಿತವಾಗಿ ಗ್ರಾಮಾಂತರ ಭಾಗಗಳಿಂದ ಕುರಿ, ಮೇಕೆ, ಟಗರು ಖರೀದಿಸಿದ್ದರು.</p>.<p>ತರಹೇವಾರಿ ಖಾದ್ಯಗಳು: ಹಬ್ಬಕ್ಕೆ ಬಿರಿಯಾನಿ ಸಹಿತ ತರಹೇವಾರಿ ಮಾಂಸದ ಖಾದ್ಯಗಳನ್ನು ಸಿದ್ಧಪಡಿಸಿದ್ದ ಮುಸ್ಲಿಮರು ನೆರೆಹೊರೆಯವರೊಂದಿಗೆ ಸೇರಿ ಭೋಜನ ಸವಿದರು.</p>.<p>ಬಡವರಿಗೆ, ಅಶಕ್ತರಿಗೆ ಜಕಾತ್ ಸಹಿತ, ಆಹಾರ ಪದಾರ್ಥಗಳ ಕಿಟ್ ಹಂಚಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>