<p><strong>ಕೊಳ್ಳೇಗಾಲ:</strong> ನಗರದಲ್ಲಿ ರಂಜಾನ್ ಮಾಸದ ಕೊನೆಯ ದಿನ ಈದ್ ಉಲ್ ಫಿತ್ರ್ ಅನ್ನು ಸಡಗರದಿಂದ ಆಚರಿಸಲಾಯಿತು.</p>.<p>ಈದ್ ಪ್ರಯುಕ್ತ ಸೋಮವಾರ ನಗರದ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ಅಲ್ಲಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಧರ್ಮಗುರು ಹಜರತ್ ಅಬ್ದುಲ್ ತವಾಬ್ ಅವರು ಸಾಮೂಹಿಕ ನಮಾಜ್ ಪಠಿಸಿದರು. ಧರ್ಮ ಗುರು ಶೊಯೇಬ್ ಅಲಿ ಅವರು ಧರ್ಮ ಪ್ರವಚನ ಬೋಧಿಸಿದರು. ನಂತರ ಸಮೀಪದಲ್ಲಿರುವ ಸಮಾಧಿಗಳಿಗೆ ತೆರಳಿದ ಮುಸ್ಲಿಮರು ತಮ್ಮ ಪೂರ್ವಜರ ಮುಕ್ತಿಗಾಗಿ ಪ್ರಾರ್ಥಿಸಿದರು.</p>.<p>‘ದೇಶಕ್ಕಾಗಿ ಹಾಗೂ ಈ ಬಾರಿ ಉತ್ತಮ ಮಳೆ, ಬೆಳೆಗಾಗಿ ಬಡವರಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇವೆ’ ಎಂದು ಯುವ ಮುಖಂಡ ಮೊಹಮ್ಮದ್ ಜುಹೇಬ್ ತಿಳಿಸಿದರು.</p>.<p>ಪ್ರಾರ್ಥನೆ ಮುಗಿದ ನಂತರ ವಾಪಸ್ ಖುದ್ದೂಸಿಯ ಮಸೀದಿಗೆ ತೆರಳಿದರು. ಈ ಸಂದರ್ಭದಲ್ಲಿ ವಿವಿಧ ಧರ್ಮಗಳ ಮುಖಂಡರು ಆಗಮಿಸಿ ಮುಸ್ಲಿಮರಿಗೆ ಈದ್-ಉಲ್-ಫಿತ್ರ್ ಶುಭಾಶಯಗಳನ್ನು ಕೋರಿದರು.</p>.<p>ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಾಂತರಾಜು, ನಾಶೀರ್ ಷರೀಫ್, ನಾಮನಿರ್ದೇಶಿತ ಸದಸ್ಯ ದೇವಾನಂದ, ಪುಟ್ಟ ಅರಸಶೆಟ್ಟಿ, ಜಗದೀಶ್, ಈಶ್ವರ್, ಜೊಸೇಫ್ ಫರ್ನಾಂಡಿಸ್, ಚಿಕ್ಕಮಾದು, ಸನಾವುಲ್ಲಾ, ರಫೀಕ್ ಅಹಮದ್, ಅಕ್ಮಲ್, ಫಾಯಿಕ್ ಅಹಮ್ಮದ್, ಎಜಾಜ್ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong> ನಗರದಲ್ಲಿ ರಂಜಾನ್ ಮಾಸದ ಕೊನೆಯ ದಿನ ಈದ್ ಉಲ್ ಫಿತ್ರ್ ಅನ್ನು ಸಡಗರದಿಂದ ಆಚರಿಸಲಾಯಿತು.</p>.<p>ಈದ್ ಪ್ರಯುಕ್ತ ಸೋಮವಾರ ನಗರದ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ಅಲ್ಲಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಧರ್ಮಗುರು ಹಜರತ್ ಅಬ್ದುಲ್ ತವಾಬ್ ಅವರು ಸಾಮೂಹಿಕ ನಮಾಜ್ ಪಠಿಸಿದರು. ಧರ್ಮ ಗುರು ಶೊಯೇಬ್ ಅಲಿ ಅವರು ಧರ್ಮ ಪ್ರವಚನ ಬೋಧಿಸಿದರು. ನಂತರ ಸಮೀಪದಲ್ಲಿರುವ ಸಮಾಧಿಗಳಿಗೆ ತೆರಳಿದ ಮುಸ್ಲಿಮರು ತಮ್ಮ ಪೂರ್ವಜರ ಮುಕ್ತಿಗಾಗಿ ಪ್ರಾರ್ಥಿಸಿದರು.</p>.<p>‘ದೇಶಕ್ಕಾಗಿ ಹಾಗೂ ಈ ಬಾರಿ ಉತ್ತಮ ಮಳೆ, ಬೆಳೆಗಾಗಿ ಬಡವರಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇವೆ’ ಎಂದು ಯುವ ಮುಖಂಡ ಮೊಹಮ್ಮದ್ ಜುಹೇಬ್ ತಿಳಿಸಿದರು.</p>.<p>ಪ್ರಾರ್ಥನೆ ಮುಗಿದ ನಂತರ ವಾಪಸ್ ಖುದ್ದೂಸಿಯ ಮಸೀದಿಗೆ ತೆರಳಿದರು. ಈ ಸಂದರ್ಭದಲ್ಲಿ ವಿವಿಧ ಧರ್ಮಗಳ ಮುಖಂಡರು ಆಗಮಿಸಿ ಮುಸ್ಲಿಮರಿಗೆ ಈದ್-ಉಲ್-ಫಿತ್ರ್ ಶುಭಾಶಯಗಳನ್ನು ಕೋರಿದರು.</p>.<p>ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಾಂತರಾಜು, ನಾಶೀರ್ ಷರೀಫ್, ನಾಮನಿರ್ದೇಶಿತ ಸದಸ್ಯ ದೇವಾನಂದ, ಪುಟ್ಟ ಅರಸಶೆಟ್ಟಿ, ಜಗದೀಶ್, ಈಶ್ವರ್, ಜೊಸೇಫ್ ಫರ್ನಾಂಡಿಸ್, ಚಿಕ್ಕಮಾದು, ಸನಾವುಲ್ಲಾ, ರಫೀಕ್ ಅಹಮದ್, ಅಕ್ಮಲ್, ಫಾಯಿಕ್ ಅಹಮ್ಮದ್, ಎಜಾಜ್ ಸೇರಿದಂತೆ ಅನೇಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>