‘ಸೋಮವಾರ ಬೆಳಿಗ್ಗೆ 6 ಗಂಟೆಗೆ ರಂಗಸ್ವಾಮಿ ಎಂದಿನಂತೆ ಜಮೀನಿಗೆ ಕೃಷಿ ಕೆಲಸಕ್ಕೆ ಹೋಗಿದ್ದಾರೆ. ಆಗ ನೆರೆ ಪರಿಸ್ಥಿತಿ ಇರಲಿಲ್ಲ. 11 ಗಂಟೆಗೆ ವಾಪಸ್ ಬರುವ ಹೊತ್ತಿಗೆ ನೀರಿನ ಮಟ್ಟ ಹೆಚ್ಚಿ ಪ್ರವಾಹ ಉಂಟಾಗಿತ್ತು. ನೀರು ಇಳಿದ ನಂತರ ಹೋಗೋಣ ಎಂದು ಅಲ್ಲೇ ಕುಳಿತಿದ್ದರು. ಆದರೆ, ಮಧ್ಯಾಹ್ನ, ಸಂಜೆಯ ಹೊತ್ತಿಗೆ ನೆರೆ ಮತ್ತಷ್ಟು ಹೆಚ್ಚಾಯಿತು. ಇದರಿಂದ ಅವರಿಗೆ ವಾಪಸ್ ಬರುವುದಕ್ಕೆ ಆಗಿಲ್ಲ’ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.